ಜಗನ್ನಾಥ್ ಚಂದ್ರಶೇಖರ್ , ಹಾಗಾಂದ್ರೆ ತುಂಬಾ ಜನರಿಗೆ ಗೊತ್ತಾಗಲಾರದು. ಬದಲಾಗಿ ಜಗನ್ ಅಂದ್ರೆ ಕಿರುತೆರೆ ವೀಕ್ಷಕರಿಗೆ ಈ ಫೋಟೋ ಖಂಡಿತಾ ಕಣ್ಣ ಮುಂದೆ ಬರುತ್ತದೆ.
ಒಂದಿಷ್ಟು ವರ್ಷಗಳ ಕಾಲ ಕಿರುತೆರೆ ವೀಕ್ಷಕರಿಗೆ ನೆಚ್ಚಿನ ನಟನಾಗಿದ್ದ ಜಗನ್, ಸೀತಾವಲ್ಲಭ ಧಾರಾವಾಹಿಯ ಬಳಿಕ ಟಿವಿಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಇದೀಗ ಮತ್ತೆ ಲಕ್ಷಣ ಅನ್ನುವ ಧಾರಾವಾಹಿ ಮೂಲಕ ಜಗನ್ ಕಿರುತೆರೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಅದಕ್ಕಿಂತ ಮುಂಚೆ ಜಗನ್ ಯಾರು ಅನ್ನುವುದರ ಕಡೆಗೆ ದೃಷ್ಟಿ ಹಾಯಿಸುವುದಾದ್ರೆ. ಜಗನ್ ನಡೆದ ಬಂದ ದಾರಿ ಕಲ್ಲು ಮುಳ್ಳುಗಳಿಂದ ಕೂಡಿತ್ತು. ಸಾಕಷ್ಟು ಸಂಕಷ್ಟದ ದಿನಗಳನ್ನು ದಾಟಿಯೇ ಅವರು ಈ ಎತ್ತರಕ್ಕೆ ಬೆಳೆದಿದ್ದಾರೆ.
Discussion about this post