ಕಳೆದ ವರ್ಷ ಕೇರಳದ ಭಗವತಿ ಅಮ್ಮ ದೇವಸ್ಥಾನಕ್ಕೆ ಬರೋಬ್ಬರಿ 700 ಕೋಟಿ ರೂಪಾಯಿ ದೇಣಿಗೆ ನೀಡಲು ಮುಂದಾಗಿದ್ದ ಬೆಂಗಳೂರಿನ ಉದ್ಯಮಿಯೊಬ್ಬರು ಸುದ್ದಿಯಾಗಿದ್ದರು. ಆಗ ದೇಣಿಗೆ ಕೊಡಲು ಮುಂದಾಗಿದ್ದ ಅದೇ ಗಾನ ಶ್ರವಣ್ ಸ್ವಾಮೀಜಿ ಇದೀಗ ಇದೀಗ 500 ಕೋಟಿ ಮೊತ್ತದ ಬಿಗ್ ಬಜೆಟ್ ನಿರ್ಮಿಸಲು ಮುಂದಾಗಿದ್ದಾರೆ.
ಗಾನ ಶ್ರವಣ್ ಸ್ವಾಮೀಜಿ ನಿರ್ಮಿಸಲು ಮುಂದಾಗಿರುವ ಸಿನಿಮಾಗೆ ‘ಕೃಷ್ಣರಾಜ 4’ ಅನ್ನುವ ಟೈಟಲ್ ಕೂಡಾ ಫಿಕ್ಸ್ ಆಗಿದ್ದು ರಾಜಮೌಳಿ ಮೀರಿಸೋ ನಿರ್ದೇಶಕನಿಗಾಗಿ ಹುಡುಕಾಟ ಪ್ರಾರಂಭವಾಗಿದೆ. ಬಾಹುಬಲಿಯನ್ನು ಮೀರಿಸುವ ಸಿನಿಮಾ ನಮ್ಮದಾಗಬೇಕು ಅನ್ನುವುದು ಶ್ರವಣ್ ಸ್ವಾಮೀಜಿ ಕನಸು.
ಈಗಾಗಲೇ ಕೆಜಿಎಫ್, ಕಬ್ಜ ಹೀಗೆ ಒಂದಿಷ್ಟು ಸಿನಿಮಾಗಳು ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾಗಿದೆ. ಆದರೆ ಬಾಹುಬಲಿಯನ್ನು ಮೀರಿಸಲು ಸಾಧ್ಯವಾಗಿಲ್ಲ. ಈ ಹಿನ್ನಲೆಯಲ್ಲಿ ಕೃಷ್ಣರಾಜ 4 ಬಾಹುಬಲಿಯನ್ನು ಮೀರಿಸುವಂತೆ ನಿರ್ಮಾಣವಾಗಲಿದೆಯಂತೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಇದಕ್ಕಾಗಿ ಮೈಸೂರಿನಲ್ಲಿ ಅದ್ದೂರಿ ಸೆಟ್ ನಿರ್ಮಾಣವಾಗಲಿದೆ. ವಿಶೇಷ ಅಂದ್ರೆ ಸೆಟ್ ಸಲುವಾಗಿ ಮೈಸೂರಿನಲ್ಲಿ 640 ಎಕರೆ ಜಮೀನು ಖರೀದಿಸಿಲಿದ್ದಾರಂತೆ ನಿರ್ಮಾಪಕರು.

ಜಿಎಸ್ಆರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲಿದ್ದು, ಅದಿತಿ ಅವರು ಸಹ ನಿರ್ಮಾಪಕಿ ಆಗಿದ್ದಾರೆ. ಒಟ್ಟಿನಲ್ಲಿ ಬಾಹುಬಲಿಯನ್ನು ಮೀರಿಸುವ ಸಿನಿಮಾವೊಂದನ್ನು ತಯಾರಿಸಲು ಹೊರಟಿರುವ ಸಾಧಕನಿಗೆ ಶುಭವಾಗಲಿ.
Discussion about this post