crossorigin="anonymous"> ಕೇರಳಕ್ಕೆ ಹರಿದು ಬಂದ ಸಹಾಯವೆಷ್ಟು ಗೊತ್ತಾ...? - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಕೇರಳಕ್ಕೆ ಹರಿದು ಬಂದ ಸಹಾಯವೆಷ್ಟು ಗೊತ್ತಾ…?

Radhakrishna Anegundi by Radhakrishna Anegundi
20-08-18, 7 : 31 pm
in ದೇಶ
kerala
Share on FacebookShare on TwitterWhatsAppTelegram

ದೇವರನಾಡು ಕೇರಳ ಪ್ರವಾಹದೊಂದಿಗೆ ಸೆಣಸಾಡುತ್ತಿದೆ.ಶತಮಾನದಲ್ಲಿ ಕಂಡರಿಯದ ಮಳೆ ಕೇರಳವನ್ನು ಜರ್ಜರಿತವನ್ನಾಗಿ ಮಾಡಿದೆ.ಈಗಿನ ಅಂದಾಜಿನ ಪ್ರಕಾರ 19,512 ಕೋಟಿ ನಷ್ಟ ಅಂದಾಜಿಸಲಾಗಿದೆ.ಆದರೆ ಈ ಮೊತ್ತ ಮತ್ತಷ್ಟು ಏರಿಕೆಯಾಗಲಿದೆ.ಯಾಕೆಂದರೆ ಇದು ಪ್ರಾಥಮಿಕ ಅಂದಾಜು ಪಟ್ಟಿ.

ಈ ನಡುವೆ ಕೇರಳಕ್ಕೆ ಸಹಾಯ ಕೂಡಾ ಮಹಾ ಪ್ರವಾಹದಂತೆ ಹರಿದು ಬರುತ್ತದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ 500 ಕೋಟಿ ಮಧ್ಯಂತರ ಪರಿಹಾರ ಘೋಷಿಸಿದ್ದಾರೆ.ಜೊತೆಗೆ ಕೇಂದ್ರ ಸರ್ಕಾರದ ಹಲವು ಯೋಜನೆಗಳು ಕೇರಳವನ್ನು ಮತ್ತೆ ಕಟ್ಟಲು ಸಹಾಯ ಮಾಡಲಿದೆ.

ಇದರೊಂದಿಗೆ ಕೇರಳಕ್ಕೆ ಹರಿದು ಬಂದ ನೆರವಿನ ಒಂದು ನೋಟ ಇಲ್ಲಿದೆ.ಇದು ಪರಿಪೂರ್ಣವಲ್ಲ.ಇಲ್ಲಿ ಸಂಘ ಸಂಸ್ಥೆಗಳ ಮೊತ್ತವನ್ನೂ ನಮೂದಿಸಿಲ್ಲ.

  1. ಗೃಹ ಸಚಿವ ರಾಜ್ ನಾಥ್ ಸಿಂಗ್ ತಕ್ಷಣದ ಪರಿಹಾರ ಕಾರ್ಯಗಳಿಗಾಗಿ 100 ಕೋಟಿ ಸಹಾಯ ನೀಡಿದ್ದಾರೆ.
  2. ದೆಹಲಿ ಸರ್ಕಾರ 10 ಲಕ್ಷ ರೂಪಾಯಿ ಸಹಾಯ ನೀಡುವುದರೊಂದಿಗೆ AAP ಶಾಸಕರು ಹಾಗೂ ಸಂಸದರು ಒಂದು ತಿಂಗಳ ಸಂಬಳವನ್ನು ನೀಡಿದ್ದಾರೆ.
  3. ಒಡಿಸ್ಸಾ ರಾಜ್ಯ ಸರ್ಕಾರ 10 ಕೋಟಿ ಸಹಾಯದೊಂದಿಗೆ 245 ಅಗ್ನಿಶಾಮಕದಳದ ಸಿಬ್ಬಂದಿಗಳನ್ನು ದೋಣಿಯೊಂದಿಗೆ ಕಳುಹಿಸಿಕೊಟ್ಟಿದೆ.
  4. ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ಹಾಗೂ ಸಂಸದರು ಒಂದು ತಿಂಗಳ ಸಂಬಳವನ್ನು ಕೇರಳಕ್ಕೆ ನೀಡಲಿದ್ದಾರೆ.

ಇದರೊಂದಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಕೂಡಾ ಕೇರಳಕ್ಕೆ ಸಹಾಯ ಹಸ್ತ ಚಾಚಿವೆ.

fund

  1. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಒಂದು ತಿಂಗಳ ಸಂಬಳ ಕೇರಳ ಸಿಎಂ ಪರಿಹಾರ ನಿಧಿಗೆ ಕೊಟ್ಟಿದ್ದಾರೆ. ತಮಿಳುನಾಡು ಐಎಎಸ್ ಅಧಿಕಾರಿಗಳು ಒಂದು ದಿನದ ಸಂಬಳ ಹಾಗೂ The Islamic Centre of India ಸಂಘಟನೆ ಈ ಬಾರಿಯ ಈದ್ ಹಬ್ಬದ ವೆಚ್ಚದಲ್ಲಿ ಶೇ10 ರಷ್ಟನ್ನು ಕೇರಳಕ್ಕೆ ದಾನ ಮಾಡುವಂತೆ ಕೋರಿ ಕೊಂಡಿದೆ.
  2. ವಿವಿಧ ಉದ್ಯಮಿಗಳು ಕೂಡಾ ಜನತೆಯ ಸಹಾಯಕ್ಕೆ ಧಾವಿಸಿದ್ದಾರೆ. NRI ಉದ್ಯಮಿ ಎಂ.ಎ. ಯೂಸೂಫ್ 5 ಕೋಟಿ, ಇತ್ತೀಚೆಗೆ ಮೀನು ಮಾರಾಟ ಮೂಲಕ ವೈರಲ್ ಆಗಿದ್ದ ವಿದ್ಯಾರ್ಥಿನಿ ಹನನ್ 1.5 ಲಕ್ಷ, ತಮಿಳುನಾಡಿನ ಡಿಎಂಕೆ 1 ಕೋಟಿ, ಬಿಜೆಪಿ ಸಂಸದ ವರುಣ್ ಗಾಂಧಿ 2 ಲಕ್ಷ ಸಹಾಯ ನೀಡಿದ್ದಾರೆ.
  3. ದೇಶದ ನಾನಾ ಭಾಗದ ಚಿತ್ರ ನಟರು ಲಕ್ಷ ಲಕ್ಷ ಲೆಕ್ಕದಲ್ಲಿ ಸಹಾಯ ಚಾಚಿದ್ದಾರೆ
  4. ಇನ್ನು ಟಿವಿ ವಾಹಿನಿ ಸಂಸ್ಥೆಗಳಾದ ಸ್ಟಾರ್ ಇಂಡಿಯಾ 2 ಕೋಟಿ, ಸನ್ ಟಿವಿ ನೆಟ್ ವರ್ಕ್ 1 ಕೋಟಿ, ಏಷ್ಯಾನೆಟ್ ಸಿಬ್ಬಂದಿಗಳು 25 ಲಕ್ಷ ನೀಡಲು ಸಮ್ಮತಿಸಿದ್ದಾರೆ
  5. ಕೆಲ ಬ್ಯಾಂಕುಗಳು ವಿಧಿಸುತ್ತಿದ್ದ ಶುಲ್ಕವನ್ನು ಕಡಿತಗೊಳಿಸಿ ಕೇರಳಕ್ಕೆ ಸಹಾಯ ಮಾಡಿದೆ. ಜೊತೆಗೆ ಒಂದು ನಿಗದಿತ ಮೊತ್ತವನ್ನು ನೀಡುವುದಾಗಿ ಹೇಳಿದೆ.
  6. ಕರ್ನಾಟಕದ ಕೊಲ್ಲೂರು, ಸುಬ್ರಹ್ಮಣ್ಯ ಸೇರಿದಂತೆ ದಕ್ಷಿಣ ಭಾರತದ ಅನೇಕ ದೇವಾಲಯಗಳಿಂದ ಸಹಾಯ ಸಿಕ್ಕಿದೆ
  7. ಕತಾರ್ ಸರ್ಕಾರ 35 ಕೋಟಿ ಮೊತ್ತದ ಸಹಾಯ ಮಾಡುವುದಾಗಿ ಹೇಳಿದೆ.
  8. ಮಾತಾ ಅಮೃತಾನಂದಮಯಿ ಮಠ 10 ಕೋಟಿ ಸಹಾಯ ಮಾಡುತ್ತಿರುವುದಾಗಿ ಹೇಳಿದೆ.

ಇದು ಸದ್ಯಕ್ಕೆ ಸಿಕ್ಕಿರುವ ಮಾಹಿತಿ. ಈ ವರದಿ ತಯಾರಿಸುವ ಹೊತ್ತಿಗೆ ಬಂದ ಮೊತ್ತಗಳಿಗೆ ಲೆಕ್ಕವಿಲ್ಲ. ಕೇರಳ ಸರ್ಕಾರ ಮಾಡಿಕೊಂಡ ಮನವಿಗೆ ಸ್ಪಂದಿಸಿರುವ ಜನ ಸಾಮಾನ್ಯರು 100 ರೂಪಾಯಿಂದ ಹಿಡಿದು ಸಹಾಯ ಮಾಡಿದ್ದಾರೆ.

Tags: Keralaಕೇರಳ
ShareTweetSendShare

Discussion about this post

Related News

ಮುಸ್ಲಿಂ ವಿವಾಹ ವಿಚ್ಛೇದನ ಕಾನೂನು ರದ್ದುಗೊಳಿಸಿದ ಅಸ್ಸಾಂ

ಮುಸ್ಲಿಂ ವಿವಾಹ ವಿಚ್ಛೇದನ ಕಾನೂನು ರದ್ದುಗೊಳಿಸಿದ ಅಸ್ಸಾಂ

ಕಾಲರಾ ರೋಗಕ್ಕೆ ಲಸಿಕೆ ಬಿಡುಗಡೆ ಮಾಡಿದ ಭಾರತ್ ಬಯೋಟೆಕ್

ಕಾಲರಾ ರೋಗಕ್ಕೆ ಲಸಿಕೆ ಬಿಡುಗಡೆ ಮಾಡಿದ ಭಾರತ್ ಬಯೋಟೆಕ್

ಇ-ಕಾಮರ್ಸ್ ವಿಸ್ತರಣೆ ಕಳವಳಕಾರಿ – ಕೇಂದ್ರ ಸಚಿವ ಪಿಯೂಷ್ ಗೋಯಲ್ ಅಭಿಪ್ರಾಯ

ಇ-ಕಾಮರ್ಸ್ ವಿಸ್ತರಣೆ ಕಳವಳಕಾರಿ – ಕೇಂದ್ರ ಸಚಿವ ಪಿಯೂಷ್ ಗೋಯಲ್ ಅಭಿಪ್ರಾಯ

ಪೋಲೆಂಡಿಂದ ಉಕ್ರೇನ್ ರೈಲಿನಲ್ಲಿ ನರೇಂದ್ರ ಮೋದಿ ಪ್ರಯಾಣ : ಹೇಗಿದೆ ಗೊತ್ತಾ Rail force one

ಸುರಿಯೋ ಮಳೆಯ ನಡುವೆ ರೈತರಿಗೆ ಕೊಡೆ ಹಿಡಿದು ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ

ಭಾರತ- ಮಾಲ್ಡೀವ್ಸ್ ನಡುವಣ ಸಹಕಾರ ವೃದ್ಧಿ – ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್

ವಿಯೆಟ್ನಾಂ ಪ್ರಧಾನಿ ಮಿನ್ ಚಿನ್ ಭಾರತ ಭೇಟಿ – ಪ್ರಧಾನಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ

ಮಾರಿಷಸ್‌ನಲ್ಲಿ ಕೇಂದ್ರ ಸಚಿವ ಎಸ್. ಜೈಶಂಕರ್

 ಕಾಂಗ್ರೆಸ್‌ನಿಂದ ಹಿಂದುಳಿದ ವರ್ಗಕ್ಕೆ ಅನ್ಯಾಯ : ಕೇಂದ್ರ ಗೃಹ ಸಚಿವ ಅಮಿತ್ ಷಾ

ಡೆಂಘೀ ನಿಯಂತ್ರಣ ಕುರಿತು ಕೇಂದ್ರದಿಂದ ಪರಾಮರ್ಶೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್