ಬೆಂಗಳೂರು : ನಟ ಸಂಚಾರಿ ವಿಜಯ್ ಇಹಲೋಕದ ಸಂಚಾರ ಮುಗಿಸಿ ಪರ ಲೋಕಕ್ಕೆ ಸಂಚಾರ ಬೆಳೆಸಿದ್ದಾರೆ. ಕೆಲವೇ ಕೆಲವು ವರ್ಷಗಳ ಕಾಲ ಭೂಮಿ ಮೇಲೆ ಬದುಕಿದ್ದ ವಿಜಯ್ ಭೂತಾಯಿಯ ಮೂಲಕವೇ ಮರಳಿ ಬಾರದೂರಿಗೆ ಪಯಣ ಬೆಳೆಸಿದ್ದಾರೆ.
ಅದ್ಭುತ ನಟ, ಅದ್ಭುತ ಗೆಳೆಯ, ಸಂಕಷ್ಟದಲ್ಲಿರುವವರಿಗೆ ಮಿಡಿಯತ್ತಿದ್ದ ಜೀವವಾಗಿದ್ದ ಸಂಚಾರಿ ವಿಜಯ್ ಅಂತ್ಯಕ್ರಿಯೆ ಕಡೂರಿನ ಪಂಚನಹಳ್ಳಿಯಲ್ಲಿ ನೆರವೇರಿದೆ. ವಿಜಯ್ ಸ್ನೇಹಿತ ರಘು ಅವರ ತೋಟದಲ್ಲಿ ಕುಪ್ಪೂರು ಶ್ರೀಗಳ ನೇತೃತ್ವದಲ್ಲಿ ಲಿಂಗಾಯತ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನಡೆದು ಬಳಿಕ ಅಂತ್ಯ ಸಂಸ್ಕಾರ ನಡೆಸಲಾಯ್ತು.
ಇದಕ್ಕೂ ಮುನ್ನ ಸರ್ಕಾರ ವತಿಯಿಂದ ಅಂತಿಮ ಗೌರವ ವಂದನೆಯನ್ನು ಸಲ್ಲಿಸಲಾಯ್ತು.
ನಮ್ಮೂರು ದೀಪ ಆರಿ ಹೋಯ್ತಲ್ಲ, ಹಾಡು ಹಗಲಿನಲ್ಲೇ ಕತ್ತಲಾಯ್ತಲ್ಲೋ ಎಂದು ತಮ್ಮೂರಿನ ಮಗನ ಅಂತಿಮ ಮಗನ ಅಂತಿಮ ದರ್ಶನ ಪಡೆಯಲು ಕೇವಲ ಊರು ಮಾತ್ರವಲ್ಲ ಪರ ಊರಿನ ಮಂದಿಯೂ ಆಗಮಿಸಿದ್ದರು.
Discussion about this post