ಬೀದಿನಾಯಿಗಳನ್ನು ಕೇಳುವವರಿಲ್ಲ. ಆದರೆ ವಿಐಪಿಗಳ ಮನೆಯಲ್ಲಿರುವ ನಾಯಿಗಳಿಗೆ ರಾಜವೈಭೋಗ.ಬೀದಿ ನಾಯಿಗಳು ಯಾರೋ ಎಸೆದಿರುವುದನ್ನು ತಿಂದು ಬದುಕಬೇಕು, ಆದರೆ ವಿಐಪಿ ಮನೆಯ ಸಾಕು ನಾಯಿಗಳಿಗೆ ಸಿಗುವ ಸೌಲಭ್ಯಗಳನ್ನು ಊಹಿಸೋದು ಕಷ್ಟ.
ಇನ್ನು ಬೀದಿ ನಾಯಿಗಳು ಸತ್ತರೆ, ಪಾಲಿಕೆ ಮಂದಿಯೂ ಶವ ಕೊಂಡೊಯ್ಯಲು ಬರುವುದಿಲ್ಲ. ಆದರೆ ವಿಐಪಿ ಮನೆಯ ನಾಯಿ ಸತ್ತರೆ ಪೊಲೀಸ್ ತನಿಖೆಯೂ ನಡೆಯುತ್ತದೆ. ಇದಕ್ಕೊಂದು ನಿದರ್ಶನ ತೆಲಂಗಾಣದಲ್ಲಿ ನಡೆದಿದೆ.
ನಿಮ್ಮ ಮಕ್ಕಳು ಅದ್ಯಾವ ರೀತಿಯ ಚಪ್ಪಲಿ ಧರಿಸಬೇಕು…?
ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಅಧಿಕೃತ ನಿವಾಸ ಪ್ರಗತಿ ಭವನದಲ್ಲಿದ್ದ ಸಾಕುನಾಯಿ ‘ಹಸ್ಕಿ’ ಅಕಾಲಿಕ ನಿಧನ ಹೊಂದಿದೆ. ಈ ಕಾರಣಕ್ಕೆ ನಾಯಿಗೆ ಚಿಕಿತ್ಸೆ ನೀಡಿo ಪಶು ವೈದ್ಯರ ವಿರುದ್ಧ ಇದೀಗ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
Buy Health & Bodybuilding Supplements & Proteins
ಕೆಲ ದಿನಗಳ ಹಿಂದೆ 11 ತಿಂಗಳ ಹಸ್ಕಿ ಅನಾರೋಗ್ಯಕ್ಕೆ ತುತ್ತಾಗಿತ್ತು. ಆಹಾರ ಸೇವಿಸಲು ನಿರಾಕರಿಸುತ್ತಿದ್ದ ಕಾರಣಕ್ಕೆ ನಾಯಿಯನ್ನು ನೋಡಿಕೊಳ್ಳುತ್ತಿದ್ದ ಆಲಿ ಖಾನ್ ಅವರು ಹಸ್ಕಿಯ ಆರೋಗ್ಯ ಪರಿಶೀಲಿಸಿದ್ದಾರೆ. ಈ ವೇಳೆ ಅದು ಜ್ವರದಿಂದ ಬಳಲುತ್ತಿರುವುದು ಗೊತ್ತಾಗಿದೆ.
ಹೀಗಾಗಿ ಹಸ್ಕಿಯನ್ನು ಬಂಜಾರ ಹಿಲ್ಸ್ ನಲ್ಲಿರುವ ಪಶು ವೈದ್ಯಾಲಯಕ್ಕೆ ಶಿಫ್ಟ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಹಸ್ಕಿಗೆ ಚಿಕಿತ್ಸೆ ನೀಡಿದ ರಂಜಿತ್ ಎಂಬ ವೈದ್ಯರು ಇಂಜೆಕ್ಷನ್ ನೀಡಿದ್ದಾರೆ.
ಇದಾದ ಕೆಲವೇ ಹೊತ್ತಿನಲ್ಲಿ ನಾಯಿ ಮೃತಪಟ್ಟಿದ್ದೆ. ಹಸ್ಕಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಎಂದು ದೂರಿರುವ ಆಲಿಖಾನ್, ರಂಜಿತ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಿಎಂ ಮನೆಯ ನಾಯಿ ಅಂದ ಮೇಲೆ ಕೇಳಬೇಕಾ, ಪೊಲೀಸರು ದೂರು ಸ್ವೀಕರಿಸಿ, ಪಶುವೈದ್ಯ ರಂಜಿತ್ ವಿರುದ್ಧ ಇದೀಗ ಪೊಲೀಸರು FIR ದಾಖಲಿಸಿದ್ದಾರೆ.
Discussion about this post