ದೀಪಿಕಾ JNUಗೆ ಹೋಗಿರೋದು ಅವರ ವೈಯಕ್ತಿಕ ವಿಚಾರ. ನಾನಂತೂ ತುಕಡೆ ಗ್ಯಾಂಗ್ ಜೊತೆ ಹೋಗಿ ನಿಲ್ಲಲಾರೆ ಎಂದು ನಟಿ ಕಂಗನಾ ಹೇಳಿದ್ದಾರೆ.
ಸ್ಪಾಟ್ ಬೋಯೆ ಸುದ್ದಿ ಜಾಲತಾಣಕ್ಕೆ ಕೊಟ್ಟಿರುವ ಸಂದರ್ಶನದಲ್ಲಿ, ಜೆಎನ್ಯು ಹಿಂಸಾಚಾರ ಘಟನೆ ಬೆನ್ನಲ್ಲೇ ದೀಪಿಕಾ ಪಡುಕೋಣೆ ವಿದ್ಯಾರ್ಥಿಗಳನ್ನು ಭೇಟಿಯಾದ ಕುರಿತಂತೆ ನಟಿ ಕಂಗನಾ ರಾಣಾವತ್ ಖಡಕ್ಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ದೇಶ ಒಡೆಯುವವರನ್ನು ನಾನು ಯಾವತ್ತೂ ಬೆಂಬಲಿಸುವುದಿಲ್ಲ.ನಾನು ತುಕಡೆ ಗ್ಯಾಂಗ್ ಜೊತೆ ಹೋಗಿ ನಿಲ್ಲಲಾರೆ. ಈ ದೇಶವನ್ನು ವಿಭಜಿಸುವ ಯಾರನ್ನೇ ಆದರೂ ನಾನು ಬೆಂಬಲಿಸುವುದಿಲ್ಲ. ಯೋಧ ಸತ್ತಾಗ ಸಂಭ್ರಮಿಸುವ ಜನರಿಗೆ ಅಧಿಕಾರ ಸಿಗಬೇಕೆಂದು ನಾನು ಇಚ್ಛಿಸುವುದಿಲ್ಲ.
ದೀಪಿಕಾ ವೈಯಕ್ತಿಕ ನಿಲುವಿನ ಬಗ್ಗೆ ತಾನು ಮಾತನಾಡುವುದು ಸರಿಯಲ್ಲ ನನಗೆ ಏನು ಬೇಕು ಅನ್ನುವುದನ್ನು ನಾನು ಹೇಳಬಲ್ಲೆ.ದೀಪಿಕಾ ಏನು ಮಾಡಬೇಕೆಂದು ನಾನು ಹೇಳೋದಿಲ್ಲ ಎಂದಿದ್ಧಾರೆ ಕಂಗನಾ.
ಅಲ್ಲಿಗೆ ಕಂಗನಾ ಕೊಟ್ಟಿರುವ ಉತ್ತರವನ್ನು ದೀಪಿಕಾ ಅರ್ಥ ಮಾಡಿಕೊಂಡರೆ ಸಾಕು.
Discussion about this post