ದಕ್ಷಿಣ ಭಾರತದ ಬಹು ಭಾಷಾ ನಟಿ ರಶ್ಮಿಕಾ ಮಂದಣ್ಣ ಅವರ, ವಿರಾಜಪೇಟೆ ಸಮೀಪದ ಕುಕ್ಲೂರಿನ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ (ಐ.ಟಿ) ಅಧಿಕಾರಿಗಳು ಗುರುವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ.
ರಶ್ಮಿಕಾ ಅವರ ಕಕ್ಲೂರಿನ ಎರಡು ಅಂತಸ್ತಿನ ನಿವಾಸ, ಅವರ ತಂದೆಗೆ ಸೇರಿದ ಸೆರೆನಿಟಿ ಹಾಲ್,ಬೃಹತ್ ವಾಣಿಜ್ಯ ಸಂಕೀರ್ಣದ ಮೇಲೆ ದಾಳಿ ನಡೆದಿದೆ.
ರಶ್ಮಿಕಾ ಹುಟ್ಟೂರು ಮೈತಾಡಿ ಗ್ರಾಮದಲ್ಲಿನ ಅಂದಾಜು 25 ಎಕರೆ ಕಾಫಿ ತೋಟ, ಬಿಟ್ಟಂಗಾಲದಲ್ಲಿ ಹೊಸ
ದಾಗಿ ಖರೀದಿಸಿದ್ದ 5 ಎಕರೆ ಜಾಗವನ್ನು ಪರಿಶೀಲಿಸಿರುವ ಐ.ಟಿ ಅಧಿಕಾರಿಗಳು, ಪತ್ತೆಯಾದ ಆಸ್ತಿಯ ಮೌಲ್ಯವನ್ನು ಬಹಿರಂಗಪಡಿಸಿಲ್ಲ.
ಈ ನಡುವೆ ಐಟಿ ಇಲಾಖೆ ತುರ್ತು ನೊಟೀಸ್ ಹಿನ್ನಲೆಯಲ್ಲಿ ರಶ್ಮಿಕಾ ಕುಕ್ಲೂರಿಗೆ ಗುರುವಾರ ರಾತ್ರಿ ಆಗಮಿಸಿದ್ದಾರೆ. ಬಳಿಕ ಅವರನ್ನು 10 ಜನ ಐಟಿ ಅಧಿಕಾರಿಗಳು ವಿಚಾರಣೆಗೆ ಗುರಿಪಡಿಸಿದ್ದರು.
ಇನ್ನು ತಡರಾತ್ರಿ ಮನೆಗೆ ಆಗಮಿಸಿರುವ ರಶ್ಮಿಕಾ ತಾಯಿ ಸುಮನ ಮಂದಣ್ಣ ಅವರನ್ನು ಇಂದು ಬೆಳಗ್ಗೆ ಐಟಿ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.
ರಶ್ಮಿಕಾ ಅವರ ಬಹುತೇಕ ವ್ಯವಹಾರಗಳನ್ನು ಸುಮನ ಅವರೇ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ರಶ್ಮಿಕಾ ಅವರ ಚಿತ್ರ ವ್ಯವಹಾರಗಳು ತಾಯಿಗೆ ಗೊತ್ತಿರುವ ಹಿನ್ನಲೆಯಲ್ಲಿ ಅವರನ್ನು ಐಟಿ ಅಧಿಕಾರಿಗಳು ಪ್ರಶ್ನಿಸಲಿದ್ದಾರೆ.
Discussion about this post