ಬೆಂಗಳೂರು : ಕೊರೋನಾ ಕಾರಣದಿಂದ ದೊಡ್ಡ ಮೊತ್ತದ ನಷ್ಟಕ್ಕೆ ಸಿಲುಕಿರುವ KSRTC ಸಂಸ್ಥೆ ಆದಾಯ ವೃದ್ಧಿಸಿಕೊಳ್ಳಲು ಇನ್ನಿಲ್ಲದ ಸರ್ಕಸ್ ನಡೆಸುತ್ತಿದೆ. ಯಾವ ಮೂಲಗಳಿಂದ ಆದಾಯ ಪಡೆಯಬಹುದು ಎಂದು ಹುಡುಕಾಡುತ್ತಿರುವ ಅಧಿಕಾರಿಗಳು ಇದೀಗ ಬಸ್ ಗಳಲ್ಲಿ ತರಕಾರಿ ಸಾಗಾಟ ನಡೆಸಿದ್ರೆ ಹೇಗೆ ಎಂದು ಚಿಂತಿಸಿದ್ದಾರೆ.
KSRTCಯ ಹಳೆ ಎಸಿ ಬಸ್ ಗಳನ್ನು Alterations ಮಾಡಿ ಕೃಷಿ ಉತ್ಪನ್ನಗಳನ್ನು ರೈತರ ಜಾಗದಿಂದ ಮಾರುಕಟ್ಟೆಗೆ ಸಾಗಿಸುವುದು ಈಗಿರುವ ಪ್ಲಾನ್. ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ,ಕೋಲಾರ, ಹೊಸಕೋಟೆ, ಹಾಗೂ ಬೆಂಗಳೂರು ಸುತ್ತ ಮುತ್ತಲಿನ ಪ್ರದೇಶಗಳಿಗೆ ಈ ಬಸ್ ತೆರಳಲಿದೆ.

ಈ ಪ್ರದೇಶಗಳಿಗೆ ತೆರಳುವ ಬಸ್ ಅಲ್ಲಿ ರೈತರು ಬೆಳೆದ ಹಣ್ಣು, ತರ್ಕಾರಿ, ಸೊಪ್ಪು ಹೀಗೆ ವಿವಿಧ ಉತ್ತನ್ನಗಳನ್ನು ಕೆ ಆರ್ ಮಾರುಕಟ್ಟೆ,ಯಶವಂತಪುರ, ಕಲಾಸಿಪಾಳ್ಯ, ಕೆ ಆರ್ ಪುರ ಮಾರುಕಟ್ಟೆಗಳಿಗೆ ತಲುಪಿಸಲಿದೆ. ಒಂದು ವೇಳೆ ಯಶಸ್ವಿಯಾದರೆ ರಾಜ್ಯದ ಎಲ್ಲಾ ಗದ್ದೆ ತೋಟಗಳಿಗೆ KSRTC ಬಸ್ ಬರಲಿದೆ.
Discussion about this post