crossorigin="anonymous"> ವೇಶ್ಯೆಯರ ಸಂಘಕ್ಕೆ ಬಿದ್ದು ಕೋಟಿ ಕಳೆದುಕೊಂಡ ವೈದ್ಯ : ಶಿಕ್ಷಕನ ಹನಿ ಟ್ರ್ಯಾಪ್ ದಂಧೆ ಬೇಧಿಸಿದ ಪೊಲೀಸರು - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ವೇಶ್ಯೆಯರ ಸಂಘಕ್ಕೆ ಬಿದ್ದು ಕೋಟಿ ಕಳೆದುಕೊಂಡ ವೈದ್ಯ : ಶಿಕ್ಷಕನ ಹನಿ ಟ್ರ್ಯಾಪ್ ದಂಧೆ ಬೇಧಿಸಿದ ಪೊಲೀಸರು

ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕಾದ ಶಿಕ್ಷಕನೇ ಹನಿ ಟ್ರ್ಯಾಪ್ ದಂಧೆ ನಡೆಸಿದ ಕಥೆಯಿದು

Radhakrishna Anegundi by Radhakrishna Anegundi
02-07-22, 9 : 48 am
in ಕ್ರೈಮ್
honey trap
Share on FacebookShare on TwitterWhatsAppTelegram

ಮಗನಿಗೆ ಮೆಡಿಕಲ್ ಸೀಟು ಪಡೆಯಲು ಅಡ್ಡ ದಾರಿ ಹಾಡಿದ ಕರ್ಮಕ್ಕೆ ವೈದ್ಯರು ಹಣ ಕಳೆದುಕೊಂಡಿದ್ದಾರೆ

ಬೆಂಗಳೂರು :  ಮಗನಿಗೆ ವೈದ್ಯಕೀಯ ಸೀಟು ಪಡೆಯಲು ಹೊರಟ ವೈದ್ಯರೊಬ್ಬರು ಹನಿ ಟ್ರ್ಯಾಪ್ ಜಾಲದ ಬಲೆಗೆ ಸಿಲುಕಿ ಹಂತ ಹಂತವಾಗಿ ಒಟ್ಟು 1.16 ಕೋಟಿ ರೂಪಾಯಿ ಕಳೆದುಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ. ಇದೀಗ ವೈದ್ಯರನ್ನು ಸಂಕಷ್ಟಕ್ಕೆ ಸಿಲುಕಿಸಿದ ಕಲಬುರಗಿಯ ಹನಿಟ್ರ್ಯಾಪ್ ಬಳಗವನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆಳಂದ ತಾಲೂಕಿನಲ್ಲಿ ವೈದ್ಯರಾಗಿರುವ ವ್ಯಕ್ತಿಯೊಬ್ಬರು ತಮ್ಮ ಮಗನನ್ನು ಮನೆ ಪಾಠ ಹೇಳಿಕೊಡುತ್ತಿದ್ದ ನಾಗರಾಜು ಅನ್ನುವ ಶಿಕ್ಷಕನ ಬಳಿ ಪಾಠಕ್ಕೆ ಕಳುಹಿಸುತ್ತಿದ್ದರು. ಈ ನಾಗರಾಜ ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿದ್ದ, ಅಲ್ಲಿ ಕೆಲಸ ಬಿಟ್ಟು ಮನೆ ಪಾಠ ಶುರುವಿಟ್ಟುಕೊಂಡಿದ್ದ. ಮಗನ ಕಾರಣದಿಂದ ಶಿಕ್ಷಕ ನಾಗರಾಜು ಮತ್ತು ವೈದ್ಯರು ಆತ್ಮೀಯರಾಗಿದ್ದರು. 2021ರಲ್ಲಿ ಮಗನ ಪಿಯುಸಿ ಶಿಕ್ಷಣ ಮುಗಿಯುತ್ತಿದ್ದಂತೆ ಮೆಡಿಕಲ್ ಓದಿಸಲು ವೈದ್ಯರು ಮುಂದಾದರು. ಈ ವಿಚಾರ ತಿಳಿದ ನಾಗರಾಜ, ಎಂ,ಎಸ್ ರಾಮಯ್ಯ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಹೇಳಿ ಕಾಲೇಜಿಗೆ 1.74 ಲಕ್ಷ ರೂಪಾಯಿ ಹಣ ಕಟ್ಟಿಸಿಕೊಂಡಿದ್ದ.

ಇದಾದ ಬಳಿಕ ಇನ್ನುಳಿದ 66 ಲಕ್ಷ ರೂಪಾಯಿಯನ್ನು ನಾನೇ ಕಟ್ಟಿ ಬರುವುದಾಗಿ ಹೇಳಿ ವೈದ್ಯರಿಂದ ನಾಗರಾಜು ಹಣ ಪಡೆದುಕೊಂಡಿದ್ದ. ಆದರೆ ಮಗನಿಗೆ ಸೀಟು ಸಿಗಲಿಲ್ಲ. ಕೊನೆಗೆ ಕೊಟ್ಟ ಕಾಸು ವಾಪಾಸು ಕೊಡುವಂತೆ ವೈದ್ಯರು ಶಿಕ್ಷಕನ ಬೆನ್ನು ಹತ್ತಿದ್ದರು. ಆದರೆ ಸಬೂಬು ಹೇಳಿ ತಪ್ಪಿಸಿಕೊಳ್ಳಲಾರಂಭಿಸಿದ.

ಕೊನೆಗೆ ಜನವರಿ 2022ರಲ್ಲಿ ಹಣ ಕೊಡುವುದಾಗಿ ಹೇಳಿ ಬೆಂಗಳೂರಿಗೆ ಬರುವಂತೆ ವೈದ್ಯರಿಗೆ ನಾಗರಾಜು ಸೂಚಿಸಿದ್ದಾನೆ. ಅಷ್ಟು ಹೊತ್ತಿಗೆ ವೈದ್ಯರನ್ನು ಹನಿ ಟ್ರ್ಯಾಪ್ ಬಲೆಗೆ ಬೀಳಿಸಲು ಶಿಕ್ಷಕ ನಾಗರಾಜು ಸಂಚು ರೂಪಿಸಿದ್ದ. ವೈದ್ಯರು ರೈಲಿನಲ್ಲಿ ಕಲಬುರಗಿಯಿಂದ ಪ್ರಯಾಣ ಪ್ರಾರಂಭಿಸಿದ್ದಾರೆ. ಸೊಲ್ಲಾಪುರದಲ್ಲಿ ಮುಂಬೈಯಿಂದ ಕರೆ ತಂದಿದ್ದ ಇಬ್ಬರು ವೇಶ್ಯೆಯರು ಹತ್ತಿದ್ದಾರೆ. ಅದೇನೂ ಮೋಡಿ ಮಾಡಿದ್ರೋ ಗೊತ್ತಿಲ್ಲ. ಮುಂಬೈಯಿಂದ ಬಂದ ಹುಡುಗಿಯರು ವೈದ್ಯನನ್ನು ಬುಟ್ಟಿಗೆ ಬೀಳಿಸಿದ್ದಾರೆ.

ಇಬ್ಬರು ಹುಡುಗಿಯರೊಂದಿಗೆ ಬೆಂಗಳೂರಿಗೆ ಬಂದಿಳಿದ ವೈದ್ಯರು,  ಮೆಜೆಸ್ಟಿಕ್ ಸಮೀಪದ ಯುಟಿ ಲಾಡ್ಜ್ ಗೆ ತೆರಳಿದ್ದಾರೆ. ಇದೇ ಕೊಠಡಿಯನ್ನು ವೈದ್ಯರಿಗಾಗಿ ನಾಗರಾಜು ಕಾಯ್ದಿರಿಸಿದ್ದ. ಹುಡುಗಿಯರ ಜೊತೆಗೆ ವೈದ್ಯರು ಕೊಠಡಿ ಸೇರುತ್ತಿದ್ದಂತೆ, ಪಕ್ಕದ ರೂಮ್ ನಲ್ಲಿ ತಂಗಿದ್ದ ನಾಗರಾಜ್ ತನ್ನ ಸಹಚರರಿಗೆ ನಕಲಿ ವಾಕಿಟಾಕಿ ಕೊಟ್ಟು ಸಿಸಿಬಿ ಪೊಲೀಸರ ಸೋಗಿನಲ್ಲಿ ದಾಳಿ ಮಾಡಿಸಿದ್ದಾನೆ.

ನೀವು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದೀರಿ ಎಂದು ಬೆದರಿಸಿದ ನಕಲಿ ಪೊಲೀಸರು, ವೈದ್ಯರು ಹಾಗೂ ಹುಡುಗಿಯರ ಫೋಟೋಗಳನ್ನು ಜೊತೆಯಾಗಿ ತೆಗೆದಿದ್ದಾರೆ. ಇದಾದ ಬಳಿಕ 35 ಸಾವಿರ ರೂ ಹಣ ಮತ್ತು ಚಿನ್ನಾಭರಣ ದೋಚಿದ್ದಾರೆ. ಇದೇ ವೇಳೆ ನೆರವು ನೀಡುವ ನೆಪದಲ್ಲಿ ಬಂದ ಮತ್ತೊಬ್ಬ ಪೊಲೀಸರ ಜೊತೆಗೆ ಮಾತನಾಡಿ ಕೇಸು ದಾಖಲಾಗದಂತೆ ನೋಡಿಕೊಳ್ಳುತ್ತೇನೆ. 70 ಲಕ್ಷ ಕೊಡಿ ಅಂದಿದ್ದಾನೆ.

ಮರ್ಯಾದೆಗೆ ಅಂಜಿದ ವೈದ್ಯರು, ನಕಲಿ ಪೊಲೀಸರೊಂದಿಗೆ ಕಲಬುರಗಿಗೆ ತೆರಳಿ, ಬ್ಯಾಂಕ್ ಆಸ್ತಿ ಪತ್ರ ಅಡವಿಟ್ಟು 50 ಲಕ್ಷ ಕೊಟ್ಟಿದ್ದಾರೆ. ಇದಾದ ಬಳಿಕ ಪರಿಚಿತರ ಮೂಲಕ ಅಸಲಿ ಪೊಲೀಸರನ್ನು ವೈದ್ಯರು ಭೇಟಿಯಾಗಿದ್ದಾರೆ. ಪ್ರಕರಣದ ಬೆನ್ನು ಹತ್ತಿದ ಸಿಸಿಬಿ ಪೊಲೀಸರು ಇದೀಗ ನಾಗರಾಜ್, ಮಲ್ಲಿಕಾರ್ಜುನ್, ಮಧು, ಬಸವರಾಜ್, ಮತ್ತು ಹಮೀದ್ ಅನ್ನುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ 24 ರೂಪಾಯಿ ನಗದು ಮತ್ತು 25 ಗ್ರಾಮ್ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಮೆಡಿಕಲ್ ಸೀಟು ಕೊಡಿಸುವುದಾಗಿ ವಂಚಿಸಿ, ಪಿರ್ಯಾದಿಯಿಂದ 1 ಕೋಟಿ 16 ಲಕ್ಷ ರೂ. ಹಣವನ್ನು ಸುಲಿಗೆ ಮಾಡಿದ್ದ 5 ಜನ ಆರೋಪಿಗಳನ್ನು ಬಂಧಿಸಿದ ಸಿ.ಸಿ.ಬಿ ಪೊಲೀಸರು, 24 ಲಕ್ಷ ರೂ. ನಗದು, 25 ಗ್ರಾಂ ಚಿನ್ನದ ಒಡವೆ ಮತ್ತು ನಕಲಿ ವಾಕಿ ಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ.

— Joint CP Crime (@CCBBangalore) July 1, 2022
Tags: FEATURED
ShareTweetSendShare

Discussion about this post

Related News

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 16 ಬಾಲ್ಯ ವಿವಾಹ ಪ್ರಕರಣಗಳು ದಾಖಲು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 16 ಬಾಲ್ಯ ವಿವಾಹ ಪ್ರಕರಣಗಳು ದಾಖಲು

ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವ ದಂಪತಿ ಕಾರು ಅಪಘಾತ : ಸ್ಥಳದಲ್ಲೇ ಕೊನೆಯುಸಿರೆಳೆದ ಪತ್ನಿ

ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವ ದಂಪತಿ ಕಾರು ಅಪಘಾತ : ಸ್ಥಳದಲ್ಲೇ ಕೊನೆಯುಸಿರೆಳೆದ ಪತ್ನಿ

ವಿಮಾನದಲ್ಲಿ ಬಂದು ಬೆಂಗಳೂರಿನಲ್ಲಿ ಕದಿಯುತ್ತಿದ್ದ ಯುಪಿ ಖದೀಮರ ಬಂಧನ

ವಿಮಾನದಲ್ಲಿ ಬಂದು ಬೆಂಗಳೂರಿನಲ್ಲಿ ಕದಿಯುತ್ತಿದ್ದ ಯುಪಿ ಖದೀಮರ ಬಂಧನ

ಅತ್ತ ದರ್ಶನ್ ಬಳ್ಳಾರಿ ಜೈಲು ಸೇರಿದ ಬೆನ್ನಲ್ಲೇ ಇತ್ತ ಎಸಿಪಿ ಚಂದನ್ ಮುಂದೆ ಹಾಜರಾದ ಚಿಕ್ಕಣ್ಣ

ಜೈಲಲ್ಲಿ ದರ್ಶನ್’ಗೆ ಆತಿಥ್ಯ : ತನಿಖೆಯ ಮೇಲುಸ್ತುವಾರಿ ವಹಿಸಿಕೊಂಡ ಆಯುಕ್ತ ಬಿ. ದಯಾನಂದ್

ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ : ಜೈಲಲ್ಲಿ ದರ್ಶನ್ ದರ್ಬಾರ್

ಅಪ್ಪನಿಂದ ಕಿರುಕುಳ ಮಗನಿಂದ ಅತ್ಯಾ*ಚಾರ | ರಿಪಬ್ಲಿಕ್ ಹಾಸನದ ಕಾಮಕಾಂಡ Karnataka sex tape scandal

ಐವರು ಮಂಗಳ ಮುಖಿಯರ ಅಟ್ಟಹಾಸ : ಮರ್ಮಾಂಗ ಕತ್ತರಿಸಿ ಲಿಂಗ ಪರಿವರ್ತನೆ

ತಾಯಿ ಮಗನ ಅಪಹರಣ : 9 ಮಂದಿ ಕ್ರಿಮಿನಲ್ ಗಳ ಬಂಧನ

ಪೊಲೀಸರ ನಿರ್ಲಕ್ಷ್ಯದಿಂದ ಬೇಸತ್ರ ಜನತೆ : ಫ್ಲೈ ಓವರ್ ನಿಂದ ವ್ಹೀಲಿಂಗ್ ಕೋರರ ಬೈಕ್ ಎಸೆದ ನಾಗರಿಕರು

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್