ಟೋಕಿಯೋ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದು ಬಂದ ನೀರಜ್ ಚೋಪ್ರಾ ಅವರಿಗೆ ಕಾಶೀನಾಥ್ ನಾಯಕ್ ಅವರು ಒಂದಿಷ್ಟು ವರ್ಷಗಳ ಕಾಲ ಕೋಚ್ ಆಗಿದ್ದರು ಎಂದು ಮಾಧ್ಯಮಗಳ ವರದಿಯನ್ನು ಆಧರಿಸಿ ಕರ್ನಾಟಕ ಸರ್ಕಾರ 10 ಲಕ್ಷ ಬಹುಮಾನ ಘೋಷಿಸಿತ್ತು. ಆದರೆ ಇದೀಗ ಈ ಬಹುಮಾನ ಘೋಷಣೆ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಕೆಂಗಣ್ಣಿಗೆ ಗುರಿಯಾಗಿದೆ.
ನೀರಜ್ ಚೋಪ್ರಾ ಅವರೊಂದಿಗೆ ಮಾತನಾಡಿದವರನ್ನೆಲ್ಲಾ ಕೋಚ್ ಅನ್ನಲಾಗದು, ಕಾಶಿನಾಥ್ ಯಾರು ಅಂತಾನೇ ಗೊತ್ತಿಲ್ಲ. ಕಾಶೀನಾಥ್ ಅವರು ತಮ್ಮ ಕೋಚ್ ಎಂದು ಚೋಪ್ರಾ ಅವರು ಹೇಳಿಲ್ಲ, ನಾವೂ ಹೇಳಿಲ್ಲ, ಹೀಗಿರುವಾಗ ಕರ್ನಾಟಕ ಸರಕ್ರಾ 10 ಲಕ್ಷ ಬಹುಮಾನ ಘೋಷಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಅಧಿಕೃತ ಪತ್ರ ಸಿಕ್ರೆ ನಮ್ಮ ಆಕ್ಷೇಪಣೆ ಸಲ್ಲಿಸುವುದಾಗಿ ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

ನಾವು ಮೂರು ಮಂದಿ ವಿದೇಶಿ ತರಬೇತುದಾರರನ್ನು ನೇಮಿಸಿ 6 ವರ್ಷದಿಂದ ಕಠಿಣ ತರಬೇತಿ ನೀಡಿದ್ದೇವೆ. ಈಗ ಯಾರೋ ಬಂದು ನಾನು ಕೋಚ್ ಅಂದ್ರೆ ಹೇಗೆ, ಶ್ರಮಪಟ್ಟು ಪದಕ ಗೆದ್ದಿರುವುದು ಚೋಪ್ರಾ, ಒಬ್ಬರ ಶ್ರಮ ಮತ್ತೊಬ್ಬರಿಗೆ ಲಾಭ ತಂದುಕೊಡಬಾರದು ಅನ್ನುವುದು ಅಥ್ಲೆಟಿಕ್ಸ್ ಫೆಡರೇಷನ್ ಆಫ್ ಇಂಡಿಯಾದ ವಾದ.
ಆದರೆ ಕಾಶೀನಾಥ್ ಅವರು ನಾನು ಚೋಪ್ರಾನನ್ನು ಒಲಿಂಪಿಕ್ಸ್ ಗೆ ಸಿದ್ದಗೊಳಿಸಿದ್ದೆ ಎಂದು ಎಲ್ಲೂ ಹೇಳಿಲ್ಲ. ಚೋಪ್ರಾ ಅವರನ್ನು ಮೊದ ಮೊದಲು ಜಾವಲಿನ್ ಎಸೆತ ಕ್ಷೇತ್ರಕ್ಕೆಂದು ಸಿದ್ದಗೊಳಿಸಿದ್ದು ಕನ್ನಡಿಗ ಕಾಶಿನಾಥ್ ನಾಯ್ಕ್ ಅನ್ನುವುದಷ್ಟೇ ಮಾಧ್ಯಮಗಳ ವರದಿ. 2015 ರಿಂದ 2017ರ ಅವಧಿಯಲ್ಲಿ ಚೋಪ್ರಾ ನನ್ನ ಜೊತೆ ತರಬೇತಿ ಪಡೆಯುತ್ತಿದ್ದ ಎಂದಷ್ಟೇ ಕಾಶಿನಾಥ್ ಹೇಳಿದ್ದಾರೆ. ಹಾಗಿದ್ದ ಮೇಲೆ ಈ ವಿವಾದದಲ್ಲಿ ರಾಜಕೀಯದ ವಾಸನೆ ಬಡಿಯುತ್ತಿದೆ. ಈ ಬಗ್ಗೆ ಚೋಪ್ರಾ ಸ್ಪಷ್ಟನೆ ನೀಡಿದರೆ ಎಲ್ಲವೂ ಬಗೆ ಹರಿಯುತ್ತದೆ.
Discussion about this post