ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅವರ ಅಧಿಕಾರದ ವೈಖರಿಗೆ ಟೀಕೆಗಳು ಕೇಳಿ ಬಂದಿರಬಹುದು. ಆದರೆ ವೈಯುಕ್ತಿಕವಾಗಿ ಯಡಿಯೂರಪ್ಪ ಅವರನ್ನು ಟೀಕಿಸುವವರು ತೀರಾ ವಿರಳ.
ಬಹುತೇಕ ಎಲ್ಲಾ ರಾಜಕೀಯ ನಾಯಕರೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡಿರುವ ಯಡಿಯೂರಪ್ಪ ಯಾರೊಂದಿಗೂ ವೈಯುಕ್ತಿಕವಾಗಿ ಮುನಿಸಿಕೊಂಡವರಲ್ಲ.
ಈ ನಡುವೆ ಅವರ ಜೀವನದ ಕುರಿತಂತೆ ಅವರ ಪುತ್ರಿ ಪದ್ಮಾವತಿ ಪತ್ರಿಕೆಯೊಂದರ ಜೊತೆಗೆ ಮಾತನಾಡಿದ್ದು ಹಲವಾರು ಕುತೂಹಲಕಾರಿ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.
ಅವಮಾನ, ಸುಖ, ಸಂತೋಷ, ನೋವು ಎಲ್ಲವನ್ನೂ ಅನುಭವಿಸಿರುವ ಯಡಿಯೂರಪ್ಪ ನಮಗೆ ಪುಸ್ತಕ ಇದ್ದಂತೆ ಅಂದಿದ್ದಾರೆ.

ಈ ನಡುವೆ ತುರ್ತು ಸಂದರ್ಭವನ್ನು ನೆನಪಿಸಿಕೊಂಡಿರುವ ಪದ್ಮಾವತಿ, 1975ರಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಯಡಿಯೂರಪ್ಪ ಬಳ್ಳಾರಿಯ ಜೈಲಿನಲ್ಲಿದ್ದರು.
ಜೈಲಿನಲ್ಲಿ ಕಳಪೆ ಊಟ ಪೂರೈಸುತ್ತಿರುವುದನ್ನು ಪ್ರತಿಭಟಿಸಿ ಒಳ್ಳೆಯ ಊಟ ಸಿಗುವಂತೆ ಅವರು ಮಾಡಿದ್ದರು.

ಅಪ್ಪಾಜಿ ಜೈಲಿನಲ್ಲಿದ್ದ ಸಂದರ್ಭದಲ್ಲೇ ನಮ್ಮ ಕಿರಿಯ ಸಹೋದರ ವಿಜಯೇಂದ್ರ ಹುಟ್ಟಿದ್ದು. ತಾಯಿ ಗರ್ಭವತಿಯಾಗಿದ್ದ ಕಾರಣದಿಂದ ಅವರು ಜೈಲಿಗೆ ಹೋಗಲಿಲ್ಲ. ಆದರೆ ಅವರ ಅನೇಕ ಸ್ನೇಹಿತೆಯರು ಜೈಲಿಗೆ ಹೋಗಬೇಕಾಗಿ ಬಂದಿತ್ತು.

ಅಪ್ಪ ಜೈಲಿನಲ್ಲಿದ್ದರೂ, ಧೈರ್ಯವಂತರಾಗಿದ್ದ ಅಮ್ಮ ಆಸ್ಪತ್ರೆಯ ಓಡಾಟಕ್ಕೆ ಹೆದರದೆ ನಮ್ಮ ಸೋದರತ್ತೆಯ ಸಹಾಯದಿಂದ ಎಲ್ಲವನ್ನೂ ನಿಭಾಯಿಸಿದ್ದರು ಅಂದಿದ್ದಾರೆ.
Discussion about this post