ಬೆಳಗಾವಿ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಈವರೆಗೆ ಬಂದಿರುವ ಸರ್ಕಾರಗಳು, ಸಾರಿಗೆ ಸಚಿವರು ದೂರ ದೃಷ್ಟಿಯ ಯೋಜನೆಗಳನ್ನು ಕರ್ನಾಟಕ ಸಾರಿಗೆ ಸಂಸ್ಥೆ ರೂಪಿಸದ ಕರ್ಮಕ್ಕೆ ಜನ ಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ. ಸಾರಿಗೆ ಸಂಸ್ಥೆಯನ್ನು ಲಾಭದಲ್ಲಿ ಕೊಂಡೊಯ್ಯುವ ನೂರಾರು ಮಾರ್ಗಗಳಿದ್ದರೂ ಈವರೆಗೆ ಬಂದ ಸಚಿವರು ಆ ಬಗ್ಗೆ ತಲೆಯನ್ನೇ ಕೆಡಿಸಿಕೊಂಡಿರಲಿಲ್ಲ.

ಈ ನಡುವೆ ನೌಕರರ ವಿರುದ್ದ ಸಂಸ್ಥೆಯ ಮೇಲಾಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಒತ್ತಡ ತೀವ್ರಗೊಳಿಸಿದ್ದಾರೆ. ಸರ್ಕಾರ ಹಾಗೂ ನೌಕರರಿಗೆ ಇದು ಪ್ರತಿಷ್ಠೆಯ ಪ್ರಶ್ನೆಯಾಗಿರುವ ಕಾರಣ, ಈ ಬಾರಿ ತಿಕ್ಕಾಟ ಜೋರಾಗಿದೆ.
ಈ ನಡುವೆ ಮೇಲಾಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಕಂಡಕ್ಟರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ಸವದತ್ತಿಯಲ್ಲಿ ನಡೆದಿದೆ.

ದುರಂತ ಅಂದ್ರೆ ಇದು ಸಾರಿಗೆ ಸಚಿವ ಲಕ್ಷ್ಣಣ ಸವದಿಯವರ ತವರು ಜಿಲ್ಲೆ. ಮೃತಪಟ್ಟವರನ್ನು ಶಿವಕುಮಾರ ನೀಲಗಾರ ಎಂದು ಗುರುತಿಸಲಾಗಿದ್ದು, 12 ವರ್ಷದಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಂದ್ ನಲ್ಲಿ ಪಾಲ್ಗೊಂಡಿದ್ದ ಕಾರಣಕ್ಕೆ ನೋಟೀಸ್ ಕೊಟ್ಟಿದ್ದ ಅಧಿಕಾರಿಗಳು ಕೆಲಸದಿಂದ ವಜಾಗೊಳಿಸುವುದಾಗಿ ಬೆದರಿಕೆ ಹಾಕಿದ್ದರಂತೆ. ಜೊತೆಗೆ ಬೇರೆ ರೀತಿಯಲ್ಲೂ ಹಿಂಸೆ ನೀಡಲಾಗಿತ್ತು ಅನ್ನುವ ಆರೋಪ ಕೇಳಿ ಬಂದಿದೆ.
Discussion about this post