ದೇಶದ ಪ್ರಖ್ಯಾತ ಮಾವು ಬೆಳೆಗಾರ,ಹೊಸ ತಳಿಗಳ ಸಂಶೋಧಕ ಪದ್ಮಶ್ರಿ ಹಾಜಿ ಕೈಮುಲ್ಲಾ ಖಾನ್ ಅವರ ತೋಟದಲ್ಲಿ ಹೊಸ ತಳಿಯ ಮಾವು ಹಣ್ಣೊಂದು ಸಂಶೋಧನೆಯಾಗಿದೆ.
ಈ ಹಣ್ಣಿಗೆ ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೆಸರಿಡಲಾಗಿದೆ.
ಹೊಸ ತಳಿಯ ಮಾವಿನ ಹಣ್ಣಿನ ಗುಣ ಲಕ್ಷಣಗಳು ಅಮಿತ್ ಶಾ ಅವರ ವ್ಯಕ್ತಿತ್ವದೊಂದಿಗೆ ಹೋಲಿಕೆಯಾಗುತ್ತದೆ, ಹೀಗಾಗಿ ಈ ಹೆಸರಿಟ್ಟಿದ್ದೇನೆ. ಈ ಮಾವಿನ ಬೆಳೆಯೂ ಉತ್ತಮವಾಗಿ ಬರುತ್ತದೆ ಮತ್ತು ರುಚಿಯು ಒಳ್ಳೆಯದಾಗಿರಬಹುದು ಎಂದು ಕೈಮುಲ್ಲಾ ಖಾನ್ ಹೇಳಿದ್ದಾರೆ.

ಜನರು ಬರುತ್ತಾರೆ, ಹೋಗುತ್ತಾರೆ. ಆದರೆ ಹಣ್ಣುಗಳು ಶಾಶ್ವತವಾಗಿ ಉಳಿಯುತ್ತದೆ. ಹಾಗಾಗಿ ದೊಡ್ಡ ಸಾಧಕರ ಹೆಸರುಗಳನ್ನು ನಾನು ಮಾವಿನ ಹಣ್ಣುಗಳಿಗೆ ಇಡುತ್ತಿದ್ದೇನೆ ಅವರ ಕಾಲದ ನಂತರವೂ ಹಣ್ಣುಗಳ ಜೊತೆ ಅವರ ಹೆಸರು ಉಳಿಯುತ್ತದೆ ಎಂದು ಹಾಜಿ ಅವರು ಹೇಳಿದ್ದಾರೆ.
ಹಾಜಿ ಅವರು ಈ ಹಿಂದೆ ಮಾವಿಗೆ ನರೇಂದ್ರ ಮೋದಿ, ಐಶ್ವರ್ಯಾ ರೈ, ಸಚಿನ್ ತೆಂಡುಲ್ಕರ್, ಡಾ.ಕಲಾಂ ಸಾಬ್ , ಅಮಿತಾಬ್ ಬಚ್ಚನ್ ಮೊದಲಾದ ಹೆಸರುಗಳನ್ನು ಇಟ್ಟು ಸುದ್ದಿಯಾಗಿದ್ದರು.
Discussion about this post