ತೆಲಂಗಾಣದಲ್ಲಿ ಪಶು ವೈದ್ಯ ಪ್ರಿಯಾಂಕ ರೆಡ್ಡಿಯವರನ್ನು ಸಾಮೂಹಿಕ ಅತ್ಯಾಚಾರಗೈದು, ಸುಟ್ಟು ಹಾಕಿದ ಘಟನೆ ಬಳಿಕ ಅನೇಕ ವಿಕೃತ ವ್ಯಕ್ತಿಗಳ ಅಸಲಿ ಮುಖವಾಡ ಬಯಲಾಗತೊಡಗಿದೆ.
ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದ ಮಂದಿ ಸಾಮಾಜಿಕ ಜಾಲತಾಣಗಳಲ್ಲಿ ಬಾಯಿ ಬಂದಂತೆ ಬರೆಯುತ್ತಿದ್ದಾರೆ. ಹೀಗೆ ಹಿಂದೂ ಯುವತಿಯರನ್ನು ಸಿಕ್ಕಲ್ಲಿ ಅತ್ಯಾಚಾರ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿ ಎಂದು ಪೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ವ್ಯಕ್ತಿಯನ್ನು ಹಾವೇರಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೋಣತಿ ಸಲೀಂ ಅಹಮ್ಮದ್ ಎಂದು ಗುರುತಿಸಲಾಗಿದೆ.
ಈತನ ಫೇಸ್ ಬುಕ್ ಪೋಸ್ಟ್ ನೋಡಿದ ಅನೇಕರು ಈ ಸಂಬಂಧ ಪೊಲೀಸರಿಗೆ ದೂರು ಸಲ್ಲಿಸಿದ್ದರು. ತಕ್ಷಣ ಕಾರ್ಯಪ್ರವೃತರಾದ ಹಾವೇರಿ ಪೊಲೀಸರು ಈತನ ಫೇಸ್ ಬುಕ್ ಖಾತೆಯನ್ನು ಜಾಲಾಡಿ ಬಂಧಿಸಿದ್ದಾರೆ.
ಫೇಸ್ ಬುಕ್ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವ ಮೂಲಕ ಕರ್ನಾಟಕ ಪೊಲೀಸರ ತಾಕತ್ತನ್ನು ಹಾವೇರಿ ಪೊಲೀಸರು ತೋರಿಸಿದ್ದಾರೆ.
Discussion about this post