ತನ್ನ ಮತ್ತು ಸಂಗೀತ ನಿರ್ದೇಶಕ
ಹರಿಕೃಷ್ಣ ಸಾಂಸಾರಿಕ ಜೀವನದಲ್ಲಿ ಅಪಸ್ವರ ಎದ್ದಿಲ್ಲ. ನಾವು ಬೇರೆಯಾಗುವ ಸಾಧ್ಯತೆಯೇ ಇಲ್ಲ ಎಂದು
ಹಿನ್ನಲೆ ಗಾಯಕಿ ವಾಣಿ ಹರಿಕೃಷ್ಣ
ಸ್ಪಷ್ಟಪಡಿಸಿದ್ದಾರೆ.
ಫೇಸ್ ಬುಕ್ ನಲ್ಲಿ
ವಿಚಾರವೊಂದನ್ನು ಹಂಚಿಕೊಂಡಿದ್ದೆ, ಅದು ವೃತ್ತಿ ಬದುಕಿಗೆ ಸಂಬಂಧಿಸಿದ ವಿಚಾರ. ಅದಕ್ಕೂ
ಸಂಸಾರಕ್ಕೂ ಸಂಬಂಧವಿಲ್ಲ. ನಮ್ಮ ಸಂಸಾರದಲ್ಲಿ ಅಪಸ್ವರ ಅನ್ನುವುದು ಕೇವಲ ವದಂತಿ ಅಂದಿದ್ದಾರೆ.
ಬುಧವಾರ ಫೇಸ್ ಬುಕ್ ಸ್ಟೇಟಸ್
ಹಾಕಿದ್ದ ವಾಣಿ ಹರಿಕೃಷ್ಣ “ಬದುಕೇ ಬೇಡ ಅನ್ನಿಸಿಬಿಡುತ್ತದೆ , ಒಂದು
ಹಾಡೇ ಜೀವನವಲ್ಲ ಅಂತಾರೆ, ಆದರೆ ನನಗೆ ಎಷ್ಟೋ ಹಾಡುಗಳು
ನನ್ನದಾಗುಳಿಯಲಿಲ್ಲ , ಈಗ ” ಕುರುಕ್ಷೇತ್ರ” ಹಾಗೂ ” ರಾಂಧವ” ಚಿತ್ರ
ಗಳಲ್ಲಿ ನನ್ನನ್ನು ಹಾಡಿಸಿ , ಧ್ಧನಿ ಉಳಿಸಿಲ್ಲ , ನಮ್ಮನ್ನು ಹಾಡಿಸಲೇಬಾರದು ನಂತರ
ಬೇರೆಯವರನ್ನು ಹಾಡಿಸುವುದಾದರೆ” ಅಂದಿದ್ದರು.
ಅಲ್ಲಿಂದ ಮಾಧ್ಯಮಗಳಲ್ಲಿ ವಾಣಿ ಮತ್ತು ಹರಿಕೃಷ್ಣ ಡಿವೋರ್ಸ್ ಕಥೆ ಹುಟ್ಟಿಕೊಂಡಿತ್ತು.
Discussion about this post