ಪ್ರವೀಣ್ ನೆಟ್ಟಾರ ಹತ್ಯೆ ಪ್ರಕರಣದ ಬೆನ್ನಲ್ಲೇ ಮಂಗಳೂರಿನಲ್ಲಿ ಯುವಕನೊಬ್ಬನ ಹತ್ಯೆಯಾಗಿದೆ.(Mangalore Murder) ಬಸವರಾಜ್ ಬೊಮ್ಮಾಯಿ ಮಂಗಳೂರಿನಲ್ಲಿರುವ ಸಂದರ್ಭದಲ್ಲೇ ಕೊಲೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಮಂಗಳೂರು (Mangaluru) : ಪ್ರವೀಣ್ ನೆಟ್ಟಾರ ಹತ್ಯೆ ಪ್ರಕರಣ ಪರಿಹಾರವಾಗುವ ಮುನ್ನ ಮಂಗಳೂರಿನಲ್ಲಿ ಯುವಕನೊಬ್ಬನ ಬರ್ಬರ ಹತ್ಯೆ ನಡೆದಿದೆ. ಮಂಗಳೂರು ಹೊರವಲಯದ ಸುರತ್ಕಲ್ ನಲ್ಲಿ ಈ ಘಟನೆ ನಡೆದಿದ್ದು,(Mangalore Murder) ಇಂದು ರಾತ್ರಿ 8 ರಿಂದ 8.30ರ ಸುಮಾರಿಗೆ ಈ ಕೃತ್ಯ ನಡೆದಿದೆ.
ಮೃತನನ್ನು ಮಂಗಳಪೇಟೆಯ ಮಹಮ್ಮದ್ ಫಾಝೀಲ್ (fazil murder) ಎಂದು ಗುರುತಿಸಲಾಗಿದೆ. (Mangalore Murder) ಪಾಝೀಲ್ ಸ್ಥಳೀಯ ಗ್ಯಾಸ್ ಏಜೆನ್ಸಿ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಗೊತ್ತಾಗಿದೆ. ಮತ್ತೆ ಕೆಲವರ ಪ್ರಕಾರ ಫಾಝಿಲ್ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅನ್ನಲಾಗಿದೆ.
ಇದನ್ನು ಓದಿ : 68th National Film Awards : 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಫುಲ್ ಲಿಸ್ಟ್ ಇಲ್ಲಿದೆ
ಚಪ್ಪಲಿ ಖರೀದಿ ಸಲುವಾಗಿ ಅಂಗಡಿಗೆ ಬಂದಿದ್ದ ಪಾಝೀಲ್ ಅಂಗಡಿಯ ಎದುರುಗಡೆ ನಿಂತಿದ್ದ.ಈ ವೇಳೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ತಲವಾರಿನಿಂದ ಏಕಾಏಕಿ ದಾಳಿ ನಡೆಸಿದ್ದಾರೆ. ಈ ವೇಳೆ ಹಲ್ಲೆಕೋರರಿಂದ ಪರಾರಿಯಾಗಲು ಫಾಝಿಲ್ ರಸ್ತೆ ಕಡೆಗೆ ಓಡಿ ಹೋಗಿದ್ದಾನೆ. ಆದರೆ ಸಾಧ್ಯವಾಗದೇ ಮತ್ತೆ ಅಂಗಡಿಯ ಕಡೆಗೆ ಓಡಿ ಬಂದಿದ್ದಾನೆ. ಈ ವೇಳೆ ನೆಲಕ್ಕೆ ಬಿದ್ದ ಫಾಝಿಲ್ ನನ್ನು ಮುಸುಕುಧಾರಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ.
ತಕ್ಷಣ ಫಾಝಿಲ್ ನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸೇರಿದಂತೆ ಹಿಡಿಯ ಅಧಿಕಾರಿಗಲು ದೌಡಾಯಿಸಿದ್ದಾರೆ. ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಕೂಡಾ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಗಳಿದೆ.
ಬಜ್ಪೆ,ಸುರತ್ಕಲ್, ಪಣಂಬೂರು, ಮೂಲ್ಕಿ ಸೇರಿದಂತೆ 4 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

ಕರಾವಳಿಯಲ್ಲಿ ಕಳೆದ 1 ವಾರದಿಂದ ಮೂರು ಕೊಲೆಗಳು ಸಂಭವಿಸಿದೆ.ಜುಲೈ 19 ರಂದು ಮಸೂದ್ ಅನ್ನುವವನ ಮೇಲೆ ಹಲ್ಲೆ ನಡೆಸಲಾಗಿತ್ತು ಜುಲೈ 21 ರಂದು ಈತ ಮೃತಪಟ್ಟಿದ್ದ. ಜುಲೈ 26 ರಂದು ಪ್ರವೀಣ್ ಮೇಲೆ ದಾಳಿ ನಡೆಸಲಾಗಿತ್ತು. ಇಂದು ಫಾಜಿಲ್ ಮೇಲೆ ದಾಳಿ ಮಾಡಿ ಹತ್ಯೆ ಮಾಡಲಾಗಿದೆ.
Discussion about this post