ನವದೆಹಲಿ : ಭಾರತದ ಕೃಷಿ ಕಾಯ್ದೆ ವಿಚಾರದಲ್ಲಿ ಮೂಗು ತೂರಿಸಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೂ ರೈತರ ಹೋರಾಟವನ್ನು ಬೆಂಬಲಿಸಿದ್ದರು.
ಈ ಮೂಲಕ ಭಾರತದ ಆಂತರಿಕ ವಿಚಾರದಲ್ಲಿ ಕೈ ಹಾಕಿದ್ದು ಮಾತ್ರವಲ್ಲದೆ, ಭಾರತವನ್ನು ಮುಜುಗರಕ್ಕೆ ಈಡು ಮಾಡಲು ಯತ್ನಿಸಿದ್ದರು.
ದುರಂತ ಅಂದ್ರೆ ಕೆನಡಾದಲ್ಲಿ ಬೆಂಬಲ ಬೆಲೆ ಅನ್ನುವುದೇ ಇಲ್ಲ. ಹಾಗಿದ್ದರೂ ಭಾರತದ ಬೆಂಬಲ ಬೆಲೆ ವಿಚಾರದ ಕುರಿತಂತೆ ಟ್ರೂಡೂ ಮಾತನಾಡಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ಅಧಿಕಾರಿಗಳು ಕೆನಡಾ ಪ್ರಧಾನಿ ಸೂಕ್ತ ಎಚ್ಚರಿಕೆಯನ್ನು ಕೊಟ್ಟಿದ್ದರು. ಹೀಗಾಗಿ ಭಾರತ ಮತ್ತು ಕೆನಡಾ ನಡುವೆ ಸಂಬಂಧ ಹಳಸಿದೆ ಎನ್ನಲಾಗಿತ್ತು.
ಈ ನಡುವೆ ಭಾರತದ ಕೊರೋನಾ ಲಸಿಕೆಗಳು ಯಶ ಕಾಣುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಕರೆ ಮಾಡಿದ್ದ ಟ್ರೂಡೂ ಕೊರೋನಾ ಲಸಿಕೆ ಕಳುಹಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಇತರ ದೇಶಗಳಿಗೆ ಲಸಿಕೆ ಕಳುಹಿಸಿದಂತೆ ನಮಗೂ ಲಸಿಕೆ ಕಳುಹಿಸಿಕೊಡಿ ಎಂದು ಅವರು ಮನವಿ ಮಾಡಿದ್ದಾರೆ.
ಕೆನಡಾ ಪ್ರಧಾನಿ ಭಾರತದ ವಿರುದ್ಧ ಮಾತನಾಡಿದ್ದರೂ ಕೆನಡಾ ಪ್ರಜೆಗಳ ಹಿತವನ್ನು ಗಮನದಲ್ಲಿಟ್ಟುಕೊಂಡಿರುವ ಕೇಂದ್ರ ಸರ್ಕಾರ ಕೆನಡಾದ ಲಸಿಕೆ ಪ್ರಯತ್ನಕ್ಕೆ ಸಾಥ್ ನೀಡುವುದಾಗಿ ಹೇಳಿದ್ದಾರೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನ ಮಂತ್ರಿ ಸಚಿವಾಲಯ ಕೆನಡಾಗೆ ಲಸಿಕೆ ಕಳುಹಿಸಿಕೊಡಲು ಪ್ರಯತ್ನಿಸುವುದಾಗಿ ಹೇಳಿದೆ.
ಆದರೆ ಕೆನಡಾ ಹೇಳುವುದೇ ಬೇರೆ, ಮೋದಿ ಜೊತೆಗಿನ ಮಾತುಕತೆ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಜಸ್ಟಿನ್ ಟ್ರೂಡೂ, ಕೇವಲ ಕೊರೋನಾ ಲಸಿಕೆ ಮಾತ್ರವಲ್ಲದೆ ಭಾರತದಲ್ಲಿ ನಡೆಯುತ್ತಿರುವ ಕೃಷಿಕರ ಹೋರಾಟಗಳ ಬಗ್ಗೆಯೂ ಮಾತನಾಡಿರುವುದಾಗಿ ಹೇಳಿದೆ.ಮಾತುಕತೆಗಳ ಮೂಲಕ ಸಮಸ್ಯೆ ಬಗೆ ಹರಿಸಲು ಕೆನಡಾ ಪ್ರಧಾನಿ ಹೇಳಿದ್ದಾರಂತೆ.
ಹಾಗೇ ನೋಡಿದರೆ ಕೆನಡಾದಿಂದ ಬಂದಿರುವ ಸುಳ್ಳು ಹೇಳಿಕೆ ಅನ್ನುವುದು ಸ್ಪಷ್ಟ. ಈ ಹಿಂದೆಯೇ ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸಲು ಬರಬೇಡಿ ಎಂದು ಕೆನಡಾ ಪ್ರಧಾನಿಗೆ ಖಡಕ್ಕ್ ಎಚ್ಚರಿಕೆ ನೀಡಲಾಗಿದೆ. ಹಾಗಿರುವಾಗ ಮತ್ತೆ ಕೆನಡಾ ಪ್ರಧಾನಿ ಕೃಷಿ ಕಾಯ್ದೆ ಬಗ್ಗೆ ಮಾತನಾಡಿರುವ ಸಾಧ್ಯತೆಗಳೇ ಇಲ್ಲ.
ಹಾಗಂತ ಲಸಿಕೆ ಸ್ವೀಕರಿಸಿದ ಮೇಲೆ ಕೆನಡಾ ಭಾರತದ ಮೇಲೆ ಪ್ರೀತಿ ತೋರಿಸುತ್ತದೆ ಅಂದುಕೊಳ್ಳಬೇಡಿ. ಯಾಕಂದ್ರೆ ಅದೊಂದು ಕೃತಜ್ಞತೆ ಹೇಳುವ ಸೌಜನ್ಯವಿಲ್ಲದ ರಾಷ್ಟ್ರ.
Discussion about this post