ಉಡುಪಿ : ದ.ಕ. ಜಿಲ್ಲೆಯಲ್ಲಿ ಹೇರಲಾಗಿರುವ ವಿಕೇಂಡ್ ಕರ್ಫ್ಯೂ ಅನ್ನು ರದ್ದುಗೊಳಿಸಿ ಎಂದು ವ್ಯಾಪಾರಿಗಳು ಒತ್ತಡ ಹೇರುತ್ತಿದ್ದಾರೆ. ಜಿಲ್ಲೆಯಲ್ಲಿ ವಿಕೇಂಡ್ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಯಾಗುತ್ತಿಲ್ಲ. ಹೀಗಾಗಿ ವಿಕೇಂಡ್ ಕರ್ಫ್ಯೂ ಮುಂದುವರಿಸುವುದರಲ್ಲಿ ಅರ್ಥವೇ ಇಲ್ಲ. ಬಸ್ ಸಂಚಾರ ಎಂದಿನಂತಿದೆ ಅಂದ ಮೇಲೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವುದ್ಯಾಕೆ ಅನ್ನುವುದು ಇವರ ಪ್ರಶ್ನೆ.
ಈ ನಡುವೆ ಈ ಹಿಂದೆ ಹೊರಡಿಸಿದ್ದ ವಿಕೇಂಡ್ ಕರ್ಫ್ಯೂ ಕುರಿತ ಆದೇಶದ ಅವಧಿ ಆಗಸ್ಟ್ 29ಕ್ಕೆ ಅಂತ್ಯವಾಗಿದೆ. ಹೀಗಾಗಿ ಸಪ್ಟಂಬರ್ ವಾರಾಂತ್ಯ ಕರ್ಫ್ಯೂ ಇರಲಾರದು ಎಂದು ಭಾವಿಸಲಾಗಿತ್ತು. ಆದರೆ ಇದೀಗ ವಿಕೇಂಡ್ ಕರ್ಫ್ಯೂ ಮುಂದುವರಿಕೆ ಆದೇಶ ಹೊರ ಬಿದ್ದಿದೆ. ಕೇವಲ ದಕ್ಷಿಣ ಕನ್ನಡ ಮಾತ್ರವಲ್ಲದೆ ಉಡುಪಿ ಹಾಗೂ ಹಾಸನ ಜಿಲ್ಲೆಯನ್ನು ಹೊಸದಾಗಿ ಈ ಪಟ್ಟಿಗೆ ಸೇರಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಆದೇಶದ ಪ್ರಕಾರ ರಾಜ್ಯದಲ್ಲಿ ದ.ಕ., ಉಡುಪಿ, ಕೊಡಗು, ಹಾಸನ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಉಳಿದಂತೆ ಬೆಳಗಾವಿ, ಬೀದರ್, ವಿಜಯಪುರ, ಕಲಬುರಗಿ, ಮೈಸೂರು, ಚಾಮರಾಜ ನಗರಗಳಲ್ಲಿದ್ದ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಲಾಗಿದೆ.
Night curfew would be relaxed in all areas except Kodagu, Hassan, Dakshina Kannada and Udupi districts, which share borders with Kerala
Karnataka government on Monday decided to ease night curfew regulations imposed in the state due to Covid-19 in most areas except four districts, which are sharing its borders with Kerala.
Discussion about this post