ಬೆಂಗಳೂರು : ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಜನ ಸಾಮಾನ್ಯರಿಗೆ ಹೊರೆಯಾಗೋದಿಲ್ಲ ಎಂದು ಬಿಜೆಪಿ ಬೆಂಬಲಿತ ಆರ್ಥಿಕ ತಜ್ಞರು ಭರವಸೆ ಕೊಟ್ಟಿದ್ದರು.
ಆದರೆ ಇದೀಗ ಅವೆಲ್ಲವನ್ನೂ ಸುಳ್ಳು ಮಾಡಿ ಬಜೆಟ್ ಮಂಡಿಸಿದ ಮೂರೇ ದಿನದಲ್ಲಿ ಅಡುಗೆ ಅನಿಲದರ ದರವನ್ನು ಸಿಕ್ಕಾಪಟ್ಟೆ ಏರಿಸಲಾಗಿದೆ.
ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು 200 ರೂಪಾಯಿ ಏರಿಸಿದರೆ, ಗೃಹ ಬಳಕೆಯ ಸಿಲಿಂಡರ್ ದರವನ್ನು 25 ರೂಪಾಯಿಯಷ್ಟು ಏರಿಸಲಾಗಿದೆ.
ಹೀಗಾಗಿ ವಾಣಿಜ್ಯ ಸಿಲಿಂಡರ್ ಗೆ 1572 ರೂಪಾಯಿ ಮತ್ತು 722 ರೂಪಾಯಿಯನ್ನು ಗೃಹ ಬಳಕೆ ಸಿಲಿಂಡರ್ ನೀಡಬೇಕಾಗುತ್ತದೆ. ಗೃಹ ಬಳಕೆ ಸಿಲಂಡರ್ ಅನ್ನು ಮನೆಗೆ ತಲುಪಿಸಿದ ಎಜೆಂಟ್ ಗಳಿಗೆ ಒಂದಿಷ್ಟು ಕಾಸು ಬೇರೆ ಕೊಡಬೇಕು. ಅಲ್ಲಿಗೆ 800 ರೂಪಾಯಿ ಫಿಕ್ಸ್.
ಅಲ್ಲಿಗೆ ಜನ ಸಾಮಾನ್ಯರು ಇನ್ನು ಮುಂದೆ ಅಡುಗೆ ಮಾಡೋದನ್ನು ನಿಲ್ಲಿಸಿ ನರೇಂದ್ರ ಮೋದಿಯವರ ಹೆಸರು ಹೇಳಿಕೊಂಡು ಉಪವಾಸ ಕೂರಬೇಕಾದ ಪರಿಸ್ಥಿತಿ ಬಂದರೂ ಅಚ್ಚರಿ ಇಲ್ಲ.
ವಾಣಿಜ್ಯ ಬಳಕೆಯ ಗ್ಯಾಸ್ ದರ ಏರಿಕೆಯಿಂದ ಹೋಟೆಲ್ ಗಳಲ್ಲಿ ಆಹಾರದ ದರವೂ ದುಬಾರಿಯಾಗಲಿದೆ.
ಇಷ್ಟು ಮಾತ್ರವಲ್ಲದೆ ಪೆಟ್ರೋಲ್, ಡೀಸೆಲ್ ದರವೂ ಕೂಡಾ ಏರಿಕೆಯಾಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ 89.54ಕ್ಕೆ ತಲುಪಿದ್ದು ಡೀಸೆಲ್ ಬೆಲೆ 81.44 ರ ಗಡಿ ದಾಟಿದೆ.
ಪೆಟ್ರೋಲ್ ಡಿಸೇಲ್ ದರ ಏರಿಕೆಯೂ ಕೂಡಾ ಜನ ಸಾಮಾನ್ಯರ ಮೇಲೆ ಪರೋಕ್ಷವಾಗಿ ಹೊರೆಯಾಗಲಿದೆ.
ಪೆಟ್ರೋಲ್ ಡಿಸೇಲ್ ದರ ಏರಿಕೆಯಿಂದ ಸರಕುಗಳ ದರ ಏರಿಕೆಯಾಗುತ್ತದೆ, ತರ್ಕಾರಿ ದರ ಗಗನ ಮುಖಿಯಾಗುತ್ತದೆ. ಬಸ್ ಪ್ರಯಾಣ ದರವೂ ಏರಿಕೆಯಾಗುತ್ತದೆ.
ಈಗಾಗಲೇ ಕೊರೋನಾ ಕಾರಣದಿಂದ ಜನ ಸಂಕಷ್ಟದಲ್ಲಿದ್ದಾರೆ. ಆ ನಡುವೆ ದರ ಏರಿಕೆಯ ಬಿಸಿಯಿಂದ ಮತ್ತಷ್ಟು ಸಂಕಷ್ಟಗಳು ಮುಂದೆ ಕಾದಿದೆ.
ಆದರೆ ದರ ಏರಿಕೆ ಬಗ್ಗೆ ಮಾತನಾಡಿರುವ ರಾಜ್ಯ ಇಂಧನ ಬಂಕ್ ಮಾಲೀಕರ ಸಂಘ, ದರ ಏರಿಕೆ ಅನ್ನುವುದು ನಿತ್ಯದ ಪ್ರಕ್ರಿಯೆ. ಇದು ಬಜೆಟ್ ಏಫೆಕ್ಟ್ ಅಲ್ಲ ಅಂದಿದೆ.
Discussion about this post