ಬೆಂಗಳೂರು : ರಮೇಶ್ ಜಾರಕಿಹೊಳಿ ಕಾಮಲೀಲೆಯ ಸಿಡಿ ರಹಸ್ಯ ಇನ್ನು ಕೆಲವೇ ದಿನಗಳಲ್ಲಿ ಬಯಲಾಗಲಿದೆ.
ಜಾರಕಿಹೊಳಿ ಕುಟುಂಬ ಸಿಡಿ ನಕಲಿ ಅನ್ನುತ್ತಿದೆ, ಪರಿಸ್ಥಿತಿ ನೋಡಿದರೆ ಅದು ನಕಲಿ ಸಿಡಿಯಂತೆ ಕಾಣಿಸುತ್ತಿಲ್ಲ, ಬದಲಾಗಿ ಜಾರಕಿಹೊಳಿಯವರನ್ನು ಖೆಡ್ಡಾಗೆ ಬೀಳಿಸಿದಂತಿದೆ.
ಸಿಡಿ ನಕಲಿಯೋ ಅಸಲಿಯೋ, ಸಿಡಿ ಹಿಂದೆ ಯಾರಿದ್ದಾರೆ ಅನ್ನುವುದು ಎಸ್ಐಟಿ ತನಿಖೆಯಿಂದಲೇ ಗೊತ್ತಾಗಬೇಕಿದೆ.
ಇದನ್ನೂ ಓದಿ : ಜಾರಕಿಹೊಳಿ ಸಿಡಿ ರಹಸ್ಯ : SIT ವಿಚಾರಣೆಗೆ ಕರೆದ ಐವರು ಯಾರು ಗೊತ್ತಾ…?
ಈ ನಡುವೆ ಸಿಡಿಗೆ ರಾಮನಗರ ನಂಟಿದೆ ಅನ್ನುವುದು ಗೊತ್ತಾಗಿದೆ.
ಈ ಸಿಡಿಯಲ್ಲಿರುವ ಯುವತಿಗೆ ಆತ್ಮೀಯಳಾಗಿರುವ ಯುವತಿಯೊಬ್ಬಳನ್ನು ಎಸ್ಐಟಿ ಪೊಲೀಸರು ವಿಚಾರಣೆಗೆ ಕರೆ ತಂದಿದ್ದಾರೆ.
ಇದನ್ನೂ ಓದಿ : ಭಾರತದ ಈ ಜಿಲ್ಲೆಯಲ್ಲಿ ಮಾಸ್ಕ್ ಧರಿಸದಿದ್ರೆ 6 ತಿಂಗಳು ಜೈಲು ಶಿಕ್ಷೆ
ಆ ಯುವತಿಯನ್ನು ರಾಮನಗರದಿಂದ ಪೊಲೀಸರು ಕರೆದುಕೊಂಡು ಬಂದಿದ್ದು, ರೇಷ್ಮೆನಗರಿ ಮೂಲದವಳಾಗಿದ್ದಾಳೆ ಎನ್ನಲಾಗಿದೆ.
ಜೊತೆಗೆ ಈಕೆ ಸರ್ಕಾರಿ ನೌಕರಿಯಲ್ಲಿದ್ದಾಳೆ ಅನ್ನುವ ಶಾಕಿಂಗ್ ಮಾಹಿತಿ ಕೂಡಾ ಸಿಕ್ಕಿದೆ.
ಇದನ್ನೂ ಓದಿ : ಚಪ್ಪಲಿ ಎತ್ತಿದ್ಲು…ಅದಕ್ಕೆ ಮೂತಿಗೆ ಹೊಡೆದೆ – ಝೋಮ್ಯಾಟೋ ಗಲಾಟೆಗೆ ಟ್ವೀಸ್ಟ್
ಕಾಮಲೀಲೆಯ ಸಿಡಿಯನ್ನು ಕಲ್ಲಹಳ್ಳಿಗೆ ಯುವಕನೊಬ್ಬ ಹಸ್ತಾಂತರಿಸುವ ಸಂದರ್ಭದಲ್ಲಿ ಈ ಯುವತಿಯೂ ಜೊತೆಯಲ್ಲಿದ್ದಳು.
ಆದರೆ ಸಿಡಿ ವಿಚಾರದಲ್ಲಿ ಈಕೆಯ ಪಾತ್ರ ಏನು ಅನ್ನುವುದು ತನಿಖೆಯಿಂದಲೇ ಗೊತ್ತಾಗಬೇಕಾಗಿದೆ.
Discussion about this post