crossorigin="anonymous"> ಟೋಲ್ ಗಳಲ್ಲಿ ಓಡಾಡಲು ಶಾಸಕರಿಗೆ ಪ್ರತ್ಯೇಕ ಲೇನ್....ಹಾಗಾದ್ರೆ ಜನ ಸಾಮಾನ್ಯನ ಕಥೆ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಟೋಲ್ ಗಳಲ್ಲಿ ಓಡಾಡಲು ಶಾಸಕರಿಗೆ ಪ್ರತ್ಯೇಕ ಲೇನ್….ಹಾಗಾದ್ರೆ ಜನ ಸಾಮಾನ್ಯನ ಕಥೆ

Radhakrishna Anegundi by Radhakrishna Anegundi
16-09-21, 6 : 22 am
in ನ್ಯೂಸ್ ರೂಮ್
annadani
Share on FacebookShare on TwitterWhatsAppTelegram

ಬೆಂಗಳೂರು : ರಾಜ್ಯದ 6 ಕೋಟಿ ಕನ್ನಡಿಗರ ಸಮಸ್ಯೆ, ಕರ್ನಾಟಕದ ನೆಲ ಜಲದ ಕುರಿತಂತೆ ಚರ್ಚಿಸಲು ಕರೆದಿದ್ದ ಅಧಿವೇಶನದಲ್ಲಿ ಶಾಸಕರ ವೈಯುಕ್ತಿಕ ಸಮಸ್ಯೆಯ ಬಗ್ಗೆ ಚರ್ಚೆ ನಡೆದ ಘಟನೆ ಬುಧವಾರ ಜರುಗಿದೆ.

ಟೋಲ್ ಗಳಲ್ಲಿ ಶಾಸಕರಿಗೆ ಕಿರಿ ಕಿರಿ ನೀಡಲಾಗುತ್ತಿದೆ ಎಂದು ವಿಷಯ ಪ್ರಸ್ತಾಪಿಸಿದ ಶಾಸಕ ಅನ್ನದಾನಿ, ಟೋಲ್ ಗಳಲ್ಲಿ ವಿಐಪಿಗಳ ಸಂಚಾರಕ್ಕೆ ಪ್ರತ್ಯೇಕ ಪಥವಿದೆಯೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಲೋಕೋಪಯೋಗಿ ಸಚಿವರು, ವಿಐಪಿ ಲೇನ್ ಅಂತಾ ಇಲ್ಲ, ಅಂಬ್ಯುಲೆನ್ಸ್ ಗಳು ಓಡಾಡುವ ಪಥದಲ್ಲಿ ವಿಐಪಿಗಳು ಓಡಾಟ ನಡೆಸಬಹುದು ಅಂದರು.

ಸಚಿವರ ಉತ್ತರದಿಂದ ತೃಪರಾಗದ ಕೆ ಅನ್ನದಾನಿ ಶಾಸಕರಿಗೆ ಪಾಸ್ ಕೊಟ್ಟಿದ್ದೀರಿ, ಯಾಕೆ ಕೊಟ್ಟಿದ್ದೀರಿ, ಪಾಸ್ ಗಳನ್ನು ಟೋಲ್ ಗಳಲ್ಲಿ ತೋರಿಸಿದ್ರೆ ಸ್ಕ್ಯಾನ್ ಮಾಡಬೇಕು ಅಂತಾರೆ, ಐಡಿ ಕಾರ್ಡ್ ತೋರಿಸಿ ಅಂತಾರೆ. ನಾನೇ ಶಾಸಕ ಕೂತಿದ್ದೇನೆ ಅಂದರೂ ಸಿಬ್ಬಂದಿಗಳು ಕಿವಿಗೆ ಹಾಕಿಕೊಳ್ಳುವುದಿಲ್ಲ. ಇದರಿಂದ ನಮ್ಮ ಸಮಯ ವ್ಯರ್ಥವಾಗುತ್ತಿದೆ. ನಮಗೆ ಕಿರಿ ಕಿರಿಯಾಗುತ್ತಿದೆ. ಸಮಸ್ಯೆಯಾಗುತ್ತಿದೆ ಎಂದು. ತಕ್ಷಣ ಸಮಸ್ಯೆ ಬಗೆ ಹರಿಸಿ ಅಂದರು.

ಈ ಬಗ್ಗೆ ಸಚಿವರು ಸಮಸ್ಯೆ ಬಗ್ಗೆ ಹರಿಸುವ ಬಗ್ಗೆ ಉತ್ತರಿಸುತ್ತಿದ್ದಂತೆ ಮಧ್ಯಪ್ರವೇಶಿಸಿದ ಶಾಸಕ ಶಿವಲಿಂಗೇಗೌಡರು, ನಮಗೂ ಮರ್ಯಾದೆ ಇದೆ, ಕಾಸು ಕೊಟ್ಟು ಹೋಗ್ತಿವಿ. ಸುಮ್ನೆ ಪಾಸ್ ಗಳು ಯಾಕೆ ಬೇಕು ವಾಪಾಸ್ ತೆಗೆದುಕೊಳ್ಳಿ ಅಂದರು. ಅಷ್ಟಕ್ಕೆ ಮಾತು ನಿಲ್ಲಿಸದ ಶಿವಲಿಂಗೇಗೌಡರು, ಜನಪ್ರತಿನಿಧಿಗಳಿಗೆ ಪ್ರತ್ಯೇಕ ಲೇನ್ ನಿರ್ಮಿಸಿಕೊಡಿ ಅನ್ನುವ ಬೇಡಿಕೆ ಇಟ್ಟರು.

annadni

ಆಗ್ಲೂ ಈ ವಿಷಯದ ಬಗ್ಗೆ ಅನ್ನದಾನಿ ಮತ್ತೆ ಮಾತು ಮುಂದುವರಿಸಿದರು, ಇದು ಸ್ಪೀಕರ್ ಕಾಗೇರಿಯವರ ಸಹನೆ ಕೆಡಿಸಿತು. ಆಗ ಗರಂ ಆಗಿಯೇ ಮಾತನಾಡಿದ ಸ್ಪೀಕರ್, 6 ಕೋಟಿ ಜನರ ಬಗ್ಗೆ ನಾವು ಚರ್ಚಿಸಬೇಕಿದೆ. 224 ಶಾಸಕರ ಸಮಸ್ಯೆ ಇಲ್ಲಿ ವಿಷಯವಲ್ಲ. ಈ ಬಗ್ಗೆ ನನ್ನದೇ ಕಚೇರಿಯಲ್ಲೇ ಸಭೆ ಕರೆದು ಸಮಸ್ಯೆ ಬರೆ ಹರಿಸೋಣ ಎಂದು ಕಲಾಪ ಮುಂದುವರಿಸಿದರು.

ಜನಪ್ರತಿನಿಧಿಗಳ ಈ ಬೇಡಿಕೆ ಅಚ್ಚರಿ ಮೂಡಿಸಿದೆ. ದೇಶದಲ್ಲಿ ಜನಪ್ರತಿನಿಧಿಗೊಂದು, ಜನರಿಗೊಂದು ಕಾನೂನು ಇಲ್ಲ, ಅಂದ ಮೇಲೆ ಟೋಲ್ ಗಳಲ್ಲೂ ಜನ ಸಾಮಾನ್ಯರಂತೆ ಜನಪ್ರತಿನಿಧಿಗಳು ಹೋಗಬೇಕು ತಾನೇ. ಇನ್ನು ಜನಪ್ರತಿನಿಧಿಗಳು ಅಂದ ಮೇಲೆ ಐಡಿ ಕಾರ್ಡ್ ತೋರಿಸಬಾರದು ಅಂತಾ ಇದೆಯೇ,  ಶಾಸಕರ ಹೆಸರಿನಲ್ಲಿ ದುರುಪಯೋಗವಾಗಬಾರದು ಅನ್ನುವ ಕಾರಣಕ್ಕೆ ಟೋಲ್ ಸಿಬ್ಬಂದಿ ಪರಿಶೀಲನೆ ನಡೆಸುತ್ತಾರೆ. ಜನಪ್ರತಿನಿಧಿಯಾದವನು ಜನರ ಸೇವಕನಾಗಿರಬೇಕೇ ಹೊರತು ವಿಐಸಿ ಸಂಸ್ಕೃತಿಯ ದಾಸನಾಗಬಾರದು.

kageri
Tags: MAIN
ShareTweetSendShare

Discussion about this post

Related News

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ಮೇಲೆ ಬುಲ್ಡೋಜರ್‌ : ನರೇಂದ್ರ ಮೋದಿ

ಬೆಂಗಳೂರು ಸೇರಿದಂತೆ ದೇಶದ 40 ಸ್ಥಳಗಳಲ್ಲಿ ನಾಳೆ ಬೃಹತ್ ರೋಜ್‌ಗಾರ್ ಮೇಳ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ವಕ್ಫ್ ಹೆಸರಲ್ಲಿ ರೈತರ ಜಮೀನು ಕಬಳಿಕೆಗೆ ಯತ್ನ- ಶಾಸಕ ಶರಣಗೌಡ ಕಂದಕೂರ್ ಆರೋಪ

ತಿಪಟೂರಿನಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಅನುಮತಿ : ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ

ಬಿಜೆಪಿ ನಡೆಗೆ ನಡುಗಿದ ಸರ್ಕಾರ : ಉಪ ಚುನಾವಣೆ ಕಾರಣಕ್ಕೆ ಎಚ್ಚೆತ್ತುಕೊಂಡ ಸರ್ಕಾರ

ಚಿಕ್ಕಬಳ್ಳಾಪುರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ : ನಗರ ಸಭೆ

ಕೆ.ಸಿ. ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆ

ಇಡೀ ಮಾನವೀಯತೆಗೆ ಭಾರತ ನೆಲೆ; ಸಂಸ್ಕೃತಿ ಸಂರಕ್ಷಣೆಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಕರೆ

ಅತಿವೃಷ್ಟಿಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ : ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್