ಬೆಂಗಳೂರು : ಮದುವೆಯಾಗಿ ಮಕ್ಕಳಿದ್ದರೂ ತಮ್ಮ ಸ್ವಂತದವರನ್ನು ಬಿಟ್ಟು ಲಿವಿಂಗ್ ಟುಗೆದರ್ ನಲ್ಲಿದ್ದ ಜೋಡಿಯ ದುರಂತ ಅಂತ್ಯದ ಕಥೆಯಿದು.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು, ನೆಲ್ಲೂರು ಗ್ರಾಮದ ರಮ್ಯ ಹಾಗೂ ಚಿಕ್ಕಮೊಗ ಆರು ವರ್ಷಗಳ ಹಿಂದೆ ಒಂದೇ ಕಂಪನಿ ಸೇರಿದ್ದರು.
ಕಂಪನಿ ಸೇರಿದ ಸಂದರ್ಭದಲ್ಲಿ ಅವರಿಬ್ಬರಿಗೂ ಪರಿಚಯವಿರಲಿಲ್ಲ. ದಿನಕಳೆದಂತೆ ಇಬ್ಬರಿಗೆ ಪರಿಚಯವಾಗಿದೆ. ಒಂದೇ ಊರಿನವರಾದ ಕಾರಣ ಪರಿಚಯ ಸ್ನೇಹಕ್ಕೆ ತಿರುಗಿ ಪ್ರೀತಿಯಾಗಿದೆ.
ಇದಾದ ಬಳಿಕ ನೇಕಾರರ ಕಾಲೋನಿಯಲ್ಲಿ ಮದುವೆಯಾಗದೆ ಒಂದೇ ಮನೆಯಲ್ಲಿ ಜೊತೆಗೆ ವಾಸವನ್ನೂ ಪ್ರಾರಂಭಿಸಿದ್ದಾರೆ.
ಕಳೆದ ಭಾನುವಾರ ಇವರಿಬ್ಬರ ನಡುವೆ ಅದ್ಯಾವುದೋ ಕಾರಣಕ್ಕೆ ಜಗಳವಾಗಿದೆ. ಈ ವೇಳೆ ಸಿಚ್ಚಿಗೆದ್ದ ಚಿಕ್ಕಮೊಗ ರಮ್ಯಾ ತಲೆಯನ್ನು ಗೋಡೆಗೆ ಗುದ್ದಿದ್ದಾನೆ, ಬಳಿಕ ಖಾಲಿ ಸಿಲಿಂಡರ್ ನಿಂದ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ರಮ್ಯ ಮೃತಪಟ್ಟಿದ್ದಾಳೆ.
ಈ ವೇಳೆ ಗಾಬರಿಗೊಂಡ ಚಿಕ್ಕಮೊಗ ಅಡುಗೆ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಈ ನಡುವೆ ಪ್ರತೀ ದಿನ ತನ್ನ ತಾಯಿಗೆ ರಮ್ಯ ಕರೆ ಮಾಡುತ್ತಿದ್ದಳು. ಎರಡು ದಿನಗಳಿಂದ ಮಗಳ ಕರೆ ಬಾರದೆ ಆತಂಕಗೊಂಡ ತಾಯಿ, ಮಗಳ ಮನೆಗೆ ಹೋಗಿ ವಿಚಾರಿಸುವಂತೆ ಸೋದರ ಸಂಬಂಧಿಗೆ ಹೇಳಿದ್ದಾರೆ.
ಅದೇ ರೀತಿ ಮಂಗಳವಾರ ರಾತ್ರಿ ಸಂಬಂಧಿ ಬಂದಾಗ ಮನೆಯ ಬಾಗಿಲು ಹಾಕಿತ್ತು. ಬಾಗಿಲು ಬಡಿದರೂ, ಕರೆದರೂ ಪ್ರತಿಕ್ರಿಯೆ ಬಾರಲಿಲ್ಲ.
ಗಾಬರಿಗೊಂಡ ಅವರು ಸ್ಥಳೀಯರ ನೆರವಿನೊಂದಿಗೆ ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಇದೀಗ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೌಟುಂಬಿಕ ಕಾರಣದಿಂದ ಮಂಡ್ಯದಿಂದ ತನ್ನ ಕುಟುಂಬ ತೊರೆದು ಬಂದಿದ್ದ ರಮ್ಯ ಹೋಟೆಲ್ ನಡೆಸುತ್ತಿದ್ದರು. ಬಳಿಕ ಗಾರ್ಮೇಟ್ಸ್ ಕೆಲಸಕ್ಕೆ ಸೇರಿದ್ದರು. ಈ ವೇಳೆ ಅಲ್ಲೇ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ಚಿಕ್ಕಮೊಗನ ಪರಿಚಯವಾಗಿತ್ತು
Discussion about this post