ಮಂಗಳೂರು : ನಗರದ ಬಜಾಲ್ ಪಕ್ಕಲಡ್ಕದ ಅಬ್ದುಲ್ ಖಾದ್ ಪುತ್ರ ಅಬ್ಧುಲ್ ಮುಬಶೀರ್ ಗೆ ಕಳೆದ ಎರಡು ವಾರಗಳಿಂದ ಜ್ವರ ಕಾಣಿಸಿಕೊಂಡಿತ್ತು.
ಕೊರೋನಾ ಅಬ್ಬರಿಸುವ ಸಂದರ್ಭದಲ್ಲಿ ಕಾಣಿಸಿಕೊಂಡ ಜ್ವರ ಸಹಜವಾಗಿಯೇ ಮನೆಯವರಲ್ಲಿ ಆತಂಕ ಹುಟ್ಟು ಹಾಕಿತ್ತು.
ಹೀಗಾಗಿ ಸ್ಥಳೀಯ ವೈದ್ಯರಲ್ಲಿ ತೋರಿಸಿದರೆ ಸಾಮಾನ್ಯ ಜ್ವರವೆಂದು ಮದ್ದು ಕೊಟ್ಟಿದ್ದರು. ಆದರೆ ಜ್ವರ ಕಡಿಮೆಯಾಗಲಿಲ್ಲ. ಜ್ವರದೊಂದಿಗೆ ಕೆಮ್ಮು ಬೇರೆ ಕಾಣಿಸಿಕೊಂಡಿತು.
ಹೀಗಾಗಿ ಆತಂಕಗೊಂಡ ಮನೆಯವರು ಮಕ್ಕಳ ತಜ್ಞ ವೈದ್ಯ ಡಾ.ರಾಮ್ ಗೋಪಾಲ್ ಶಾಸ್ತ್ರಿಯವರ ಬಳಿ ತೋರಿಸಿದ್ದಾರೆ. ಈ ವೇಳೆ ಶ್ವಾಸಕೋಶದಲ್ಲಿ ತೊಂದರೆ ಇರಬಹುದೆಂದು ಅಂದಾಜಿಸಿದ ವೈದ್ಯರು ಎಕ್ಸ್ ರೇ ತೆಗೆಯಲು ಸೂಚಿಸಿದ್ದಾರೆ.

ಈ ವೇಳೆ ಶ್ವಾಸಕೋಶದಲ್ಲಿ ಸೂಜಿಯೊಂದು ಪತ್ತೆಯಾಗಿದೆ. ತಕ್ಷಣ ದೇರಳಕಟ್ಟೆಯ ಕೆ ಎಸ್ ಹೆಗ್ಡೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಳಿಕ ಡಾ. ನಂದಗೋಪಾಲ್ ನೇತೃತ್ವದ ತಂಡ ಪೈಪ್ ಮಾದರಿಯ ವಸ್ತುವೊಂದರ ಸಹಾಯದಿಂದ ಗುಂಡುಸೂಜಿಯನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. ಬುಧವಾರ ಒಂದು ದಿನ ಆಸ್ಪತ್ರೆಯಲ್ಲಿದ್ದ ಹುಡುಗ ಗುರುವಾರ ಮನೆಗೆ ಮರಳಿದ್ದಾನೆ.
ಅಚ್ಚರಿ ಅಂದ್ರೆ 7 ತರಗತಿಯಲ್ಲಿ ಕಲಿಯುತ್ತಿರುವ ಹುಡುಗನಿಗೆ ಸೂಜಿ ಬಾಯಿ ಅಥವಾ ಮೂಗಿನೊಳಗೆ ಹೋಗಿದ್ದೇ ಗೊತ್ತೇ ಇಲ್ಲವಂತೆ.
Discussion about this post