ಸಚಿವ ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟದ ಬೆನ್ನಲ್ಲೇ ಹಲವು ರಾಜಕಾರಣಿಗಳಿಗೆ ನಡುಕ ಹುಟ್ಟಿದೆಯಂತೆ. ಎಲ್ಲಿ ನಮ್ಮ ಸಿಡಿಗಳು ಸ್ಫೋಟಗೊಳ್ಳುತ್ತದೋ ಅನ್ನುವ ಆತಂಕ ಶುರುವಾಗಿದೆಯಂತೆ.
ಈ ನಡುವೆ ಮಾಜಿ ಸಿಎಂ ಕುಮಾರಸ್ವಾಮಿ ಸಿಡಿ ಸ್ಫೋಟದ ಕುರಿತಂತೆ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.
ರಾಮನಗರದಲ್ಲಿ ಮಾತನಾಡಿರುವ ಅವರು, ನನ್ನ ಸಿಡಿಯನ್ನು ಬಿಡುಗಡೆ ಮಾಡಿ ತೋರಿಸಲಿ, ಅವೆಲ್ಲವನ್ನೂ ಎದುರಿಸುವ ಶಕ್ತಿ ರಾಮನಗರದ ಜನತೆ ಕೊಟ್ಟಿದ್ದಾರೆ ಅಂದಿದ್ದಾರೆ.

ಪ್ರವಾಸೋದ್ಯಮ ಸಚಿವ ಸಿಪಿ ಯೋಗೇಶ್ವರ್ ವಿರುದ್ಧ ಹರಿಹಾಯ್ದಿರುವ ಕುಮಾರಸ್ವಾಮಿ, ಯೋಗೇಶ್ವರ್ ಸಿಡಿ ಕಿಂಗ್ ಅಂತಾ ನನಗೆ ಗೊತ್ತಿದೆ.
ಅವರು ಸಿಡಿ ಬಿಡುಗಡೆ ಮಾಡಲು ಸೂಕ್ತ ಸಂದರ್ಭಕ್ಕಾಗಿ ಕಾಯುವುದು ಬೇಡ, ತಕ್ಷಣ ಬಿಡುಗಡೆ ಮಾಡಲಿ. ಅವೆಲ್ಲವನ್ನೂ ಎದುರಿಸುವ ಶಕ್ತಿಯನ್ನು ರಾಮನಗರದ ಜನ ನನಗೆ ಕೊಟ್ಟಿದ್ದಾರೆ.
ನನ್ನ ಹತ್ತಿರ ಅವರ ಆಟ ನಡೆಯೋದಿಲ್ಲ ಸಿಪಿವೈ ವಿರುದ್ಧ ಎಚ್ಡಿಕೆ ತೊಡೆ ತಟ್ಟಿದ್ದಾರೆ. ಯೋಗೇಶ್ವರ್ ಸವಾಲು ಸ್ವೀಕರಿಸಲು ನಾನೇ ಬೇಕಾಗಿಲ್ಲ, ನನ್ನ ಕಾರ್ಯಕರ್ತರು ಸಾಕು ಎಂದು ತಿವಿದಿರುವ ಕುಮಾರಸ್ವಾಮಿ, ತಾವು ಚನ್ನಪಟ್ಟಣದಲ್ಲಿ ಗೆದ್ದಿದ್ದು ಹೇಗೆ ಎಂದು ಯೋಗೇಶ್ವರ್ ಮರೆತಿರಬೇಕು ಅಂದಿದ್ದಾರೆ.
Discussion about this post