crossorigin="anonymous"> ಲಸಿಕೆಗಾಗಿ ಕೃತಕ ಕೈ ಖರೀದಿಸಿದ ದಂತ ವೈದ್ಯ : ಆರೋಗ್ಯ ಸಿಬ್ಬಂದಿ ವಂಚಿಸಲು ಹೋದವ ಅಂದರ್ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಲಸಿಕೆಗಾಗಿ ಕೃತಕ ಕೈ ಖರೀದಿಸಿದ ದಂತ ವೈದ್ಯ : ಆರೋಗ್ಯ ಸಿಬ್ಬಂದಿ ವಂಚಿಸಲು ಹೋದವ ಅಂದರ್

Radhakrishna Anegundi by Radhakrishna Anegundi
10-12-21, 7 : 04 am
in ವಿದೇಶ
corona alert Health ministry sounds alarm as weekly Covid positivity rate exceeds 10% in 7 states
Share on FacebookShare on TwitterWhatsAppTelegram

ಇಟಲಿ :  ಕೊರೋನಾ ಸೋಂಕು ಸೋಲಿಸುವ ನಿಟ್ಟಿನಲ್ಲಿ ಭಾರತದಲ್ಲಿ ಲಸಿಕೆ ವಿತರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ಅದರಲ್ಲೂ ಕೇರಳದಂತಹ ಸಾಕ್ಷರ ರಾಜ್ಯ ನೇಮ್ ಅಂಡ್ ಶೇಮ್ ಮೂಲಕ ಲಸಿಕೆಯನ್ನು ಕಡ್ಡಾಯಗೊಳಿಸಿದೆ. ಈ ಎಲ್ಲಾ ಪ್ರಯತ್ನಗಳ ಕಾರಣದಿಂದಾಗಿಯೇ ದೇಶದಲ್ಲಿ ಮೂರನೇ ಅಲೆಯ ಭೀತಿ ತಗ್ಗಿದೆ. ಒಂದು ವೇಳೆ ಹೀಗೆ ಲಸಿಕೆ ವಿತರಣೆಯಾಗದಿರುತ್ತಿದ್ರೆ ಇಷ್ಟು ಹೊತ್ತಿಗೆ ಒಮಿಕ್ರಾನ್ ಸುನಾಮಿ ಸ್ವರೂಪ ಪಡೆದಿರುತ್ತಿತ್ತು.

ಹಾಗಂತ ಎಲ್ಲರೂ ಲಸಿಕೆ ಪಡೆದಿದ್ದಾರೆಯೇ ಖಂಡಿತಾ ಇಲ್ಲ, ಕೆಲವರಿಗೆ ಲಸಿಕೆ ಅಂದ್ರೆ ಅದೇನೋ ಅಸಡ್ಡೆ. ಈ ಕಾರಣಕ್ಕಾಗಿಯೇ  ಒಂದಲ್ಲ ಒಂದು ನೆಪವೊಡ್ಡಿ ಲಸಿಕೆ ನಿರಾಕರಿಸುತ್ತಿದ್ದಾರೆ. ಕೆಲವರಿಗೆ ದೇವರೇ ಮೈ ಬರ್ತಾರೆ, ಮತ್ತೆ ಕೆಲವರು ದೇವರು ಲಸಿಕೆ ತೆಗೆದುಕೊಳ್ಳಬೇಡ ಅಂದಿದ್ದಾರೆ ಅಂತಾರೆ. ಇನ್ನು ಕೆಲವರು ಲಸಿಕೆಯಿಂದ ಅಪಾಯವಿಲ್ಲ ಎಂದು ಸರ್ಟಿಫಿಕೆಟ್ ಕೊಡಿ ಅಂತಾರೆ.

ಈ ನಡುವೆ ವಿದೇಶದ ಅನೇಕ ರಾಷ್ಟ್ರಗಳಲ್ಲೂ ಲಸಿಕೆ ವಿಚರಣೆಗೆ ವೇಗ ನೀಡಲಾಗಿದೆ. ಇಟಲಿಯೂ ಕೂಡಾ ಇದಕ್ಕೆ ಹೊರತಾಗಿಲ್ಲ. ಲಸಿಕೆ ಪಡೆಯದವರು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಆದೇಶಿಸಿದೆ. ಒಂದು ವೇಳೆ ಭಾಗವಹಿಸಬೇಕಾದರೆ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಕಡ್ಡಾಯ.

ಹೀಗಾಗಿ ಲಸಿಕೆ ಪಡೆಯಲು ಇಚ್ಛೆ ಇಲ್ಲದ ವ್ಯಕ್ತಿಯೊಬ್ಬ ಪ್ರಮಾಣ ಪತ್ರಕ್ಕಾಗಿ ಖತರ್ನಾಕ್ ಐಡಿಯಾ ಮಾಡಿದ್ದಾನೆ. ಕೃತ ಕೈಯೋಂದನ್ನು ಖರೀದಿಸಿ ಅದಕ್ಕೆ ಚರ್ಮವನ್ನೇ ಹೋಲುವಂತೆ ಸಿಲಿಕಾನ್ ಹೊದಿಕೆ ಹೊದಿಸಿ ಲಸಿಕಾ ಕೇಂದ್ರಕ್ಕೆ ಬಂದಿದ್ದಾನೆ. ಇನ್ನೇನು ಆರೋಗ್ಯ ಸಿಬ್ಬಂದಿ ಲಸಿಕೆ ಚುಚ್ಚುಬೇಕು, ನರ್ಸ್ ಗೆ ಅನುಮಾನ ಬಂದಿದೆ. ಚರ್ಮ ಮುಟ್ಟಿದ್ರೆ ರಬ್ಬರ್ ಮುಟ್ಟಿದಂತಾಗುತ್ತಿತ್ತು ಮತ್ತು ಸಿಕ್ಕಾಪಟ್ಟೆ ತಂಪಾಗಿತ್ತು.

ತಕ್ಷಣ ಎಚ್ಚೆತ್ತುಕೊಂಡ ನರ್ಸ್ ಶರ್ಟ್ ಬಿಟ್ಟಿಸಿದ್ರೆ ಅಸಲಿ ಕಥೆ ಗೊತ್ತಾಗಿದೆ. ತಕ್ಷಣ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಅಂದ ಹಾಗೇ ಹೀಗೆ ವಂಚಿಸಲು ಮುಂದಾದವನು ದಂತ ವೈದ್ಯನೆಂದು ಗೊತ್ತಾಗಿದೆ.

Bengaluru 5 from Nepal arrested for theft at apartments cash and ornaments worth lakhs seized

ಹಗಲಲ್ಲಿ ಸೆಕ್ಯೂರಿಟಿ : ರಾತ್ರಿಯಾದ್ರೆ ಅಪಾರ್ಟ್ ಮೆಂಟ್ ಲೂಟಿ : ಇದು ನೇಪಾಳಿ ಗಾರ್ಡ್ ಗಳ ಕರಾಳ ಮುಖ

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ನೇಪಾಳಿ ಮೂಲದ ಸೆಕ್ಯೂರಿಟಿ ಗಾರ್ಡ್ ಗಳ ವಿವಿಧ ಠಾಣೆಗಳಲ್ಲಿ ದಾಖಲಾಗುತ್ತಿರುವ ಪ್ರಕರಣಗಳು ಏರಿಕೆ ಕಂಡಿದೆ. ಅಪಾರ್ಟ್ ಮೆಂಟ್, ಮನೆ, ಕಚೇರಿ ಎಂದು ಸೆಕ್ಯೂರಿಟಿ ಕೆಲಸಕ್ಕೆ ಬರುವ ಇವರು ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಲಾರಂಭಿಸಿದ್ದಾರೆ. ಹೀಗಾಗಿ ಹಗಲಲ್ಲಿ ಸಲಾಂ ಸಾಬ್ ಎಂದು ಸೆಲ್ಯೂಟ್ ಹೊಡೆದು ರಾತ್ರಿಯಾದ್ರೆ ಅಪಾರ್ಟ್ ಮೆಂಟ್ ಲೂಟಿ ಮಾಡುತ್ತಿದ್ದ ಖದೀಮರನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ನೇಪಾಳಿ ಮೂಲದ ಕರಣ್ ಬಿಸ್ತಾ, ರಾಜು ಜೀವನ್, ಮುಂಬೈನ ಗೋರಖ್ ಕಾಲು ಮತ್ತು ಹಿಕ್ಮತ್ ಶಾಹಿ ಎಂದು ಗುರುತಿಸಲಾಗಿದೆ. ಬಂಧಿತರಿಂದ 9.3 ಲಕ್ಷ ರೂಪಾಯಿ ನಗದು ಹಾಗೂ 19 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಕರಣ್ ಬಿಸ್ತಾ ಮತ್ತು ರಾಜು ದೀವನ್ ನಗರದ ಅಪಾರ್ಟ್ ಗಳಲ್ಲಿ ಕೆಲಸಕ್ಕೆ ಸೇರುತ್ತಿದ್ದರು. ಅಪಾರ್ಟ್ ಮೆಂಟ್ ನ ನಿವಾಸಿಗಳು ಕೆಲಸ ಕಾರ್ಯದ ನಿಮಿತ್ತ ಹೊರಗಡೆ ಹೋಗ್ತಾರೆ ಎಂದು ಗೊತ್ತಾದ ತಕ್ಷಣ ಮುಂಬೈ ಹಾಗೂ ಇತರ ರಾಜ್ಯಗಳಲ್ಲಿರುವ ನೇಪಾಳಿ ಗೆಳೆಯರನ್ನು ನಗರಕ್ಕೆ ಕರೆಸಿಕೊಳ್ಳುತ್ತಿದ್ದರು. ಈ ಸಂದರ್ಭದಲ್ಲಿ ಪೊಲೀಸರಿಗೆ ಮೊಬೈಲ್ ನೆಟ್ ವರ್ಕ್ ಸುಳಿವು ಸಿಗಬಾರದೆಂದು ಫೇಸ್ ಬುಕ್ ಮೆಸೆಂಜರ್ ಮೂಲಕ ಸಂವಹನ ನಡೆಸುತ್ತಿದ್ದರು. ಬಳಿಕ ಅವರಿಂದಲೇ ಕಳ್ಳತನ ಮಾಡಿಸುತ್ತಿದ್ದರು,

ಇದಾದ ಬಳಿಕ ಸಹಚರರು ಸೇಫ್ ಜಾಗಕ್ಕೆ ತಲುಪಿದ ಬೆನ್ನಲ್ಲೇ ಮನೆ ಮಾಲೀಕರಿಗೆ ಕರೆ ಮಾಡಿ ಮನೆ ಕಳ್ಳತನವಾಗಿರುವ ವಿಷಯ ತಿಳಿಸುತ್ತಿದ್ದರು. ಬಳಿಕ ಅನುಮಾನ ಬಾರದಂತೆ ವರ್ತಿಸಿ ಅದೇ ಜಾಗದಲ್ಲಿ ಕೆಲಸ ಮುಂದುವರಿಸುತ್ತಿದ್ದರು. ಹೀಗೆ ನಗರದಲ್ಲಿ ಹೆಚ್ಚಾಗಿದ್ದ ಮನೆಗಳ್ಳತನ ಪೊಲೀಸರ ನಿದ್ದೆಗೆಡಿಸಿತ್ತು.

ಈ ನಡುವೆ ಕೆಲ ದಿನಗಳ ಹಿಂದೆ ಹೊರಮಾವು ಕೋಕನೆಟ್ ಗ್ರೋ ಬಡಾವಣೆಯ ಅಪಾರ್ಟ್ ಮೆಂಟ್ ನಲ್ಲಿ ವಾಸವಿದ್ದ ರಾಮಚಂದ್ರ ರೆಡ್ಡಿ ಅನ್ನುವವರು ತಮ್ಮ ಸಂಬಂಧಿಕರ ಸಾವಿನ ಹಿನ್ನಲೆಯಲ್ಲಿ ಆಂಧ್ರದ ನೆಲ್ಲೂರಿಗೆ ತೆರಳಿದ್ದರು. ಈ ವೇಳೆ ಇದೇ ಗ್ಯಾಂಗ್ ರಾಮಚಂದ್ರ ಅವರ ಮನೆಯನ್ನು ದೋಚಿತ್ತು. ಇದಾದ ಬಳಿಕ ಕರಣ್ ಬಿಸ್ತಾ ಮನೆ ಬಾಗಿಲು ತೆರೆದಿರುವ ಮಾಹಿತಿ ನೀಡಿದ್ದ. ಆದರೆ ಖದೀಮರ ಅದೃಷ್ಟ ಕೈ ಕೊಟ್ಟಿತ್ತು.

ಈ ವೇಳೆ ಕಾರ್ಯಾಚರಣೆಗಿಳಿದ ಪೊಲೀಸರು ಕೆ ಆರ್ ಪುರಂ ನಲ್ಲಿ ಬಸ್ ಹತ್ತಲು ಸಿದ್ದವಾಗಿದ್ದ ಕರಣ್ ಬಿಸ್ವಾ ಮತ್ತು  ರಾಜುವನ್ನು ಬಂಧಿಸಿದ್ದಾರೆ. ಇವರು ನೀಡಿದ ಮಾಹಿತಿಯಂತೆ ಉಳಿದ ಮೂವರು ಆರೋಪಿಗಳನ್ನು ರೈಲಿನಲ್ಲಿ ಮುಂಬೈಗೆ ತೆರಳುತಿದ್ದ ವೇಳೆ ಬಂಧಿಸಲಾಗಿದೆ.

Tags: CoronaMAIN
Share3TweetSendShare

Discussion about this post

Related News

ತೆಳು – ಬಿಗಿ – ಚಿಕ್ಕದಾದ ಬಟ್ಟೆ ಧರಿಸಬಾರದು : ಅಫ್ಫಾನಿಸ್ತಾನದಲ್ಲಿ ಮಹಿಳೆಯರಿಗೆ ಹೊಸ ನಿಯಮ

ತೆಳು – ಬಿಗಿ – ಚಿಕ್ಕದಾದ ಬಟ್ಟೆ ಧರಿಸಬಾರದು : ಅಫ್ಫಾನಿಸ್ತಾನದಲ್ಲಿ ಮಹಿಳೆಯರಿಗೆ ಹೊಸ ನಿಯಮ

ಆಫ್ರಿಕಾ ದೇಶದ ಮಂಕಿ ಪಾಕ್ಸ್ ಪಾಕಿಸ್ತಾನಕ್ಕೆ ಎಂಟ್ರಿ : ಭಾರತಕ್ಕೆ ಶುರುವಾಯ್ತು ಢವ ಢವ

ಆಫ್ರಿಕಾ ದೇಶದ ಮಂಕಿ ಪಾಕ್ಸ್ ಪಾಕಿಸ್ತಾನಕ್ಕೆ ಎಂಟ್ರಿ : ಭಾರತಕ್ಕೆ ಶುರುವಾಯ್ತು ಢವ ಢವ

ವಲಸಿಗ V/S ಬ್ರಿಟಿಷರ ನಡುವೆ ಸಂಘರ್ಷ : ಬ್ರಿಟನ್ ನಲ್ಲಿ ಹಿಂಸಾಚಾರ

ಕ್ಯೂಬಾದಲ್ಲಿ Cuba ಪೆಟ್ರೋಲ್ ದರ 456 ರೂಪಾಯಿಗೆ ಏರಿಕೆ

ಬತ್ತಿ ಹೋಗುತ್ತಿದೆ ಅಮೆಜಾನ್ ನದಿ : ಜಗತ್ತಿನ ಅಂತ್ಯಕ್ಕೆ ಸಿಕ್ತು ಮತ್ತೊಂದು ಮುನ್ಸೂಚನೆ

Warships In Karachi: ಪಾಕಿಸ್ತಾನದ ಕರಾಚಿ ಬಂದರಿನಲ್ಲಿ ಚೀನಾ ಯುದ್ಧ ನೌಕೆ

Joe Biden Visit Israel : ಅಮೆರಿಕ ಅಧ್ಯಕ್ಷ ಜೋ ಬೈಡನ್‌ ನಾಳೆ ಇಸ್ರೇಲ್‌ಗೆ

facebook meta : ಫೇಸ್ ಬುಕ್ ನಲ್ಲೂ 11000 ಸಿಬ್ಬಂದಿ ವಜಾ : ಅಸಲಿಗೆ ಕಾರಣವೇನು ಗೊತ್ತಾ…?

Indian American : ಅಮೆರಿಕಾದ ನೆಲದಲ್ಲಿ ಅವಮಾನ : ಆರೋಪಿ ಮಹಿಳೆಯನ್ನು ಬಂಧಿಸಿದ ಪೊಲೀಸರು

mexico modi : ಯುದ್ದ ತಡೆಯಲು ಮೋದಿ ನೇತೃತ್ವದಲ್ಲಿ ಸಮಿತಿ ರಚಿಸಿ : ಮೆಕ್ಸಿಕೋ ಆಗ್ರಹ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್