crossorigin="anonymous"> ನೆಲಗಡಲೆ ಜ್ಯೂಸ್ – ಇದು ಸದ್ಗುರು ಕೊಟ್ಟ ಆರೋಗ್ಯ ಟಿಪ್ಸ್ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ನೆಲಗಡಲೆ ಜ್ಯೂಸ್ – ಇದು ಸದ್ಗುರು ಕೊಟ್ಟ ಆರೋಗ್ಯ ಟಿಪ್ಸ್

Radhakrishna Anegundi by Radhakrishna Anegundi
17-08-21, 5 : 54 am
in ಆರೋಗ್ಯ / ಆಹಾರ
groundnut juice
Share on FacebookShare on TwitterWhatsAppTelegram

ನೆಲಗಡಲೆ ಜ್ಯೂಸ್ (ಶೇಂಗಾ ಜ್ಯೂಸ್)ಆರೋಗ್ಯಕ್ಕೂ ಉತ್ತಮ ಹಾಗೂ ದಿನವಿಡಿ ಸೇವಿಸುವ ಆಹಾರಕ್ಕಿಂತ ಹೆಚ್ಚಿನ ಪೌಷ್ಟಿಕಾಂಶ ಕೇವಲ ಒಂದು ಜ್ಯೂಸ್ ನಲ್ಲಿ ಸಿಗುತ್ತದೆ. ಇತ್ತೀಚೆಗೆ ಸದ್ಗುರು ಅವರ ವೀಡಿಯೋವೊಂದನ್ನು ನೋಡುವಾಗ ಅದರಲ್ಲಿ ನೆಲಗಡಲೆ ಜ್ಯೂಸ್ ಮಾಡುವುದನ್ನು ನೋಡಿ ಟ್ರೈ ಮಾಡಿ ನೋಡಬೇಕು ಅನ್ನಿಸಿ ಮಾಡಿ ನೋಡಿದಾಗ ನಿಜಕ್ಕೂ ಆಶ್ಚರ್ಯವೆನಿಸಿತು.

ಬೆಳಗ್ಗೆಂದು ತಿಂಡಿ ತಿಂದು ಹೊರಡಲು ಸಮಯ ಸಾಕಾಗದೆ ಸ್ವಲ್ಪ ಲೇಟಾಗಿ ಮನೆಯಲ್ಲಿರುವವರು ಎದ್ದರೆ ಹೊಟ್ಟೆ ಖಾಲಿಯಿದ್ದಾಗ ಕೆಲಸ ಮಾಡಲಾಗದಂತಹ ಪರಿಸ್ಥಿತಿ ಹಲವರಿಗೆ ಕಾಡುತ್ತದೆ.ಅದರಲ್ಲೂ ಸೇಲ್ಸ್ ಹಾಗೂ ಕೌಂಟರ್ ಸೇಲ್ಸ್ ಮಾಡುವವರ ಮುಖದಲ್ಲಿ ಚೂರು ನಗುವಿಲ್ಲದೆ ಸಪ್ಪಗಿದ್ದರೆ ಹಾಗೂ ಮುಖ ಬಾಡಿದಂತೆ ಇದ್ದರೆ ಯಾರೂ ಅಷ್ಟಾಗಿ ಅವರನ್ನು ಗಮನಿಸುವುದಿಲ್ಲ ಕಷ್ಟವಿದ್ದರೂ ಒಳಗೆ ನೂರಾರು ನೋವಿದ್ದರೂ ಹೊರಜಗತ್ತು ನಗುಮುಖವನ್ನು ಮಾತ್ರ ಇಷ್ಟಪಡುತ್ತದೆ,ಎಂಬ ಸತ್ಯ ಹೊರಗಡೆ ಕೆಲಸ ಮಾಡುವವರಿಗೆ ಚೆನ್ನಾಗಿ ಗೊತ್ತು.ಮುಖದ ಕಳೆ fair & Lovely ಅಥವಾ ಬಳಸುವ ಸೋಪುಗಳಿಂದ ಹೆಚ್ಚುವುದಿಲ್ಲ ಸೇವಿಸುವ ಆಹಾರಗಳಿಂದ ಎಂಬುದು ಆಯುರ್ವೇದ ವೈದ್ಯರು ಹೇಳುವುದು.

ಬ್ಯಾಚುಲರ್ ಇದ್ದಾಗಂತೂ ತಿಂಡಿಯನ್ನೇ ಮರೆತುಬಿಡುವವರೂ ಇದ್ದಾರೆ.ಹೆಂಡತಿ ಅಥವಾ ಅಮ್ಮ ಮನೆಯಲ್ಲಿಲ್ಲದಿದ್ದರೆ ಅಡುಗೆ ಮನೆಗೆ ಹೋಗಲು ಉದಾಸೀನ ಮಾಡುವ ನನ್ನಂತವರಿಗೆ ಹತ್ತು ಗಂಟೆಯ ನಂತರ ದೇಹವೆಲ್ಲ ಸುಸ್ತಾಗಿ ಹಸಿವು ಮತ್ತು ದೇಹದ ಶಕ್ತಿ ಕ್ಷೀಣವಾಗಿ ಮಧ್ಯಾಹ್ನವಾಗುವುದನ್ನೇ ಕಾಯುವಂತಹ ಪರಿಸ್ಥಿತಿ.ಹೋಟೆಲ್ ಊಟ ದಿನವೂ ಮಾಡುವವರಿಗೆ ಸೋಡಾ ಅಥವಾ ಟೇಸ್ಟಿಂಗ್ ಪೌಡರ್ ಹಾಕಿದ ಆಹಾರ ರುಚಿಗಲ್ಲದೆ ದೇಹಕ್ಕೆ ಪುಷ್ಟಿ ನೀಡುವ ಯಾವುದೇ ಆಹಾರ ಸಿಗುವುದಿಲ್ಲ.

groundnut juice2

ನೆಲಗಡಲೆಯನ್ನು ರಾತ್ರಿ ನೆನೆಸಿಟ್ಟು ಅದಕ್ಕೆ ಒಳ್ಳೆ ಹಣ್ಣಾದ ಬಾಳೆಹಣ್ಣು ಹಾಗೂ ಒಂದೆರಡು ಸ್ಪೂನ್ ಶುದ್ದ ಜೇನುತುಪ್ಪ ಹಾಕಿ ಕುಡಿದರೆ ದೇಹದ ಶಕ್ತಿ ಕುಂದುವುದಿಲ್ಲ ಇದನ್ನು ಪ್ರಾಯೋಗಿಕವಾಗಿ ಮಾಡಿನೋಡಿದಾಗ ಹೌದು ಎಂದು ಮನವರಿಕೆಯಾದಾಗ ಬರೆದು ಹಂಚಿಕೊಂಡೆ.

ನೆಲಗಡಲೆ ರಾತ್ರಿ ನೆನೆಸಿದರೆ ಅದರ ಪಿತ್ತ ಉತ್ಪಾದನಾ ಆಂಶ ಕಡಿಮೆಯಾಗುತ್ತದೆ.ಬಡವರ ಬಾದಾಮಿ‌ ಶೇಂಗಾ ಎಂದು ಉತ್ತರ ಕರ್ನಾಟಕದಲ್ಲಿ‌ ಪ್ರಾಶಸ್ತ್ಯ ಹೊಂದಿರುವ  ನೆಲಗಡಲೆ ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾಗಿ ಕೈಕಾಲು ಸುಸ್ತುನಿಶ್ಯಕ್ತಿಹೊಂದುವುದನ್ನು ತಡೆಗಟ್ಟುತ್ತದೆ.ಬಾಳೆಹಣ್ಣಿನಲ್ಲಿಯೂ ಉತ್ತಮ ಪೋಶಕಾಂಶಗಳಿದ್ದು ಉತ್ತಮ ಪಚನಕ್ರಿಯೆ ಹೊಂದುವಂತೆ ಮಾಡುತ್ತದೆ.ಜೇನು ತುಪ್ಪ ದೇಹದಲ್ಲಿ ಕಫ ಉತ್ಪಾದನೆಯ ಪ್ರಮಾಣವನ್ನು ಕಡಿಮೆಮಾಡಿ ದೇಹದ ಆಲಸ್ಯವನ್ನು ನಿವಾರಿಸುತ್ತದೆ.

ಸುಲಭವಾಗಿ ಮಾಡಬಹುದಾದ ನೆಲಗಡಲೆ ಜ್ಯೂಸ್..

ರಾತ್ರಿ ಒಂದು ಹಿಡಿಯಷ್ಟು ನೆಲಗಡಲೆಯನ್ನು ನೆನೆಸಿಟ್ಟು ಬೆಳಗ್ಗೆ ಅದಕ್ಕೆ ಹಣ್ಣಾಗಿರುವ ಬಾಳೆಹಣ್ಣು ಯಾವುದೇ ತಳಿಯಾದರೂ ಸರಿ ಅದನ್ನು ಚಿಕ್ಕದಾಗಿ ಹಚ್ಚಿಕೊಂಡು ಮಿಕ್ಸಿಯಲ್ಲಿ ಮಾಮಾಲಿ ಜ್ಯೂಸ್ ನಂತೆ ನೀರು ಅಥವಾ ಹಾಲು ಬೇಕಾದರೂ ಸ್ವಲ್ಪ ಸೇರಿಸಿ ಅದಕ್ಕೆ ಜೇನುತುಪ್ಪ ಹಾಕಿ ಬೆರೆಸಿ ಕುಡಿದುನೋಡಿ.ಬೇರೇನೂ ತಿಂಡಿ ಸೇವಿಸದಿದ್ದರೂ ಕನಿಷ್ಟ ಐದಾರು ಗಂಟೆಗಳ ಕಾಲ ದೇಹ ಹಸಿವಿನಿಂದ ಬಳಲದೇ ಬೆಳಗ್ಗೆ ಏಳುವಾಗ ಇರುವಾಗ ಇರುವ ಉತ್ಸಾಹ ದೇಹದಲ್ಲಿರುತ್ತದೆ.

groundnut juice1

ಸತತ ದಿನಾ ಬೆಳಗ್ಗೆ ಮಾಡಿ ಕುಡಿಯುವವರಿಗೆ ಮಧ್ಯಾಹ್ನದವರೆಗೆ ಬೇರೆ ಆಹಾರದ ಅಗತ್ಯವೂ ಇರುವುದಿಲ್ಲ.ನಿಮ್ಮ ಮುಖ ಕಳೆಗುಂದದೇ ದೇಹವೂ ಪುನಶ್ಚೇತನ ಹೊಂದುತ್ತಿರುತ್ತದೆ. ಹೊಟ್ಟೆತುಂಬಲು ಬಹಳ ಆಹಾರವಿದ್ದರೂ ದೇಹಕ್ಕೆ ಪೌಷ್ಟಿಕಾಹಾರದ ಕೊರತೆ ಕಾಡುವವರಿಗಿದು ಉತ್ತಮ. ಮಕ್ಕಳಿಗೂ ಎಲ್ಲಾ ಪ್ರಾಯದವರಿಗೂ ಸೇವಿಸಬಹುದು.

ಬರಹ : ದಯಾ ಆಕಾಶ್ ಕಾಸರಗೋಡು

Tags: groundnut
ShareTweetSendShare

Discussion about this post

Related News

Benefits of ghee 15-amazing-health-benefits

Benefits of ghee : ನಿತ್ಯ ಒಂದು ಚಮಚ ದೇಶಿ ದನದ ತುಪ್ಪ ತಿಂದ್ರೆ ಲಾಭ ಸಾವಿರಾರು

cracked heels ayurvedic-remedies

cracked heels : ಅಡುಗೆ ಮನೆಯೇ ಆಸ್ಪತ್ರೆ : ಹಿಮ್ಮಡಿ ಬಿರುಕಿಗೆ ಸಿಂಪಲ್ ಪರಿಹಾರ

high blood pressure home remedies

High blood pressure : ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಸರಳ ಸೂತ್ರ

ಅತೀಯಾದ ಬಿಸ್ಕೆಟ್ ಸೇವನೆಯಿಂದ ಕ್ಯಾನ್ಸರ್ ಬರಲಿದೆ : ಕ್ಯಾನ್ಸರ್ ಕಾರಕ ಅಂಶಗಳಿರೋ ಬಿಸ್ಕೆಟ್ ಯಾವುದು ಗೊತ್ತಾ…?

100 ವರ್ಷದ ಸಂಶೋಧನೆಗೆ ಸಿಕ್ತು ಫಲ : ಕೊನೆಗೂ ಮಲೇರಿಯಾ ಸೋಲಿಸುವ ಲಸಿಕೆ ಸಂಶೋಧನೆ

2030ಕ್ಕೆ ಹೃದ್ರೋಗದಲ್ಲಿ ಭಾರತವೇ ನಂಬರ್ 1

ಡಯಾಬಿಟಿಸ್ ಕ್ಯಾಪಿಟಲ್ ಆಗುತ್ತಾ ಬೆಂಗಳೂರು… BBMP ಸರ್ವೇಯಲ್ಲಿ ಸ್ಫೋಟಕ ಮಾಹಿತಿ

ರೂಪಾಂತರಿಗೊಂಡ ಡೆಂಘೀ ವೈರಸ್ : ರಾಜ್ಯಕ್ಕೂ ಕಾದಿದೆ ಅಪಾಯ

ಹವಮಾನ ವರದಿಯ ನೇರ ಪ್ರಸಾರದಲ್ಲಿ ಟಿವಿ ಪರದೆ ಮೇಲೆ ಕಾಣಿಸಿಕೊಂಡ ನಾಯಿ ಮರಿ

ವಿದ್ಯಾರ್ಥಿ ಭವನಕ್ಕೆ ಶುಕ್ರವಾರ ರಜೆ ಯಾಕೆ…?

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್