ಜಯಶ್ರೀ ರಾಮಯ್ಯ ಸಾಕಷ್ಟು ಕನಸುಗಳನ್ನು ಕಂಡಿದ್ದರು. ಆದರೆ ಬದುಕಿನ ನೋವುಗಳು ಅವರನ್ನು ಜರ್ಜರಿತರನ್ನಾಗಿ ಮಾಡಿತ್ತು.
ಬಾಲ್ಯದಿಂದಲೇ ಅನುಭವಿಸಿದ ಹಿಂಸೆಗಳು ಅವರನ್ನು ಕಾಡುತ್ತಿತ್ತು. ಇನ್ನು ತನ್ನ ಸ್ವಂತ ಕಾಲ ಮೇಲೆ ನಿಲ್ಲೋಣ ಅಂದುಕೊಂಡರೂ ಸಮಸ್ಯೆಗಳು ಮುಗಿಯುತ್ತಿರಲಿಲ್ಲ.
ತಾನೊಂದು ಬಗೆದರೆ ವಿಧಿಯೊಂದು ಬಗೆಯಿತು ಅನ್ನುವಂತೆ ಯಾವುದಾದರೂ ಸಮಸ್ಯೆಯಿಂದ ಮುಕ್ತಿ ಪಡೆದರೆ ಮತ್ತೊಂದು ಸಮಸ್ಯೆ ಅವರನ್ನು ಕಾಡುತ್ತಿತ್ತು.
ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆ

ಹಿಂದೊಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದ ಸಂದರ್ಭದಲ್ಲಿ ಜಯಶ್ರೀಯವರಿಗೆ ಧೈರ್ಯ ತುಂಬಿದ್ದ ನಟ ಕಿಚ್ಚ ಸುದೀಪ್, ಹಲವು ಸಲಹೆಗಳನ್ನು ಕೊಟ್ಟಿದ್ದರು. ಮಾತ್ರವಲ್ಲದೆ ನೈತಿಕವಾಗಿ ಬೆಂಬಲ ಸೂಚಿಸಿದ್ದ ಕಿಚ್ಚ ತಮ್ಮದೇ ರೀತಿಯಲ್ಲಿ ಸಹಾಯ ಹಸ್ತ ಕೂಡಾ ಚಾಚಿದ್ದರು.
ಇದನ್ನು ಓದಿ : ಬಾಲ್ಯದ ದೌರ್ಜನ್ಯ ಮರೆಯಲಾಗದೇ ಆತ್ಮಹತ್ಯೆಗೆ ಶರಣಾದ್ರ ಉಪ್ಪು ಹುಳಿ ಖಾರ ನಟಿ…?
ಆ ಸಂದರ್ಭದಲ್ಲಿ ಇನ್ನೆಂದಿಗೂ ನಾನು ಆತ್ಮಹತ್ಯೆ ಯೋಚಿಸುವುದೇ ಇಲ್ಲ ಎಂದು ಭರವಸೆ ಕೊಟ್ಟಿದ್ದರು. ಹಾಗೇ ಭರವಸೆ ಕೊಟ್ಟು 6 ತಿಂಗಳು ಕಳೆದಿಲ್ಲ, ಮತ್ಯಾವುದೋ ಕಾರಣಕ್ಕೆ ಮಾನಸಿಕವಾಗಿ ನೊಂದುಕೊಂಡ ಜಯಶ್ರೀ ಇಹಲೋಕ ತ್ಯಜಿಸಿದ್ದಾರೆ.
Discussion about this post