ಶಿರಡಿ ಸಾಯಿಬಾಬಾ… ಭಕ್ತರ ಪಾಲಿನ ಕಾಮಧೇನು, ಬೇಡಿದ್ದನ್ನು ಕೊಡುವ ಅಕ್ಷಯ ಪಾತ್ರೆ. ಕಷ್ಟ ಎಂದು ಕೈ ಮುಗಿದವರನ್ನು ಎಂದಿಗೂ ಕೈಬಿಟ್ಟವರಲ್ಲ ಸಾಯಿಬಾಬಾ. ಹಾಗಂತ ಸಾಯಿಬಾಬಾನನ್ನು ಒಲಿಸಿಕೊಳ್ಳಲು ಶಿರಡಿ ಹೋಗಬೇಕಾಗಿಲ್ಲ. ಮನೆಯಲ್ಲೇ ಇದ್ದು ನಿಷ್ಕಲ್ಮಶ ಭಕ್ತಿಯಿಂದ ಪ್ರಾರ್ಥಿಸಿದರೆ ಸಾಕು, ವರವನ್ನು ಕರುಣಿಸುತ್ತಾರೆ.
ಅನಂತ ಕೋಟಿ ಬ್ರಹ್ಮಾಂಡ ನಾಯಕ ರಾಜಾಧಿರಾಜ ಯೋಗಿ ರಾಜ ಸಚ್ಛಿದಾನಂದ ಜಗದ್ಗುರುವನ್ನು ಭಕ್ತರು ಪ್ರೀತಿಯಿಂದ ಸಾಯಿನಾಥ ಮಹಾರಾಜ್ ಎಂದೇ ಕರೆಯುತ್ತಾರೆ ತನ್ನ ಪ್ರೀತಿಯ ಭಕ್ತರು ಓಂ ಸಾಯಿ ರಾಮ್ ಅಂದ್ರೆ ಸಾಕು, ಬಂಡೆಯಂತ ಕಷ್ಟಗಳು ಕರಗಿ ನೀರಾಗಿರುತ್ತದೆ.
ಇನ್ನು ಸಾಯಿಬಾಬ ಪವಾಡವನ್ನು ಅನುಭವಿಸದ ಭಕ್ತರು ಯಾರಿದ್ದಾರೆ ಹೇಳಿ. ಬಾಬಾ ನಾಮಸ್ಮರಣೆಯೊಂದರಿಂದ ಸಕಲವನ್ನು ಪಡೆದವರಿದ್ದಾರೆ. ಸಕಲ ಸಂಕಷ್ಟಗಳನ್ನು ಗೆದ್ದವರಿದ್ದಾರೆ.
ಹೀಗೆ ಸಾಯಿ ಬಾಬಾ ಪವಾಡವನ್ನು ತಮ್ಮ ಜೀವನದಲ್ಲಿ ಅನುಭವಿಸಿದವರು ರಾಘವೇಂದ್ರ ರಾಜ್ ಕುಮಾರ್. ಈ ಬಗ್ಗೆ ಅವರು ಹಲವು ವರ್ಷಗಳ ಹಿಂದೆಯೇ ಹೇಳಿಕೊಂಡಿದ್ದಾರೆ.

ಸ್ಟ್ರೋಕ್ ಗೆ ತುತ್ತಾಗಿದ್ದ ರಾಘವೇಂದ್ರ ರಾಜ್ ಕುಮಾರ್ ಆರೋಗ್ಯ ವೃದ್ಧಿಗಾಗಿ ಸುತ್ತದ ಆಸ್ಪತ್ರೆಗಳಿಲ್ಲ, ಇನ್ನು ಡಾ.ರಾಜ್ ಕುಮಾರ್ ಮನೆತನ ಹೇಳಿ ಕೇಳಿ ದೇವರ ಮೇಲೆ ಅಪಾರ ಭಕ್ತಿಯನ್ನು ಇಟ್ಟುಕೊಂಡಿದೆ. ಹೀಗಾಗಿ ಆರೋಗ್ಯ ವೃದ್ಧಿ ಸಲುವಾಗಿ ಅನೇಕ ದೇವಸ್ಥಾನಗಳಿಗೂ ರಾಘವೇಂದ್ರ ರಾಜ್ ಕುಮಾರ್ ಭೇಟಿ ಕೊಟ್ಟಿದ್ದಾರೆ. ಈ ವೇಳೆ ಮಂಡ್ಯದಲ್ಲಿರುವ ಸಾಯಿ ಬಾಬಾ ಮಂದಿರಕ್ಕೆ ಭೇಟಿ ಕೊಟ್ಟರೆ ಸಕಲ ಸಂಕಷ್ಟಗಳು ನಿವಾರಣೆಯಾಗುತ್ತದೆ ಅನ್ನುವ ಮಾಹಿತಿ ಸಿಕ್ಕಿತ್ತು. ಹೀಗಾಗಿ ಕುಟುಂಬ ಸದಸ್ಯರೊಂದಿಗೆ ಅವರು ಹಿನ್ನಲೆಯಲ್ಲಿ ಇಲ್ಲಿಗೂ ಅವರು ಭೇಟಿ ಕೊಟ್ಟಿದ್ದರು.

ರಾಘವೇಂದ್ರ ರಾಜ್ ಕುಮಾರ್ ಭೇಟಿ ಕೊಟ್ಟ ವೇಳೆ ಮಹಾಮಂಗಳಾರತಿ ನಡೆಯುತ್ತಿತ್ತು. ಭಕ್ತಿಯಿಂದ ಅದರಲ್ಲಿ ಪಾಲ್ಗೊಂಡ ಅವರು ಬಳಿಕ ಭಕ್ತರೆಲ್ಲರೂ ಎರಡೂ ಕೈಗಳನ್ನು ಎತ್ತಿ ಸಾಯಿಬಾಬಾನಿಗೆ ಜೈಕಾರ ಹಾಕುತ್ತಿದ್ರೆ ಅಚ್ಚರಿ ಅನ್ನುವಂತೆ ರಾಘವೇಂದ್ರ ರಾಜ್ ಕುಮಾರ್ ಕೂಡಾ ತನ್ನ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿದ್ರಂತೆ.
ಬಾಬಾ ಅವರ ಪವಾಡದಿಂದ ಸಂತೋಷಗೊಂಡ ರಾಘವೇಂದ್ರ ರಾಜ್ ಕುಮಾರ್ 6 ತಿಂಗಳ ಒಳಗೆ ಮಂಡ್ಯದ ಬಾಬಾನಿಗೊಂದು ಬೆಳ್ಳಿ ಸಿಂಹಾಸನವೊಂದನ್ನು ಕಾಣಿಕೆಯಾಗಿ ಕೊಟ್ಟಿದ್ದಾರೆ.
Discussion about this post