ಬೆಂಗಳೂರು : ಕೊನೆಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಸಂಪುಟ ವಿಸ್ತರಣೆಗೆ ವರಿಷ್ಠರು ಹಸಿರು ನಿಶಾನೆ ತೋರಿದ್ದಾರೆ. ಹೀಗಾಗಿ ಇಂದು 29 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇನ್ನು ನಾಲ್ಕು ಸ್ಥಾನಗಳನ್ನು ಖಾಲಿ ಇರಿಸುವಂತೆ ಹೈಕಮಾಂಡ್ ಸೂಚಿಸಿದ್ದು, ಅದನ್ನು ಪಾಲಿಸಲು ಬೊಮ್ಮಾಯಿ ನಿರ್ಧರಿಸಿದ್ದಾರೆ.
ಇಂದು ಪ್ರಮಾಣ ವಚನ ಸ್ವೀಕರಿಸುವವರ ಪೈಕಿ ಲಿಂಗಾಯತರಿಗೆ ಸಿಂಹಪಾಲು ಸಂದಿದೆ. ಲಿಂಗಾಯತ ಸಮುದಾಯದಿಂದ 8 ಮಂದಿ ಸಚಿವರಾಗುತ್ತಿದ್ದಾರೆ. ಇನ್ನುಳಿದಂತೆ 7 ಒಬಿಸಿ, 7 ಒಕ್ಕಲಿಗ, 3 ದಲಿತ, 1 ಎಸ್ಟಿ, 1 ರೆಡ್ಡಿ, ಹಾಗೂ ಒಬ್ಬ ಮಹಿಳೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇನ್ನು ಸಂಪುಟ ವಿಸ್ತರಣೆ ಕುರಿತಂತೆ ಬೆಂಗಳೂರಿನಲ್ಲಿ ಮಾತನಾಡಿರುವ ಬಸವರಾಜ್ ಬೊಮ್ಮಾಯಿ, ಇದು ಯಡಿಯೂರಪ್ಪ ಒತ್ತಡದಿಂದ ರಚನೆಯಾಗುತ್ತಿರುವ ಸಂಪುಟವಲ್ಲ. ಹೈಕಮಾಂಡ್ ಮತ್ತು ನಾನು ಕೂತು ಚರ್ಚಿಸಿ ಸಂಪುಟ ರಚನೆ ನಿರ್ಧಾರಕ್ಕೆ ಬಂದಿದ್ದೇವೆ. ಹೀಗಾಗಿ ಈ ಬಾರಿ ಅನುಭವಿ, ಉತ್ಸಾಹಿ, ದಕ್ಷ ಮತ್ತು ಸ್ವಚ್ಛ ಸಂಪುಟ ರಚನೆಯಾಗಲಿದೆ ಅಂದಿದ್ದಾರೆ
Discussion about this post