ಅಷ್ಟಮಿ ಬಂತು ಅಂದರೆ ಸಾಕು ಕೃಷ್ಣ ಭಕ್ತರಿಗೆ ಸಂಭ್ರಮವೋ ಸಂಭ್ರಮ.ಇತ್ತೀಚಿನ ದಿನಗಳಲ್ಲಿ ಕೃಷ್ಣಾಷ್ಟಮಿಯ ದಿನದಂದು ವಿಶಿಷ್ಟ ಕಾರ್ಯಕ್ರಮಗಳನ್ನು ಹಲವು ಕಡೆ ಹಮ್ಮಿಕೊಳ್ಳುತ್ತಿರುವುದರಿಂದ ಈ ಸಂಭ್ರಮಕ್ಕೆ ಮತ್ತಷ್ಟು ಕಳೆ ಬಂದಿದೆ.ಜೊತೆಗೆ ಕೃಷ್ಣ ವೇಷ ಸ್ಪರ್ಧೆಗಳನ್ನು ಆಯೋಜಿಸುತ್ತಿರುವುದರಿಂದ ಕೃಷ್ಣ ಜನ್ಮಾಷ್ಟಮಿ ಇದೀಗ ಕಲರ್ ಫುಲ್ ಆಗಿದೆ.
Buy Fitness & Sports Accessories starting from Rs.149
ಈ ನಡುವೆ ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೃಷ್ಣ ವೇಷಧಾರಿಯೊಬ್ಬಳ ಫೋಟೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಈಕೆಯ ಡಿಪಿ ರಾರಾಜಿಸುತ್ತಿದೆ. ಕೃಷ್ಣನನ್ನೇ ನಾಚಿಸುವಂತೆ ಮಾಡಿದ ಅಭಿನಯ ಇದೀಗ ನ್ಯಾಷನಲ್ ಕ್ರಶ್ ಆಗಿದೆ.
ಹಾಗಾದರೆ ಯಾರಪ್ಪ ಈ ಹುಡುಗಿ ಅನ್ನುವುದನ್ನು ನೋಡಿದರೆ ಈಕೆ ಅದ್ಭುತ ನಾಟ್ಯ ಕಲಾವಿದೆಯಾಗಿದ್ದು, ಗುರುವಾಯೂರು ದೇವಸ್ಥಾನದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎಂದಿಗೂ ಮಿಸ್ ಮಾಡಿಕೊಳ್ಳುವುದಿಲ್ಲ. ಅದರಲ್ಲೂ ಕೃಷ್ಣ ಜನ್ಮಾಷ್ಟಮಿಯ ದಿನದಂದು ಈಕೆಯ ಟೀಮ್ ಅದ್ಭುತ ಸಾಂಸ್ಕೃತಿಕ ಕಾರ್ಯಕ್ರಮ ನೀಡುತ್ತದೆ.
ಈ ಹುಡುಗಿಯ ಹೆಸರು ವೈಷ್ಣವ ಕೆ ಸುನೀಲ್ . ತ್ರಿಶೂರ್ ಜಿಲ್ಲೆಯ ನಿವಾಸಿ ಅನ್ನುವುದು ಗೊತ್ತಾಗಿದೆ.
ಆದರೆ ಈ ಬಾರಿ ಅಮರನಾಥ್ ಕಡಂಪುಳ್ಳೆ ಅನ್ನುವ ಫೋಟೋ ಗ್ರಾಫರ್ ಈಕೆಯ ಅದ್ಭುತ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ವರ್ಷ ಅಪ್ ಲೋಡ್ ಮಾಡಿದ್ದರು. ಜೊತೆಗೆ ಗೋಕುಲ ದಾಸ್ ಅನ್ನುವ ಫೋಟೋ ಗ್ರಾಫರ್ ಇದೇ ಹುಡುಗಿಯನ್ನು ಕೇರಳ ಸಾರಿಗೆ ಬಸ್ ನಲ್ಲೇ ಕೂರಿಸಿ ಈ ಬಾರಿ ಫೋಟೋ ತೆಗೆದಿದ್ದರು. ಕೃಷ್ಣನೇ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಾನೆ ಅನ್ನುವಂತೆ ಮಾಡಿದ್ದರು.
ಹೀಗಾಗಿ ಈ ಹುಡುಗಿ ಪ್ರಿಯಾ ವಾರಿಯರ್ ಗೆ ಸ್ಪರ್ಧೆ ನೀಡುವ ಮಟ್ಟಿಗೆ ಕ್ರಶ್ ಆಗಿದ್ದಾಳೆ.
2018ರ ವಿಡಿಯೋ

Discussion about this post