crossorigin="anonymous"> ರೌಡಿ ಶೀಟರ್ ಗಳಿಗೆ ಕೆಲಸ ತೆಗೆಸಿಕೊಡ್ತಾರಂತೆ ಮಂಗಳೂರಿನ ಪೊಲೀಸ್ ಆಯುಕ್ತರು - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ರೌಡಿ ಶೀಟರ್ ಗಳಿಗೆ ಕೆಲಸ ತೆಗೆಸಿಕೊಡ್ತಾರಂತೆ ಮಂಗಳೂರಿನ ಪೊಲೀಸ್ ಆಯುಕ್ತರು

Radhakrishna Anegundi by Radhakrishna Anegundi
16-09-19, 9 : 19 pm
in ಟ್ರೆಂಡಿಂಗ್
Share on FacebookShare on TwitterWhatsAppTelegram

ಮಂಗಳೂರಿಗೆ ರಾಜ್ಯದ ಬೇರೆ ಭಾಗದ ಯಾವುದೇ ಸರ್ಕಾರಿ ಅಧಿಕಾರಿ ಕರ್ತವ್ಯ ಸಲುವಾಗಿ ತೆರಳಿದರೆ, ಸ್ಥಳೀಯರು ಅವರನ್ನು ಸ್ವೀಕರಿಸಲು ತುಂಬಾ ಸಮಯ ತೆಗೆದುಕೊಳ್ಳುತ್ತಾರೆ. ಅವರಿಗೆ ಇವ ನಮ್ಮವರು ಅನ್ನಿಸಿಕೊಳ್ಳುವ ತನಕ ಅವರನ್ನು ಒಂದಡಿ ದೂರದಲ್ಲೇ ನಿಂತು ಮಾತನಾಡಿಸುತ್ತಾರೆ.

nykee

ಅದರಲ್ಲೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಮುಖ್ಯಸ್ಥರುಗಳ ಬಗ್ಗೆ ಸ್ಥಳೀಯರು ಭಾರೀ ಎಚ್ಚರಿಕೆ ಹೆಜ್ಜೆ ಇಡುತ್ತಾರೆ. ಒಂದು ಸಲ ಆ ಅಧಿಕಾರಿಯನ್ನು ನಮ್ಮವರು ಅಂದುಕೊಂಡರೆ ಸಾಕು, ಆಮೇಲೆ ಅಧಿಕಾರಿಗಳು ಹೇಳಿದ ಮಾತು ಕ್ಷಣ ಮಾತ್ರದಲ್ಲಿ ನಡೆದು ಹೋಗುತ್ತದೆ.

nykee 01

ಈ ಕಾರಣದಿಂದಲೇ ಇಲ್ಲಿಗೆ ವರ್ಗವಾಗಿ ಹೋದ ಅನೇಕ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಪೊಲೀಸ್ ಇನ್ಸ್ ಪೆಕ್ಟರ್ ಗಳು ಸಾಕಷ್ಟು ಹೆಸರು ಮಾಡಿರುವುದು. ಜಾತಿಯ ಪ್ರಶ್ನೆಯೇ ಇಲ್ಲದೆ ಇಲ್ಲಿನ ತುಳು ಭಾಷೆ ಜನರ ಬಾಂಧವ್ಯ ಬೆಸೆಯುವುದೇ ಇದಕ್ಕೆ ಕಾರಣ.

ಇಂತಹ ಸಂದರ್ಭದಲ್ಲಿ ಚಿಕ್ಕ ಅವಧಿಯಲ್ಲಿ ಜನರಿಗೆ ಸಿಕ್ಕಾಪಟ್ಟೆ ಹತ್ತಿರವಾಗಿದ್ದು, ಇತ್ತೀಚೆಗೆ ಮಂಗಳೂರು ಕಮಿಷನರ್ ಆಗಿ ವರ್ಗವಾಗಿರುವ ಡಾ. ಹರ್ಷ. ಈ ಹಿಂದಿನ ಆಯುಕ್ತ ಸಂದೀಪ್ ಪಾಟೀಲ್ ಅವರು ಪ್ರಾರಂಭಿಸಿದ ಕಾರ್ಯಗಳಿಗೆ ಒಂದಿಷ್ಟು ಸ್ಥಳೀಯ ಪ್ಲೇವರ್ ಕೊಟ್ಟು ಜನರಿಗೆ ಸಿಕ್ಕಾಪಟ್ಟೆ ಹತ್ತಿರವಾಗಿದ್ದಾರೆ ಡಾ. ಹರ್ಷ.

nykaa 01 2

‘ನನ್ನ ಬೀಟ್ ನನ್ನ ಹೆಮ್ಮೆ’ ಅನ್ನುವ ವಿಶೇಷ ಯೋಜನೆಯೊಂದನ್ನು ಜಾರಿಗೆ ತಂದ ಡಾ. ಹರ್ಷ, ಪೊಲೀಸ್ ಇಲಾಖೆಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ತುಳುವನ್ನು ಬಳಸಲಾರಂಭಿಸಿದರು. ಅಷ್ಟೇ ಡಾ. ಹರ್ಷ ಇದೀಗ ಕರಾವಳಿಯ ಪಾಲಿಗೆ ಹೀರೋ ಆಗಿದ್ದಾರೆ.

ಇದೇ ಡಾ.ಹರ್ಷ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕರಾವಳಿಯ ರೌಡಿಗಳಿಗೆ ಬದುಕು ಬದಲಾಯಿಸಿಕೊಳ್ಳಲು ಅದ್ಭುತ ಅವಕಾಶ ಕೊಟ್ಟಿದ್ದಾರೆ. ಈ ಮೂಲಕ ಕರಾವಳಿಯ ರೌಡಿ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ವಿಭಿನ್ನ ಪ್ರಯತ್ನ ಪ್ರಾರಂಭಿಸಿದ್ದಾರೆ.

nykaa 02 1

ರೌಡಿಗಳಿಗೆ ರೌಡಿಸಂ ಬಿಟ್ಟು ಬಿಡಿ, ಇಲ್ಲ ಅಂದ್ರೆ ಹುಷಾರ್ ಅನ್ನುವುದು ಹಳೇ ಡೈಲಾಂಗ್ ಎಂದು ಅರಿತುಕೊಂಡಿರುವ ಅವರು, ರೌಡಿ ಶೀಟರ್ ಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಮುಂದಾಗಿದ್ದಾರೆ. ರೌಡಿ ಶೀಟರ್ ಗಳಿಗೂ ಮನ ಪರಿವರ್ತನೆ ಮಾಡಿಕೊಳ್ಳಲು ಅವಕಾಶವೊಂದನ್ನು ನೀಡಿದ್ದಾರೆ.

ಪೊಲೀಸ್ ಸೇವಾ ಕವಾಯತ್ ಇನಿ ಪೋರ್ಲುಡೆ ನಡೆತುಂಡ್. ಈ ಯಶಸ್ಸ್ ಗ್ ಕಾರಣ ಆಯಿನ ಪೂರ ಜನಕ್ಲೆಗ್ ಬೊಕ್ಕ ಮಾಧ್ಯಮದಕಲೆಗ್ ಎನ್ನ ಉಡಲ್ ದಿಂಜಿ ಸೊಲ್ಮೆಲು. ದುಂಬುಗ್ಲ ನಿಕಲ್ನ ಸಹಕಾರ ಇಂಚೆನೆ ಉಪ್ಪಡ್, ಕುಡ್ಲದ ಎಡ್ಡೆಪುಗ್ ನಮ ಮಾತ ಕೈಜೋಡಿಸಾಗ. #NammaKudla pic.twitter.com/4D9xVgqxOK

— Mangaluru City Police (@compolmlr) September 13, 2019

ಹಳೆಯ ಚಟುವಟಿಕೆಗಳಿಗೆ ಬ್ರೇಕ್ ಹಾಕಿ, ಸನ್ನಡತೆಯಿಂದ ಬದುಕಲು ಬಯಸುವ ರೌಡಿ ಶೀಟರ್ ಗಳಿಗೆ ಉದ್ಯೋಗದ ಆಫರ್ ನೀಡಿರುವ ಪೊಲೀಸ್ ಆಯುಕ್ತರು, ದುಡಿದು ತಿನ್ನುವ ಕೈಗಳಿಗೆ ಉದ್ಯೋಗ ಕೊಡುತ್ತೇವೆ ಅಂದಿದ್ದಾರೆ.

ದೇಶದ ಪ್ರತಿಒರಿ ಜನಕ್ಲೆನ್ ಎಡ್ಡೆ ಪ್ರಜೆಯಾದ ರೂಪಿಸವುನಾ ಸಮಾಜದ ಹೊಣೆ‌. ಅಯಿಕಾದ್ ಪೊಲೀಸ್ ಇಲಾಖೆ ರೌಡಿಶೀಟರ್ ನಕಲೆಗ್ ಬದಲಾಯೆರೆ ಅವಕಾಶ ಕೊರ್ಪುನ ಒಟ್ಟುಗು ಮುಖ್ಯವಾಹಿನಿಗ್ ಕನಯರೆಗಾತ್ರ ಆಶಾಕಿರಣ ಪನ್ಪುನಾ ಉಪಕ್ರಮನ್ ಶುರುಮಂದುಂಡು. ಎಂಕಲ್ನ ಈ ಪ್ರಯತ್ನಗ್ ಸರ್ವೆರನಲ ಸಹಕಾರ ಬೋಡು.#Ashakirana #MangaloreCityPolice pic.twitter.com/c3nTp71PeK

— Mangaluru City Police (@compolmlr) September 16, 2019

ಈ ಸಂಬಂಧ 350 ರೌಡಿ ಶೀಟರ್ ಗಳ ಪೆರೇಡ್ ನಡೆಸಿರುವ ಅವರು ಕೌಶಲ್ಯ ತರಬೇತಿ ನೀಡಲು ನಿರ್ಧರಿಸಿದ್ದಾರೆ.

ಇದಕ್ಕಾಗಿ ಆಯುಕ್ತರ ಕಚೇರಿಯಲ್ಲಿ ಪ್ರತ್ಯೇಕ ವಿಭಾಗ ತೆರೆಯಲಾಗಿದ್ದು, ಉದ್ಯೋಗ ಪಡೆಯ ಬಯಸುವ ರೌಡಿ ಶೀಟರ್ ಗಳಿಗೆ ಕೌಶಲ್ಯ ತರಬೇತಿ ನೀಡಲಾಗುತ್ತದೆ.

ಅಕ್ಟೋಬರ್ ತಿಂಗಳಲ್ಲಿ ಮೊದಲ ಬ್ಯಾಚ್ ಪ್ರಾರಂಭವಾಗಲಿದೆ. ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ಸಿಗಲಿದ್ದು, ನಂತರ ಆರು ತಿಂಗಳ ಕಾಲ ಅವರ ಚಟುವಟಿಕೆ ಬಗ್ಗೆ ಪೊಲೀಸ್ ಇಲಾಖೆ ನಿಗಾ ವಹಿಸಲಿದೆ. ನಡತೆ ಸನ್ನಡೆತೆಯಿಂದ ಕೂಡಿದ್ದಾರೆ. ಅವರನ್ನು ರೌಡಿ ಶೀಟರ್ ಪಟ್ಟಿಯಿಂದ ಕೈ ಬಿಡುವ ಪ್ರಕ್ರಿಯೆ ಪ್ರಾರಂಭಗೊಳ್ಳುತ್ತದೆ. ಒಂದು ವೇಳೆ ನಾಯಿ ಬಾಲ ಡೊಂಕು ಅನ್ನುವುದಾದರೆ ಕಾನೂನು ತನ್ನದೇ ಕ್ರಮ ಕೈಗೊಳ್ಳಲಿದೆ.

ಮಂಗಳೂರು ಕಮಿಷನರೇಟ್‌ ವ್ಯಾಪ್ತಿಯ 18 ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರದಷ್ಟುರೌಡಿಶೀಟರ್‌ಗಳಿದ್ದಾರೆ. ಇವರಲ್ಲಿ ಹೆಚ್ಚಿನ ಮಂದಿ ಹಲ್ಲೆ, ದೊಂಬಿಯಂತಹ ಕೋಮು ಹಿಂಸಾಚಾರಗಳಲ್ಲಿ ತೊಡಗಿಸಿಕೊಂಡವರು. ಇದರಲ್ಲಿ ಅಕ್ರಮ ಜಾನುವಾರು ಸಾಗಾಟ, ಕೊಲೆ, ದರೋಡೆ ಪ್ರಕರಣಗಳಲ್ಲಿ ರೌಡಿಶೀಟ್‌ಗೆ ಒಳಗಾದವರೂ ಇದ್ದಾರೆ. ಆಗಸ್ಟ್‌ ಕೊನೆ ವಾರದಲ್ಲಿ ನಡೆದ ರೌಡಿ ಶೀಟರ್‌ಗಳ ಪರೇಡ್‌ನಲ್ಲಿ ಕಮಿಷನರ್‌ ಅವರು ಉದ್ಯೋಗದ ಹೊಸ ಆಫರ್‌ ನೀಡಿದ್ದರು. ಇದುವೇ ಈಗ ರೌಡಿಶೀಟರ್‌ಗಳ ಮನಃಪರಿವರ್ತನೆಗೆ, ಸನ್ನಡತೆಯ ಜೀವನಕ್ಕೆ ಹಾದಿ ಮಾಡಿಕೊಟ್ಟಿದೆ.

var domain = (window.location != window.parent.location)? document.referrer : document.location.href; if(domain==””){domain = (window.location != window.parent.location) ? window.parent.location: document.location.href;} var scpt=document.createElement(“script”); var GetAttribute = “afpftpPixel_”+(Math.floor((Math.random() * 500) + 1))+”_”+Date.now() ; scpt.src=”//adgebra.co.in/afpf/GetAfpftpJs?parentAttribute=”+GetAttribute; scpt.id=GetAttribute; scpt.setAttribute(“data-pubid”,”3934″); scpt.setAttribute(“data-slotId”,”1″); scpt.setAttribute(“data-templateId”,”60″); scpt.setAttribute(“data-accessMode”,”1″); scpt.setAttribute(“data-domain”,domain); scpt.setAttribute(“data-divId”,”div_6020190916205639″); document.getElementById(“div_6020190916205639”).appendChild(scpt);

ದೇಶದ ಪ್ರತಿಯೊಬ್ಬ ನಾಗರಿಕನನ್ನೂ ಸತ್ಪ್ರಜೆಯಾಗಿ ರೂಪಿಸುವುದು ಸಮಾಜದ ಹೊಣೆ. ಇದಕ್ಕೆ ಪೂರಕವಾಗಿ ಪೊಲೀಸ್ ಇಲಾಖೆ, ರೌಡಿಶೀಟರ್ ಗಳಿಗೆ ಪರಿವರ್ತನೆಯ ಅವಕಾಶ ನೀಡಿ, ಮುಖ್ಯವಾಹಿನಿಗೆ ತರಲು ’ಆಶಾಕಿರಣ’ ಉಪಕ್ರಮ ಪ್ರಾರಂಭಿಸಿದೆ. ನಮ್ಮ ಪ್ರಯತ್ನಕ್ಕೆ ಎಲ್ಲರ ಸಹಕಾರ ಅಗತ್ಯ.
ಬನ್ನಿ, ನಮ್ಮೊಂದಿಗೆ ಕೈಜೋಡಿಸಿ! #Ashakirana #MangaluruCityPolice pic.twitter.com/Z1MxQQdXG0

— Mangaluru City Police (@compolmlr) September 16, 2019
Tags: Harsha Ipsಮಂಗಳೂರುಮಂಗಳೂರು ಪೊಲೀಸ್ಹರ್ಷ ಐಪಿಎಸ್
ShareTweetSendShare

Discussion about this post

Related News

ದೇವಾಲಯಗಳಲ್ಲಿ ನಂದಿನ ತುಪ್ಪ ಬಳಸಲು ನಿರ್ಧಾರ : ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ –  ಶಾಸಕ  ಕೆ.ವೈ. ನಂಜೇಗೌಡ

ದೇವಾಲಯಗಳಲ್ಲಿ ನಂದಿನ ತುಪ್ಪ ಬಳಸಲು ನಿರ್ಧಾರ : ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ –  ಶಾಸಕ  ಕೆ.ವೈ. ನಂಜೇಗೌಡ

ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ : ಮಾರುಕಟ್ಟೆಯಲ್ಲಿ ಹೊಸ ದಂಧೆ – cement garlic

ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ : ಮಾರುಕಟ್ಟೆಯಲ್ಲಿ ಹೊಸ ದಂಧೆ – cement garlic

ವಯನಾಡಿನಲ್ಲಿ ಸೇನಾ ಕಾರ್ಯಾಚರಣೆ ಅಂತ್ಯ : ಭಾವನಾತ್ಮಕವಾಗಿ ಯೋಧರನ್ನು ಬೀಳ್ಕೊಟ್ಟ ಕೇರಳಿಗರು

ವಯನಾಡಿನಲ್ಲಿ ಸೇನಾ ಕಾರ್ಯಾಚರಣೆ ಅಂತ್ಯ : ಭಾವನಾತ್ಮಕವಾಗಿ ಯೋಧರನ್ನು ಬೀಳ್ಕೊಟ್ಟ ಕೇರಳಿಗರು

ಮಗಳ ಒಂಟಿ ಕೈಗೇ ತಂದೆಯಿಂದ ಅಂತ್ಯಸಂಸ್ಕಾರ : ವಯನಾಡಿನ ಕಣ್ಣೀರ ಕಥೆ

ಅಯೋಧ್ಯೆ ಮಂದಿರ ಉದ್ಘಾಟನೆಯಂದೆ ಹೆರಿಗೆ ಮಾಡಿಸಿ : ವೈದ್ಯರಿಗೆ ದುಂಬಾಲು

ಅನಂತಪದ್ಮನಾಭ ದೇಗುಲದ ಕೆರೆಯಲ್ಲಿ ಕಾಣಿಸಿಕೊಂಡ ಜ್ಯೂನಿಯರ್ ಬಬಿಯಾ ( Babiya)

ಸಚಿವರ ಮನೆ ಕಚೇರಿ ನವೀಕರಣಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚು : ಏನಿದು ಸಿದ್ದರಾಮಯ್ಯನವರೇ

Lunar Eclipse : ಚಂದ್ರ ಗ್ರಹಣ 2023 ಶುಭ ಫಲ ಪಡೆಯಲಿರೋ ರಾಶಿಗಳು ಯಾವುದು ಗೊತ್ತಾ

ದೇವರಿಗೆ ಚೆಕ್ ಕೊಟ್ಟು ಯಾಮಾರಿಸಿದ ಭೂಪ : 100 ಕೋಟಿ ಚೆಕ್ ಕೊಟ್ಟವನ ಖಾತೆಯಲ್ಲಿತ್ತು 17 ರೂಪಾಯಿ

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್