crossorigin="anonymous"> ಶಾಲೆ ಉಳಿಸಲು ಮನೆ ಮನೆಗೆ ಕಾಣಿಕೆ ಡಬ್ಬಿ ಕೊಟ್ಟ ಮೇಷ್ಟ್ರು - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
ಬೆಳ್ತಂಗಡಿ

ಶಾಲೆ ಉಳಿಸಲು ಮನೆ ಮನೆಗೆ ಕಾಣಿಕೆ ಡಬ್ಬಿ ಕೊಟ್ಟ ಮೇಷ್ಟ್ರು

Radhakrishna Anegundi by Radhakrishna Anegundi
05-09-21, 12 : 45 pm
in ಟ್ರೆಂಡಿಂಗ್, ರಾಜ್ಯ
teacher day spl1
Share on FacebookShare on TwitterWhatsAppTelegram

ಮಂಗಳೂರು : ಭವಿಷ್ಯದ ಸತ್ ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು. ಆದರೆ ಬದಲಾದ ಕಾಲಘಟ್ಟದಲ್ಲಿ ಶಿಕ್ಷಕ ವೃತ್ತಿ ಅನ್ನುವುದು ಕೇವಲ ವೃತ್ತಿಯಾಗಿ ಉಳಿದುಕೊಂಡಿದೆ. ಹಿಂದೆಲ್ಲಾ ಹಾಗಿರಲಿಲ್ಲ ಶಿಕ್ಷಕರು ಅಂದ್ರೆ ಅವರು ಸಮಾಜ ಸುಧಾರಕರಾಗಿದ್ದರು. ತನ್ನ ಮನೆಯ ಸಮಸ್ಯೆಯನ್ನು ಸೈಡಿಗಟ್ಟು ಊರ ಮಕ್ಕಳ ಹಿತಕಾಯುವ ದೇವರಾಗಿದ್ದರು. ಆದ್ರೆ ಈಗ್ಲೂ ಅಂತಹ ಶಿಕ್ಷಕರಿಲ್ಲವೇ ಖಂಡಿತಾ ಇದ್ದಾರೆ. ಹುಡುಕುತ್ತಾ ಹೋದ್ರೆ ಇಂತಹ ನೂರಾರು ಶಿಕ್ಷಕರು ಸಿಗುತ್ತಾರೆ. ಅಂತಹುದರಲ್ಲಿ ಒಬ್ಬರು ಬೆಳ್ತಂಗಡಿ ತಾಲೂಕಿನ ಕಾಣಿಕೆ ಡಬ್ಬಿ ಮೇಷ್ಟ್ರು.

ಬೆಳ್ತಂಗಡಿ ತಾಲೂಕಿನ ಕಟ್ಟದಬೈಲು ಶಾಲೆ ಶಿಕ್ಷಕರ ಕೊರತೆ, ಕುಸಿಯುವ ಭೀತಿಯಲ್ಲಿದ್ದ ಕಟ್ಟಡದ ಚಾವಣಿ ಹಾಗೂ ಮೂಲಭೂತ ಸೌಕರ್ಯಗಳ ಕೊರತೆಯ ಕಾರಣದಿಂದ ಮುಚ್ಚುವ ಹಂತ ತಲುಪಿತ್ತು. ಈ ವೇಳೆ ದೇವದೂತರಂತೆ ಬಂದವರು ಶಿಕ್ಷಕ ಎಡ್ವರ್ಡ್ ಡಿಸೋಜಾ. ಶಾಲೆಗೆ ಮರು ಜೀವ ನೀಡಬೇಕು ಅನ್ನುವ ಗುರಿಯನ್ನಿಟುಕೊಂಡೇ ಸ್ವ ಇಚ್ಛೆಯಿಂದ ಇಲ್ಲಿಗೆ ವರ್ಗಾವಣೆ ಬಯಸಿದ ಅವರು 2003ರ  ಜುಲೈ 15 ರಂದು ಸೇರ್ಪಡೆಗೊಂಡರು.

ಹೀಗೆ ಬಂದವರೇ ಮೊದಲು ಶಾಲೆಗೆ ಮರುಜೀವ ಕೊಡುವ ಪಣತೊಟ್ಟರು. ಇದಕ್ಕಾಗಿ ದೇಣಿಗೆ ಸಂಗ್ರಹಿಸಿದ ರೀತಿಯೇ ವಿಭಿನ್ನ ಮತ್ತು ವಿಶಿಷ್ಟ. ಮೊದಲು ಊರಿನ ಪ್ರತಿಯೊಂದು ಮನೆಗೂ ಕಾಣಿಕೆ ಡಬ್ಬಿ ನೀಡಿ ಶಾಲೆಗಾಗಿ ದಿನಕ್ಕೊಂದು ರೂಪಾಯಿ ನೀಡುವಂತೆ ಮನವಿ ನೀಡಿದರು. ತಮ್ಮ ಮನೆಯಲ್ಲೂ ಕಾಣಿ ಡಬ್ಬಿ ಇಟ್ಟು ಅದಕ್ಕೆ 11 ರೂಪಾಯಿ ಕಾಣಿಕೆ ಹಾಕತೊಡಗಿದರು. ಈ 11 ರೂಪಾಯಿ ಸಲುವಾಗಿ ಬಸ್ ಹತ್ತಲಿಲ್ಲ. ಐದಾರು ಕಿ.ಮೀ.‌ದೂರ ನಿತ್ಯ ನಡೆದು ಆ ಉಳಿತಾಯದ 11 ರೂ.ಗಳನ್ನು ಪ್ರತಿದಿನ ಡಬ್ಬಿಗೆ ಹಾಕಿದರು.

ಹೀಗೆ ಕಾಣಿಕೆ ಡಬ್ಬಿಯಿಂದ 1,071 ದಿನಗಳಲ್ಲಿ ರೂ. 3,33,333 ಸಂಗ್ರಹವಾಯ್ತು. ಜೊತೆಗೆ ಉಳಿದ ಹಣಕ್ಕಾಗಿ ಊರ ಪರವೂರ ದಾನಿಗಳು, ಜನಪ್ರತಿನಿಧಿಗಳು, ಇಲಾಖೆ ಸಹೋದ್ಯೋಗಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಹೀಗೆ ಎಲ್ಲೆಲ್ಲಿ ಧನ ಸಹಾಯ ಸಿಗಬಹುದೋ ಅಲ್ಲಿ ಪ್ರಯತ್ನಿಸಿ 1 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಶಾಲೆಯನ್ನು ಅಭಿವೃದ್ಧಿ ಪಡಿಸಿದರು. ಈ ಮೂಲಕ ಶಾಲೆಯ ಭಾಗ್ಯದ ಬಾಗಿಲು ತೆರೆಯಿತು.

ಇನ್ನು ಈ ಕಾಣಿಕೆ ಡಬ್ಬಿ ಸಂಪ್ರದಾಯ ಈಗ್ಲೂ ಮುಂದುವರಿದಿದ್ದು ಹಣವನ್ನು ವಿದ್ಯಾರ್ಥಿಗಳ ಪುಸ್ತಕ ವಿತರಣೆ, ಬ್ಯಾಗ್ ವಿತರಣೆ, ಪ್ರೋತ್ಸಾಹ ಧನ ವಿತರಣೆ, ಪ್ರತಿಭಾ ಪುರಸ್ಕಾರ ಭಾವೈಕ್ಯತಾ ಹೊರಸಂಚಾರ ಕಾರ್ಯಕ್ರಮಗಳಿಗೆ ಬಳಸಲಾಗುತ್ತಿದೆ. ಜೊತೆಗೆ ಶಿಕ್ಷಕರ ಕೊರತೆ ನೀಗಿಸಲು ಗೌರವ ಶಿಕ್ಷಕರನ್ನು ನೇಮಿಸಿ ಇವರಿಗೆ ವೇತನವನ್ನು ನೀಡುವ ಉದ್ದೇಶದಿಂದ ವಜ್ರ ನಿಧಿ ಎಂಬ ಯೋಜನೆ ಹಾಕಿಕೊಂಡರು.

ಶಾಲಾ ವಾರ್ಷಿಕೋತ್ಸವದಲ್ಲಿ 5 ರೂ. ಮುಖಬೆಲೆಯ ಅದೃಷ್ಟ ಚೀಟಿ ಮಾರಾಟ ಮಾಡಿ ಜೊತಗೆ 60 ದಾನಿಗಳಿಂದ ದಿನಕ್ಕೆ 3 ರೂ.ನಂತೆ ಸಂಗ್ರಹಿಸಿ 400 ದಿನಗಳಲ್ಲಿ 1,200 ರೂ. ಸಂಗ್ರಹಿಸಿ ಪರವೂರ ದಾನಿಗಳಿಂದ 4,44,444 ರೂ. ಸಂಗ್ರಹಿಸಿ ವಜ್ರಮಹೋತ್ಸವದ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಿದರು. ಇದರಿಂದ ವಾರ್ಷಿಕ ರೂ. 60,000 ದಂತೆ ನಿರಂತರ 15 ವರ್ಷಗಳಲ್ಲಿ ಗೌರವ ಶಿಕ್ಷಕರಿಗೆ ಸಂಭಾವನೆ ನೀಡಲಾಗುತ್ತಿದೆ. ಇನ್ನು ವಜ್ರ ನಿಧಿ ಯೋಜನೆ ಕಾಣಿಕೆ ಡಬ್ಬಿ ಮೇಷ್ಟ್ರು ಕೊಟ್ಟ ಮೊತ್ತ 22,222 ರೂಪಾಯಿ.

ಅಷ್ಟಕ್ಕೆ ಎಡ್ವರ್ಡ್ ಡಿಸೋಜಾ ಅವರ ಕಾರ್ಯ ನಿಲ್ಲಲಿಲ್ಲ, ಅಕ್ಷರ ದಾಸೋಹ ಸಿಬ್ಬಂದಿ ಹಾಗೂ ಓರ್ವ ಗೌರವ ಶಿಕ್ಷಕಿ ಉದ್ಯೋಗ ಕಳೆದುಕೊಂಡ ಬಳಿಕ ಮಾಸಿಕ ರೂ 1,000 ಪಿಂಚಣಿ ನೀಡುವ ವ್ಯವಸ್ಥೆಯನ್ನೂ ವಜ್ರ ಸಂಜೀವಿನಿ ಮೂಲಕ ಮಾಡಿದ್ದಾರೆ. ಇದಕ್ಕಾಗಿ 10 ತಿಂಗಳು ಮಾಸಿಕ 500 ರೂಪಾಯಿಗಳನ್ನು ಅವರಿಂದ ಕಟ್ಟಿಸಿ ಎರಡು ತಿಂಗಳು ಇವರು ಅವರ ಕಂತನ್ನು ಕಟ್ಟುವುದರ ಮೂಲಕ ವಾರ್ಷಿಕ ರೂ. 3,000 ದಂತೆ ಒಟ್ಟು 33,000 ರೂ.ಗಳನ್ನು ಅವರ ಖಾತೆಗೆ ಜಮೆ ಮಾಡಿದ್ದಾರೆ.  ಹೀಗೆ ಇವರ ಸಾಧನೆಯ ಪಟ್ಟಿ ಬೆಳೆಯುತ್ತದೆ.

ಇನ್ನು ಶಾಲೆಯ ಏಳಿಗೆ ಮಾತ್ರವಲ್ಲದೆ ಊರಿನ ಏಳಿಗೆಯ ಬಗ್ಗೆಯೂ ತುಡಿಯುತ್ತಿರುವ ಇವರು 2011ರಿಂದ ಶಾಲೆಯ ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿರುವ 200 ಕುಟುಂಬಗಳಲ್ಲಿ ಹೆಚ್ಚಿನವರಿಗೆ ಪ್ಲಾಸ್ಟಿಕ್ ಸುಡದಂತೆ ,ಅಲ್ಲಲ್ಲಿ ಎಸೆಯದಂತೆ ಮನವರಿಕೆ ಮಾಡಿದ್ದಾರೆ. ನೂರಾರು ಮನೆಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್ ಗಳನ್ನು ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸುವ ಮೂಲಕ ಸ್ವಚ್ಛ ಭಾರತದ ಕಲ್ಪನೆಯನ್ನೇ ಅಂದೇ ಸಾಕಾರಗೊಳಿಸಿದ್ದಾರೆ.

ಇಂತಹ ಶಿಕ್ಷಕ ಎಡ್ವರ್ಡ್ ಡಿಸೋಜಾ ಅವರಿಗೆ 2021ರ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ.

ಮಾಹಿತಿ : ಲಕ್ಷ್ಮೀ  ಮಚ್ಚಿನ ಪತ್ರಕರ್ತರು

Tags: BelthangadyEdward D’SouzaKattadabailuMAIN
Share4TweetSendShare

Discussion about this post

Related News

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ಮೇಲೆ ಬುಲ್ಡೋಜರ್‌ : ನರೇಂದ್ರ ಮೋದಿ

ಬೆಂಗಳೂರು ಸೇರಿದಂತೆ ದೇಶದ 40 ಸ್ಥಳಗಳಲ್ಲಿ ನಾಳೆ ಬೃಹತ್ ರೋಜ್‌ಗಾರ್ ಮೇಳ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ವಕ್ಫ್ ಹೆಸರಲ್ಲಿ ರೈತರ ಜಮೀನು ಕಬಳಿಕೆಗೆ ಯತ್ನ- ಶಾಸಕ ಶರಣಗೌಡ ಕಂದಕೂರ್ ಆರೋಪ

ತಿಪಟೂರಿನಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಅನುಮತಿ : ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ

ಬಿಜೆಪಿ ನಡೆಗೆ ನಡುಗಿದ ಸರ್ಕಾರ : ಉಪ ಚುನಾವಣೆ ಕಾರಣಕ್ಕೆ ಎಚ್ಚೆತ್ತುಕೊಂಡ ಸರ್ಕಾರ

ಚಿಕ್ಕಬಳ್ಳಾಪುರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ : ನಗರ ಸಭೆ

ಕೆ.ಸಿ. ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆ

ಇಡೀ ಮಾನವೀಯತೆಗೆ ಭಾರತ ನೆಲೆ; ಸಂಸ್ಕೃತಿ ಸಂರಕ್ಷಣೆಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಕರೆ

ಅತಿವೃಷ್ಟಿಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ : ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್