ಬೆಂಗಳೂರು : ತಾಲಿಬಾನ್ ಹಿಡಿತದಲ್ಲಿರುವ ಆಫ್ಘಾನಿಸ್ತಾನದಲ್ಲಿ ಇದೀಗ ರಕ್ತದೋಳಿ ಹರಿಯಲಾರಂಭಿಸಿದೆ. ಕನ್ನಡದ ಪತ್ರಿಕೆಯೊಂದು ತಾಲಿಬಾನಿಗಳ ಪರ ಸಂಪಾದಕೀಯ ಬರೆದಂತೆ ಇದೇನು ಸ್ವರ್ಗವಾಗಿ ಉಳಿದಿಲ್ಲ. ಈಗಾಗಲೇ ತಾಲಿಬಾನಿಗಳು ರಾಕ್ಷಸ ಸ್ವರೂಪ ತಳೆದಿದ್ದು, ಅಟ್ಟಹಾಸ ಮೆರೆಯಲಾರಂಭಿಸಿದ್ದಾರೆ.
ಈ ನಡುವೆ ಅನೇಕ ಕನ್ನಡಿಗರು ಅಫ್ಘನ್ ನೆಲದಲ್ಲಿ ಸಿಲುಕಿದ್ದು, ಅವರ ಮನೆಯಲ್ಲಿ ಆತಂಕ ನೆಲೆಸಿದೆ. ಪ್ರಸ್ತುತ ಆರು ಜನ ಕನ್ನಡಿಗರು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ ಅನ್ನುವ ಮಾಹಿತಿ ಲಭ್ಯವಾಗಿದೆ. ಇದೀಗ ಮತ್ತಷ್ಟು ಮಂದಿ ಭಾರತೀಯರು ಅಫ್ಘನ್ ನಲ್ಲಿ ಸಿಲುಕಿದ್ದಾರೆ ಅನ್ನುವ ಮಾಹಿತಿಗಳು ಲಭ್ಯವಾಗಿದೆ. ಇದೀಗ ಈ ಪೈಕಿ ಕಾಸರಗೋಡು ಮೂಲದ ಸಿಸ್ಟರ್ ಥೆರೆಸಾ ಕ್ರಾಸ್ಟಾ ಅನ್ನುವವರು ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿದ್ದು, ಅವರೇ ವಾಯ್ಸ್ ಮೆಸೇಜ್ ಕಳುಹಿಸಿದ್ದಾರೆ, ಈ ಆಡಿಯೋದಲ್ಲಿ ನಾನು ಸುರಕ್ಷಿತವಾಗಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ ನಾನು ಸಿಸ್ಟರ್ ಥೆರಸಾ, ಕಾಬೂಲ್ ಕಾನ್ವೆಂಟಿನಲ್ಲಿ ಸುರಕ್ಷಿತವಾಗಿದ್ದೇನೆ. ನಾನು ಕೆಲಸ ಮಾಡುವ ಸಂಸ್ಥೆಯು ಪಿಪಿಕೆ ಇಟಾಲಿಯನಾ. ಅವರು ನನ್ನ ಸುರಕ್ಷತೆಗಾಗಿ ಇಟಾಲಿಯನ್ ಕೌನ್ಸಲೆಂಟ್ ರೋಮ್ ನಿಂದ ಇಟಲಿಗೆ ಹೋಗಲು ಎಲ್ಲಾ ವ್ಯವಸ್ಥೆಯನ್ನು ಮಾಡಿದ್ದಾರೆ.
ಸದ್ಯಕ್ಕೆ ಕಾಬೂಲ್ ಏರ್ ಪೋರ್ಟ್ ನಲ್ಲಿ ಗೊಂದಲವಿರುವುದರಿಂದ ಏರ್ ಪೋರ್ಟ್ ಒಳಗೆ ಪ್ರವೇಶವಿಲ್ಲ. ಆದ್ದರಿಂದ ನಮ್ಮ ಪ್ರಯಾಣವನ್ನು ಮುಂದೂಡಲಾಗಿದೆ. ಏರ್ ಪೋರ್ಟ್ ಗೆ ಪ್ರವೇಶ ನೀಡುವಾಗ ನಮ್ಮನ್ನು ಕರೆದುಕೊಂಡು ಹೋಗುವರು. ಇಂಡಿಯನ್ ಎಂಬಸಿಯಲ್ಲಿ ಕೂಡಾ ನಾನು ರಿಜಿಸ್ಟರ್ ಮಾಡಿರುವುದರಿಂದ ಸುರಕ್ಷತೆಗೆ ಎಲ್ಲಾ ವ್ಯವಸ್ಥೆ ಮಾಡುತ್ತಿದ್ದಾರೆ. ನಿಮ್ಮ ಸಹಕಾರಕ್ಕೆ ನನ್ನ ತುಂಬು ಹೃದಯದ ವಂದನೆಗಳು ಎಂದು ಆಡಿಯೋದಲ್ಲಿ ಹೇಳಿದ್ದಾರೆ.
ಕಾಸರಗೋಡು ಜಿಲ್ಲೆಯ ಬೇಳ ಗ್ರಾಮದ ಥೆರಸಾ ಮೂರು ವರ್ಷಗಳ ಹಿಂದೆ ಅಫ್ಘನ್ ಗೆ ತೆರಳಿದ್ದರು. ಇಟಲಿಯ NGO ಮೂಲಕ ಅವರು ಅಫ್ಘನ್ ಗೆ ತೆರಳಿದ್ದ ಸಿಸ್ಟರ್ ಥೆರೆಸಾ ಕ್ರಾಸ್ಟಾ ಅಲ್ಲಿ ವಿಶೇಷ ಮಕ್ಕಳ ಆರೈಕೆ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು.
Sr Theresa Crasta, from Bela Periyadka Kasargod, who is reportedly stranded in strife-ridden Afghanistan, has sent a message, that she is safe in a convent in Kabul.
Discussion about this post