ದಕ್ಷಿಣ ಕನ್ನಡ ಜಿಲ್ಲೆ ಅದು ಆಸ್ತಿಕರ ಪಾಲಿನ ಸ್ವರ್ಗ ಅಂದ್ರೆ ತಪ್ಪಿಲ್ಲ. ಕಾರಣ ಇಲ್ಲಿರುವ ಅನೇಕ ದೇವಸ್ಥಾನಗಳು ಆಸ್ತಿಕರ ಸಂಕಷ್ಟಗಳನ್ನು ದೂರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಜೊತೆಗೆ ಇಲ್ಲಿರುವ ಧಾರ್ಮಿಕ ಆಚರಣೆಗಳು ಕರಾವಳಿಯನ್ನು ಶ್ರೀಮಂತಗೊಳಿಸಿದೆ ಕೂಡಾ. ಅದರಲ್ಲೂ ದೈವಾರಾಧನೆ, ನಾಗಾರಾಧನೆಗೆ ವಿಶೇಷ ಸ್ಥಾನವಿರುವ ಜಿಲ್ಲೆಯಲ್ಲಿ ಪ್ರಕೃತಿಯನ್ನು ಆರಾಧಿಸಲಾಗುತ್ತದೆ.
ಈ ನಾಗರಪಂಚಮಿಯ ಶುಭ ದಿನದಂದು ಕರಾವಳಿಯ ಖ್ಯಾತ ನಾಗ ದೇವಸ್ಥಾನವೊಂದನ್ನು ನಿಮಗೆ ಪರಿಚಯಿಸುತ್ತೇವೆ. ನಾಗ ಸನ್ನಿಧಿ ಅಂದ್ರೆ ಘಾಟಿ ಸುಬ್ರಹ್ಮಣ್ಯ ಅಥವಾ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ನೆನಪಾಗುತ್ತದೆ. ಅಷ್ಟೇ ಪ್ರಸಿದ್ಧಿ ಮತ್ತು ಅಷ್ಟೇ ಪವರ್ ದೇವಸ್ಥಾನ ಅಂದ್ರೆ ಅದು ಶ್ರೀ ಕ್ಷೇತ್ರ ಕುಡುಪು.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಾಗ ದೇವತೆಗಳ ದೇವಸ್ಥಾನಗಳಲ್ಲಿ ಶ್ರೀ ಸುಬ್ರಹ್ಮಣ್ಯ ಮೊದಲನೇ ಸ್ಥಾನದಲ್ಲಿದ್ರೆ ಎರಡನೇ ಸ್ಥಾನ ಶ್ರೀಕ್ಷೇತ್ರ ಕುಡುಪುವಿಗೆ ಸಲ್ಲುತ್ತದೆ. ಇಲ್ಲಿ ಅನಂತ ಪದ್ಮನಾಭ ಮುಖ್ಯ ದೇವರಾಗಿದ್ದು ಉಳಿದಂತೆ ಅನೇಕ ದೈವ ದೇವರನ್ನು ಇಲ್ಲಿ ಅರಾಧಿಸಲಾಗುತ್ತದೆ.
ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಷ್ಟೇ ಪಾವಿತ್ಯತೆಯನ್ನು ಹೊಂದಿರುವ ಕುಡುಪು ಕ್ಷೇತ್ರದಲ್ಲಿ ನಾಗನಿಗೆ ಸಂಬಂಧಿಸಿದ ಎಲ್ಲಾ ದೋಷಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ನಾಗ ತಂಬಿಲ, ನಾಗದೇವರಿಗೆ ಕ್ಷೀರಾಭಿಷೇಕ, ತಂಬಿಲ, ಸೀಯಾಳಾಭಿಷೇಕ, ಆಶ್ಲೇಷಾ ಬಲಿ ಪೂಜೆಯು ಇಲ್ಲಿ ನಡೆಯುತ್ತದೆ.

ಮಹಾಶೇಷ, ಮಹಾವಿಷ್ಣು ಮತ್ತು ಸುಬ್ರಹ್ಮಣ್ಯ ಇಲ್ಲಿ ನೆಲೆಸಿದ್ದಾರೆ ಅನ್ನುವುದನ್ನು ಕ್ಷೇತ್ರದ ಕಥೆ ಹೇಳುತ್ತದೆ. ಜೊತೆಗೆ ಜಾನಪದ ಕಥೆಗಳು ಇದಕ್ಕೆ ಆಧಾರವಾಗಿದೆ. ಇನ್ನು ಇಲ್ಲಿ ಯಾರೇ ಬಂದು ಭಕ್ತಿಯಿಂದ ಪ್ರಾರ್ಥಿಸಿದರೆ, ಅವರಿಗೆ ದೋಷ ನಿವಾರಣೆಯಾಗುವುದಲ್ಲದೆ, ಸಂತಾನ ಭಾಗ್ಯವೂ ಲಭಿಸುತ್ತದೆ ಎಂದು ಹೇಳಲಾಗಿದೆ.
Discussion about this post