ಬೆಂಗಳೂರು : ಶ್ರೀರಾಮ್ ಕಿರುತೆರೆ ಪ್ರೇಕ್ಷಕರ ಪಾಲಿಗೆ ಚಿರಪರಿಚಿತ ಹೆಸರು. ಅದರಲ್ಲೂ ಟಿ ಎನ್ ಸೀತಾರಾಮ್ ನಿರ್ದೇಶನದ ಮಗಳು ಜಾನಕಿ ಧಾರಾವಾಹಿಯಲ್ಲಿ ಶ್ಯಾಮಲತ್ತೆ ಮಗ ಶ್ಯಾಮಸುಂದರನಾಗಿ ಬಣ್ಣ ಹಚ್ಚಿದ್ದ ಶ್ರೀರಾಮ್ ತಮ್ಮ ಅಭಿನಯದ ಮೂಲಕ ಎಲ್ಲರಿಗೂ ಆತ್ಮೀಯರಾಗಿದ್ದರು.

ಇದಕ್ಕೂ ಮುಂಚೆ ಶ್ರೀರಾಮ್ ರಾಧಾ ರಮಣ ಧಾರಾವಾಹಿಯಲ್ಲಿ ನಾಯಕ ರಮಣನ ಬೆಸ್ಟ್ ಫ್ರೆಂಡ್ ಸುಮೇಧ ಆಗಿ ಕಾಣಿಸಿಕೊಂಡಿದ್ದರು. ನಂತರ ಮಗಳು ಜಾನಕಿ. ಆದಾದ ಬಳಿಕ ಇದೀಗ ಹೂಮಳೆ ಧಾರಾವಾಹಿಯಲ್ಲಿ ಶ್ರೀರಾಮ್ ಬ್ಯುಸಿಯಾಗಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೂಮಳೆ ಧಾರಾವಾಹಿಯಲ್ಲಿ ಕಾರ್ಪೋರೇಟರ್ ಕಾವೇರಿ ಮಗ, ನಾಯಕಿ ಲಹರಿಯ ಅಣ್ಣ ಉದಯ್ ಆಗಿ ಶ್ರೀರಾಮ್ ನಟಿಸುತ್ತಿದ್ದಾರೆ.

ಇದೇ ಶ್ರೀರಾಮ್ ಹಸಮಣೆ ತುಳಿಯಲು ಸಜ್ಜಾಗಿದ್ದು, ಸುಪ್ರಿಯಾ ಅವರೊಂದಿಗೆ ನಿಶ್ಚಿತಾರ್ಥ ಕೂಡಾ ಮುಗಿಸಿದ್ದಾರೆ. ಎಂಎಸ್ಸಿ ಪದವಿ ಪಡೆದಿರುವ ಸುಪ್ರಿಯಾ ರಿಸರ್ಚ್ ಸೈಂಟಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಮ್ಮ ಮದುವೆ ಬಗ್ಗೆ ಹೇಳಿಕೊಂಡಿರುವ ಶ್ರೀರಾಮ್ ಇದೇ ವರ್ಷ ಏಪ್ರಿಲ್ 26 ರಂದು ಸುಪ್ರಿಯಾ ಅವರಿಗೆ ತಾಳಿ ಕಟ್ಟೋದಾಗಿ ಹೇಳಿದ್ದಾರೆ.

ಇನ್ನು ಭಾವಿ ಪತ್ನಿಯ ಬಗ್ಗೆ ಮಾತನಾಡಿರುವ ಶ್ರೀರಾಮ್ ಸುಪ್ರಿಯಾ ಗೆ ನನ್ನ ನಟನಾ ಬದುಕಿನ ಬಗ್ಗೆ ತುಂಬಾ ಗೌರವ ಇಟ್ಟುಕೊಂಡಿದ್ದಾರೆ. ಹೀಗಾಗಿ ನನ್ನ ನಟನಾ ಬದುಕಿನಲ್ಲಿ ಮುಂದುವರಿಯುತ್ತೇನೆ ಅಂದಿದ್ದಾರೆ.
Discussion about this post