crossorigin="anonymous"> ಕೊರಗಜ್ಜ koragajja ಸಿನಿಮಾಗೆ ಸಂಕಷ್ಟ : ಕಳಸದಲ್ಲಿ ನಡೆದ ಕಿರಿಕ್ ನ ಅಸಲಿ ಕಥೆಯೇನು - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಕೊರಗಜ್ಜ koragajja ಸಿನಿಮಾಗೆ ಸಂಕಷ್ಟ : ಕಳಸದಲ್ಲಿ ನಡೆದ ಕಿರಿಕ್ ನ ಅಸಲಿ ಕಥೆಯೇನು

ಹಿಂದೊಮ್ಮೆ ಚಿತ್ರ ತಂಡ ಕರಿ ಹೈದ ಕರಿ ಅಜ್ಜ ಚಿತ್ರೀಕರಣ ಮುಕ್ತಾಯವಾಗಿದೆ ಅಂದಿತ್ತು

Radhakrishna Anegundi by Radhakrishna Anegundi
29-10-23, 7 : 52 am
in ಟಾಪ್ ನ್ಯೂಸ್, ದಕ್ಷಿಣ ಕನ್ನಡ
koragajja-film-shooting-shubha-poonja
Share on FacebookShare on TwitterWhatsAppTelegram

ಶುಭ ಪೂಂಜಾ ನಟನೆಯ ಕೊರಗಜ್ಜ koragajja ಸಿನಿಮಾ ಶೂಟಿಂಗ್ ಗೆ ಮತ್ತೆ ವಿಘ್ನ

ಶುಭ ಪೂಂಜಾ ನಟನೆಯ ಕೊರಗಜ್ಜನ koragajja ಕಥೆಯನ್ನು ಆಧರಿಸಿದ ಕರಿ ಹೈದ ಕರಿ ಅಜ್ಜ (Kari Haida Kari Ajja) ಸಿನಿಮಾ ಮತ್ತೆ ಸುದ್ದಿಯಲ್ಲಿದೆ. ತ್ರಿವಿಕ್ರಮ್ ಬೆಳ್ತಂಗಡಿ (Trivikram Belthangadi) ನಿರ್ಮಾಪಕರಾಗಿರುವ ಈ ಸಿನಿಮಾದ ನಿರ್ದೇಶನದ ಹೊಣೆಯನ್ನು ಸುಧೀರ್ ಅತ್ತಾವರ ವಹಿಸಿಕೊಂಡಿದ್ದಾರೆ.

ಕಳೆದ ವರ್ಷದ ನವೆಂಬರ್ ಸೆಟ್ಟೇರಿದ್ದ ಸಿನಿಮಾ, ಇಷ್ಟು ಹೊತ್ತಿಗೆ ಬಿಡುಗಡೆಯ ಸನಿಹ ತಲುಪಬೇಕಿತ್ತು. ಆದರೆ ಚಿತ್ರತಂಡಕ್ಕೆ ಪದೇ ಪದೇ ಅನೇಕ ಅಡ್ಡಿಗಳು ಎದುರಾದ ಕಾರಣ ಚಿತ್ರೀಕರಣದಲ್ಲಿ ವಿಳಂಭವಾಗಿದೆ. ಈ ನಡುವೆ ಅಕ್ಟೋಬರ್ 28 ರಂದು ಚಿಕ್ಕಮಗಳೂರಿನ ಕಳಸದಲ್ಲಿ ಚಿತ್ರೀಕರಣದಲ್ಲಿ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಇದನ್ನೂ ಓದಿ : ಅರ್ಜುನ್ ಸರ್ಜಾ ಪುತ್ರಿಯ ಲವ್ ಸ್ಟೋರಿ : Aishwarya Arjun weds Umapathy Ramaiah

ಕುದುರೆಮುಖ ಸಮೀಪದ ಕಳಸದಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಈ ಹಾಡಿನಲ್ಲಿ ಶುಭಾ ಪೂಂಜಾ ಕಾಣಿಸಿಕೊಳ್ಳುತ್ತಿದ್ದು, ಗಣೇಶ್ ಆಚಾರ್ಯ (Ganesh Acharya) ಕೊರಿಯೋಗ್ರಫಿ ಹೊಣೆ ಹೊತ್ತಿದ್ದರು. ಈ ವೇಳೆ ಏಕಾಏಕಿ ಚಿತ್ರೀಕರಣ ಸ್ಥಳಕ್ಕೆ ಸ್ಥಳೀಯ ಗುಂಪೊಂದು ನುಗ್ಗಿ ಚಿತ್ರೀಕರಣ ಮಾಡದಂತೆ ತಡೆಯುವ ಪ್ರಯತ್ನ ಮಾಡಿದೆ.

ಕೊರಗಜ್ಜ koragajja

ಘಟನೆ ಕುರಿತಂತೆ ಮಾಧ್ಯಮವೊಂದರ ಜೊತೆಗೆ ಮಾತನಾಡಿರುವ ಚಿತ್ರದ ನಿರ್ಮಾಪಕ ತ್ರಿವಿಕ್ರಮ್ ಬೆಳ್ತಂಗಡಿ (Trivikram Belthangadi)  ಕೊರಗಜ್ಜನ ಸಿನಿಮಾ ಮಾಡಬಾರದು ಅನ್ನುವುದೇ ಇಂತಹ ಘಟನೆಗಳಿಗೆ ಕಾರಣ. ದೈವ ನರ್ತಕರೆಂದು ಹೇಳಿಕೊಂಡು ಬಂದು ಇಂತಹ ಗಲಾಟೆ ಮಾಡುತ್ತಿದ್ದಾರೆ. ಈ ಹಿಂದೆಯೂ ಹೀಗಾಗಿದೆ, ಇಂದಿನ ಘಟನೆಯಲ್ಲಿ ಸಿನಿಮಾ ಟೀಮ್ ಗೆ ಯಾವುದೇ ತೊಂದರೆ ಆಗಿಲ್ಲ. ಆದರೆ ಸೆಟ್ ಹಾಳಾಗಿದೆ. ಹೀಗಾಗಿಯೇ ಚಿತ್ರೀಕರಣ ಸ್ಥಗಿತಗೊಳಿಸಿದ್ದೇವೆ ಅಂದಿದ್ದಾರೆ.

ಇನ್ನು ಸುಧೀರ್ ಅತ್ತಾವರ ಘಟನೆ ಕುರಿತಂತೆ ಪ್ರತಿಕ್ರಿಯಿಸಿದ್ದು, ಚಿತ್ರೀಕರಣದ ವೇಳೆ ಶುಭಾ ಪೂಂಜ ಅವರಿಗೆ ಕೆಲ ಯುವಕರು ಕಿರಿಕ್ ಮಾಡಿದ್ದು, ಮನಸ್ಸಿಗೆ ಅತ್ಯಂತ ನೋವು ಉಂಟು ಮಾಡಿದೆ. ಯುವಕರು ಅದ್ಯಾಕೆ ಅಸಭ್ಯ ವರ್ತನೆ ಮಾಡಿದ್ದಾರೆ ಅನ್ನೋದು ಗೊತ್ತಿಲ್ಲ. ಇದೀಗ ಚಿತ್ರಿಕರಣವನ್ನೇ ನಿಲ್ಲಿಸಬೇಕಾದಂತ ಪರಿಸ್ಥಿತಿ ನಿರ್ಮಾಣವಾಯಿತು ಅಂದಿದ್ದಾರೆ. ಅಚ್ಚರಿ ಅನ್ನುವಂತೆ ಸ್ಥಳಕ್ಕೆ ಬಂದ ಯುವಕರು ಸಾಗರದ ಬಿಜೆಪಿ ಘಟಕದವರೆಂದು ಎಂದು ಹೇಳಿಕೊಂಡಿದ್ದಾಗಿ ಸುಧೀರ್ ಮಾಹಿತಿ ನೀಡಿದ್ದು, ಸಾಗರದ ಬಿಜೆಪಿ ಘಟಕಕ್ಕೂ ಈ ಘಟನೆಗೂ ಏನು ಸಂಬಂಧ ಅನ್ನೋದು ಪ್ರಶ್ನೆಯಾಗಿದೆ.

ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಕಳಸದಲ್ಲಿ ನಡೆದ ಈ ಘಟನೆಯ ಬಗ್ಗೆ ಚಿತ್ರತಂಡ ಇದೂವರೆಗೂ ದೂರನ್ನು ದಾಖಲು ಮಾಡಿಲ್ಲ ಯಾಕೆ ಅನ್ನೋದು ಮತ್ತೊಂದು ಪ್ರಶ್ನೆಯಾಗಿದೆ.

ಈ ಚಿತ್ರತಂಡಕ್ಕೆ ಸಮಸ್ಯೆಗಳು ಹೊಸದಲ್ಲ, ಚಿತ್ರೀಕರಣ ಪ್ರಾರಂಭವಾದ ದಿನದಿಂದಲೂ ಸಂಕಷ್ಟಗಳನ್ನು ಚಿತ್ರತಂಡ ಎದುರಿಸುತ್ತಿದೆ.

ಚಿತ್ರೀಕರಣದ ಆರಂಭಕ್ಕೂ ಮೊದಲು ಪುತ್ತೂರಿನಲ್ಲಿ ಸೆಟ್ ನಿರ್ಮಾಣದ ವೇಳೆ ಸೆಟ್ ಕೆಲಸಗಾರರು ಯಾವುದೋ ಆವೇಶಕ್ಕೆ ಅಲ್ಲಲ್ಲೇ ಮೂರ್ಛೆ ಹೋಗತೊಡಗಿದ್ದರು. ಸ್ಥಳಿಯರು ಅರಶಿನ ನೀರನ್ನು ಸಿಂಪಡಿಸಿ, ಸ್ಥಳೀಯ ಆಸ್ಪತ್ರೆಗೂ ದಾಖಲಿಸಿದ್ದರು.ಆ ನಂತ್ರ ಸೆಟ್‌ ಕೆಲಸಕ್ಕೆ ಜನ ಸಿಗದೇ ಪರದಾಡುವಂತಾಗಿತ್ತು.

ಸೆಟ್ ಹಾಕಬೇಕಿದ್ದ ಆ ಜಾಗವು ಕರಾವಳಿಯ ಉಗ್ರ ರೂಪದ ದೈವ ಗುಳಿಗನ ಸ್ಥಳವೆಂದು ಸ್ಥಳಿಯರು ಈ ವೇಳೆ ತಿಳಿಸಿದ್ದರು. ಬಳಿಕ ಪುತ್ತೂರಿನಿಂದ ಬೆಳ್ತಂಗಡಿಯ ಅರಣ್ಯ ಪ್ರದೇಶಕ್ಕೆ ಸೆಟ್ ಕೆಲಸವನ್ನು ಸ್ಥಳಾಂತರ ಮಾಡಲಾಗಿತ್ತು. ಇದಾದ ನಂತರವೂ ಸಮಸ್ಯೆ ಕಾಣಿಸಿಕೊಂಡ ಕಾರಣ, ನಿರ್ದೇಶಕ ಸುಧೀರ್ ಅತ್ತಾವರ ವಿಶೇಷವಾದ ದೈವ ಕಾರ್ಯವೊಂದನ್ನು ನೆರವೇರಿಸಿದ್ದರು ಕೂಡಾ.

ಕೊರಗಜ್ಜ koragajja

ಆದರೆ ಕಳಸದ ಘಟನೆಯ ಬಗ್ಗೆ ಸ್ಥಳೀಯರು ಹೇಳುವುದೇ ಬೇರೆ, ಶೂಟಿಂಗ್ ವೇಳೆ ಅಸಭ್ಯ ವರ್ತನೆ ಅನ್ನುವ ಅರೋಪದಲ್ಲಿ ಅರ್ಥವೇ ಇಲ್ಲ. ಶೂಟಿಂಗ್ ನಡೆಯುತ್ತಿರುವ ಸ್ಥಳಕ್ಕೆ ನಾವು ತೆರೆಳಿದ್ದು ಹೌದು, ಈ ವೇಳೆ ಚಿತ್ರ ತಂಡವನ್ನು ಯಾವ ಸಿನಿಮಾ, ಯಾವ ಹಾಡು ಎಂದು ಪ್ರಶ್ನಿಸಿದ್ದೇವೆ. ಕೊರಗಜ್ಜನ ಹಾಡಿನ ಶೂಟಿಂಗ್ ಎಂದು ತಿಳಿದ ನಾವು, ಇಲ್ಲಿ ಇಂತಹ ಶೂಟಿಂಗ್ ಮಾಡದಂತೆ ತಿಳಿಸಿದ್ದೇವೆ. ಜೊತೆಗೆ ಅವರ ಬಳಿ ಯಾವುದೇ ಅನುಮತಿಯೂ ಇರಲಿಲ್ಲ. ಮಾತ್ರವಲ್ಲದೆ ಈ ವೇಳೆ ಶುಭಾ ಪೂಂಜ ಎಲ್ಲಿ ಇದ್ದರು ಅನ್ನೋ ಮಾಹಿತಿಯೂ ನಮಗಿರಲಿಲ್ಲ. ಹೀಗಾಗಿ ಅವರೊಂದಿಗೆ ಅಸಭ್ಯ ವರ್ತನೆ ಮಾಡಿದ್ದೇವೆ ಅನ್ನೋದು  ಬರೀ ಸುಳ್ಳು ಅಂದಿದ್ದಾರೆ. ಹಾಗಾದ್ರೆ ಸತ್ಯ ಯಾವುದು..?

ಈ ಬಗ್ಗೆ  ಮಾತನಾಡಿರುವ ಶುಭಾ ಪೂಂಜಾ, ನಾನು ಶೂಟಿಂಗ್‌ನಲ್ಲಿ ಭಾಗವಹಿಸಿದ್ದೆ. ಆ ಸಮಯದಲ್ಲಿಯೇ ಒಂದು ಗುಂಪು ಆಗಮಿಸಿತ್ತು. ಆ ಬಗ್ಗೆ ನನಗೇನೂ ಗೊತ್ತಿರಲಿಲ್ಲ. ಕಲಾವಿದರಿಗೆ ಏನೂ ಆಗಬಾರದು ಎಂಬ ಕಾರಣಕ್ಕೆ ನಿರ್ದೇಶಕರು ನಮ್ಮನ್ನು ಅಲ್ಲಿಂದ ಹೋಮ್‌ ಸ್ಟೇ ಬಳಿ ಇದ್ದ ಕ್ಯಾರವಾನ್‌ ಗೆ ಕಳುಹಿಸಿದ್ರು. ಅದಾದ ನಂತರ ಅಲ್ಲೇನೂ ನಡೀತು ಅಂತ ಗೊತ್ತಿಲ್ಲ. ನನಗೆ ಯಾರಿಂದಲೂ ಏನೂ ಸಮಸ್ಯೆಯಾಗಿಲ್ಲ. ಯಾರೂ ನನ್ನ ಕೈ ಹಿಡಿದು ಎಳೆದಿಲ್ಲ ಅಂದಿದ್ದಾರೆ ಶುಭಾ.

Tags: FEATURED
ShareTweetSendShare

Discussion about this post

Related News

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ಮೇಲೆ ಬುಲ್ಡೋಜರ್‌ : ನರೇಂದ್ರ ಮೋದಿ

ಬೆಂಗಳೂರು ಸೇರಿದಂತೆ ದೇಶದ 40 ಸ್ಥಳಗಳಲ್ಲಿ ನಾಳೆ ಬೃಹತ್ ರೋಜ್‌ಗಾರ್ ಮೇಳ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ವಕ್ಫ್ ಹೆಸರಲ್ಲಿ ರೈತರ ಜಮೀನು ಕಬಳಿಕೆಗೆ ಯತ್ನ- ಶಾಸಕ ಶರಣಗೌಡ ಕಂದಕೂರ್ ಆರೋಪ

ತಿಪಟೂರಿನಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಅನುಮತಿ : ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ

ಬಿಜೆಪಿ ನಡೆಗೆ ನಡುಗಿದ ಸರ್ಕಾರ : ಉಪ ಚುನಾವಣೆ ಕಾರಣಕ್ಕೆ ಎಚ್ಚೆತ್ತುಕೊಂಡ ಸರ್ಕಾರ

ಚಿಕ್ಕಬಳ್ಳಾಪುರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ : ನಗರ ಸಭೆ

ಕೆ.ಸಿ. ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆ

ಇಡೀ ಮಾನವೀಯತೆಗೆ ಭಾರತ ನೆಲೆ; ಸಂಸ್ಕೃತಿ ಸಂರಕ್ಷಣೆಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಕರೆ

ಅತಿವೃಷ್ಟಿಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ : ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್