ಕೊಡಗಿನ ಕುವರಿಯ ಎದುರು ಕುಮಾರಸ್ವಾಮಿ ಸಂಪುಟದ ಸಚಿವ ಸಾರಾ ಮಹೇಶ್ ತೀರಾ ಸಣ್ಣವರಾಗಿ ಹೋಗಿದ್ದಾರೆ. ಕೊಡಗಿನ ಜನರ ಬಗ್ಗೆ ಕಾಳಜಿಯನ್ನು ತೋರಿದ ಹರ್ಷಿಕಾ ಪೂಣಚ್ಚ ಅವರಿಗೆ ಟಾಂಗ್ ಕೊಡಲು ಹೋದ ಸಚಿವರಿಗೆ ಇದೀಗ ತೀರಾ ಮುಖಭಂಗವಾಗಿದೆ.
ಸಚಿವ ಸಾರಾ ಮಹೇಶ್ ಎತ್ತಿದ ಪ್ರಶ್ನೆಗೆ ವಿಡಿಯೋ ಮೂಲಕ ಉತ್ತರಿಸಿರುವ ಹರ್ಷಿಕಾ ಸರಿಯಾಗಿಯೇ ತಿರುಗೇಟು ಕೊಟ್ಟಿದ್ದಾರೆ.
ನಾನು ಇಂಜಿನಿಯರ್ ಬಿ.ಇ ಪದವಿ ಪಡೆದಿದ್ದೇನೆ. ನಾನು ಕೊಡಗಿನ ಮಗಳು, ಭಾರತದ ಪ್ರಜೆ ನನಗೆ ಈ ಬಗ್ಗೆ ಕೇಳುವ ಎಲ್ಲಾ ಹಕ್ಕಿದೆ. ನಮ್ಮ ದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅವರು ಕೂಡ ಸಿನಿಮಾದವರು. ತಮಿಳುನಾಡಿನ ಸಾಕಷ್ಟು ಮಂತ್ರಿಗಳು ಸಿನಿಮಾದವರು. ಅಷ್ಟೇ ಅಲ್ಲದೆ ಸಿನಿಮಾದವರು ಏನು ಮಾಡಬಹುದು ಅನ್ನೋದು ಇತ್ತೀಚಿಗೆ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗಿದೆ. ದಯವಿಟ್ಟು ಸಿನಿಮಾದವರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಸಚಿವ ಸಾರಾ ಮಹೇಶ್ ಅವರಿಗೆ ಮಾತಿನ ಚಾಟಿ ಬೀಸಿದ್ದಾರೆ.
ಪಾಪ ಮಂಡ್ಯದ ವಿಷಯವನ್ನು ಪ್ರಸ್ತಾಪಿಸಿ ಕೊಟ್ಟ ಉತ್ತರವಿದೆಯಲ್ಲ, ಇನ್ಮುಂದೆ ಸಾರಾ ಮಹೇಶ್ ಸಿನಿಮಾ ಮಂದಿಯ ಸುದ್ದಿಗೆ ಹೋಗಲ್ಲ.
ಅದ್ಯಾಕೋ ದಳಪತಿಗಳು ಸಿನಿಮಾದವರ ಕೈಯಲ್ಲಿಯೇ ಸಿಕ್ಕಿ ಹಾಕಿಕೊಳ್ಳುತ್ತಾರೆ. ಮಂಡ್ಯ ಚುನಾವಣೆಯಲ್ಲಿ ಸಿನಿಮಾ ಮಂದಿಯನ್ನು ಕಳ್ಳೆತ್ತು ಅಂದು ಸರಿಯಾಗಿ ಪಾಠ ಕಲಿತರು. ಈಗ ಸಾರಾ ಮಹೇಶ್ ಸರದಿ.
ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಾರಾ ಮಹೇಶ್ ಅವರ ಕಿಂಡಿ ಹಿಂಡದಿದ್ದರೆ ಇವರು ಇನ್ನು ಏನೇನೋ ಮಾತನಾಡೋದು ಗ್ಯಾರಂಟಿ.

Discussion about this post