ಗಣೇಶ ವಿಘ್ನ ನಿವಾರಕ, ಸಕಲ ಸಮಸ್ಯೆಗಳನ್ನು ನಿವಾರಿಸುವವನು, ಆದಿ ವಂದಿತನನ್ನು ಪೂಜಿಸಿದರೆ ಕ್ಯಾನ್ಸರ್ ಬರುತ್ತದೆ ಅಂದರೆ ಅರ್ಥವಿದೆಯೇ ಎಂದು ನೀವು ಪ್ರಶ್ನಿಸಬಹುದು.
ಖಂಡಿತವಾಗಿಯೂ ಅರ್ಥವಿದೆ. ಈಗಾಗಲೇ ಗಣೇಶನನ್ನು ಪೂಜಿಸಿ ಅರ್ಧ ಅಪಾಯವನ್ನು ಮೈ ಮೇಲೆ ಎಳೆದುಕೊಂಡಾಗಿದೆ. ಮತ್ತಷ್ಟು ಪೂಜೆ ಮಾಡಿದರೆ ಪೂರ್ತಿ ಅಪಾಯ ಗ್ಯಾರಂಟಿ.
ಹಾಗಂತ ಅದು ಗಣೇಶನ ಪೂಜೆಯಿಂದಲ್ಲ, ಬದಲಾಗಿ POP ( ಪ್ಲಾಸ್ಟರ್ ಆಫ್ ಪ್ಯಾರಿಸ್ ) ನಿಂದ ತಯಾರಿಸಿದ ಗಣೇಶನನ್ನು ಪೂಜೆಯಿಂದ.
ಪಿಓಪಿಯಲ್ಲಿ ತಯಾರಿಸಿದ ಗಣೇಶನ ಮೂರ್ತಿ ನೋಡಲು ಎಷ್ಟು ಸುಂದರವೋ, ಎಷ್ಟು ಆಕರ್ಷಕವೋ, ಅಷ್ಟೇ ಅಪಾಯಕಾರಿ. ಕೇವಲ ಮಾನವನ ದೇಹಕ್ಕೆ ಮಾತ್ರವಲ್ಲ, ಪರಿಸರ, ಜೀವ ಸಂಕುಲಕ್ಕೆ ಈ ಗಣೇಶನ ವಿಗ್ರಹಗಳು ಅಪಾಯ ತರುತ್ತದೆ.
ಈ ವಿಗ್ರಹ ತಯಾರಿಕೆಯಲ್ಲಿ ಬಳಸುವ ರಾಸಾಯನಿಕ ನೀರಿನಲ್ಲಿ ಬೆರೆಯುತ್ತದೆ, ಭೂಮಿ ಸೇರುತ್ತದೆ, ಬಳಿಕ ಸಸ್ಯಗಳು ಹೀರುತ್ತದೆ. ಪ್ರಾಣಿ, ಪಕ್ಷಿಗಳು ಇದೇ ನೀರನ್ನು ಕುಡಿಯುತ್ತದೆ. ಹೀಗೆ ಚೈನ್ ರೀತಿಯಲ್ಲಿ ಅಪಾಯನ್ನು ಹೊತ್ತೊಯ್ಯುತ್ತದೆ.
ಇನ್ನು ವೈದ್ಯರ ಪ್ರಕಾರ ಪಿಒಪಿ ತಯಾರಿಕೆಗೆ ಬಳಸುವ ರಾಸಾಯನಿಕದಲ್ಲಿ ಅಸ್ ಬೆಸ್ಟಾಸ್ ಎಂಬ ಅಂಶವಿದ್ದು, ಇದು ಕ್ಯಾನ್ಸರ್ ಕಾರಕವಂತೆ.
ಮಾತ್ರವಲ್ಲದೆ ಪಿಓಪಿ ವಿಗ್ರಹಗಳಲ್ಲಿ ಭಾರ ಲೋಹಗಳಾದ ಕ್ರೋಮಿಯಂ, ಸೀಸ, ನಿಕ್ಸಲ್, ಕ್ಯಾಡಿಯಂ,ಸತು ಸೇರಿದಂತೆ ಮುಂತಾದ ಅಂಶಗಳಿರುತ್ತದೆ. ಈ ಅಪಾಯಕಾರಿ ಲೋಹಗಳು ನೀರಿನಲ್ಲಿ ನಿಧಾನವಾಗಿ ಕರಗುತ್ತದೆ ಬಳಿಕ ಭೂಮಿ ಸೇರುತ್ತದೆ. ಇದನ್ನು ಸೇವಿಸಿ ಬೆಳೆದ ಸಸ್ಯ ಸಂಕುಲ, ಪ್ರಾಣಿ ಪಕ್ಷಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.
ಜೊತೆಗೆ ಈ ಗಣಪತಿ ವಿಗ್ರಹಕ್ಕೆ ಬಳಸುವ ತೈಲ ವರ್ಣದಲ್ಲಿ ವಿಷಕಾರಿ ಅಂಶಗಳಿರುತ್ತದೆ. ಹೀಗಾಗಿ ಪಿಓಪಿ ಹಾಗೂ ತೈಲ ವರ್ಣ ಬಳಸಿ ತಯಾರಿಸುವ ಎಲ್ಲಾ ಗಣೇಶನ ಮೂರ್ತಿಗಳನ್ನು ದೂರವಿಟ್ಟು ಸಂಕಷ್ಟ ಆಹ್ವಾನದಿಂದ ದೂರವುಳಿಯುವುದು ಒಳಿತಲ್ಲವೇ..?
[youtube https://www.youtube.com/watch?v=m59xkR3S5aY&w=853&h=480]
Discussion about this post