crossorigin="anonymous"> marriage cheating : 30 ತರುಣಿಯಂತೆ ಮೇಕಪ್ ಧರಿಸಿ 35ರ ಯುವಕನನ್ನು ಮದುವೆಯಾದ 54 ರ ಆಂಟಿ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

marriage cheating : 30 ತರುಣಿಯಂತೆ ಮೇಕಪ್ ಧರಿಸಿ 35ರ ಯುವಕನನ್ನು ಮದುವೆಯಾದ 54 ರ ಆಂಟಿ

ಮೇಕಪ್ ಮಹಿಳೆಯ ಮಹಿಮೆ

Radhakrishna Anegundi by Radhakrishna Anegundi
07-07-22, 12 : 12 pm
in ಟ್ರೆಂಡಿಂಗ್
marriage cheating Andhra Pradesh Con-woman With Many Faces and Names Dupes Divorced Men Nabbed
Share on FacebookShare on TwitterWhatsAppTelegram

54ರ ಆಂಟಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಅವರಿಬ್ಬರಿಗೂ ಮದುವೆಯಾಗಿತ್ತು ಅನುವ ಮಾಹಿತಿ ಹೊರ ಬಿದ್ದಿದೆ. ಈ ಮೋಸದ ಮದುವೆ ( marriage cheating ) ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ

ತಮಿಳುನಾಡು : ಮಗನಿಗೆ ಮದುವೆ ಮಾಡಲು ಹೋದ ತಾಯಿಯೊಬ್ಬಳು ಮದುವೆ ವಿಚಾರದಲ್ಲಿ ( marriage cheating) ಮೋಸ ಹೋದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಇಂದ್ರಾಣಿ ಎಂಬ 65 ವರ್ಷದ ಮಹಿಳೆ 35 ವರ್ಷದ ಪುತ್ರನೊಂದಿಗೆ ತಮಿಳುನಾಡಿನ ತಿರುವಲ್ಲೂರಿನ ಪುದುಪೇಟೆ ಎಂಬಲ್ಲಿ ವಾಸವಾಗಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಪುತ್ರ ಡಿವೋರ್ಸ್ ಆಗಿದ್ದ ಕಾರಣ ಮಗನ ಎರಡನೇ ಮದುವೆಗಾಗಿ ಹುಡುಗಿಯ ಹುಡುಕಾಟದಲ್ಲಿದ್ದರು.

ಈ ಸಂದರ್ಭದಲ್ಲಿ ಬ್ರೋಕರ್ ಮೂಲಕ ಆಂಧ್ರ ಪ್ರದೇಶದ ತಿರುಪತಿ ಪುತ್ತೂರು ನಿವಾಸಿ ಶರಣ್ಯ ( Saranya) ಅನ್ನುವವರ ಪರಿಚಯವಾಗಿದೆ. ಹೀಗಾಗಿ ಮಗನ ಜೊತೆಗೆ ಇಂದ್ರಾಣಿಯವರು ( Indran ) ಶರಣ್ಯಾ ಭೇಟಿಗೆ ಹೋಗಿದ್ದಾರೆ. ಈ ವೇಳೆ 54 ವರ್ಷದ ಶರಣ್ಯ ಬ್ಯೂಟಿ ಪಾರ್ಲರ್ ಗೆ ಹೋಗಿ 30ರ ತರುಣಿಯಂತೆ ಮೇಕಪ್ ಮಾಡಿಸಿಕೊಂಡಿದ್ದಾಳೆ ಆ ಬ್ಯೂಟಿಷಿಯನ್ ಅದೇನು ಜಾದೂ ಮಾಡಿದ್ರೋ ಗೊತ್ತಿಲ್ಲ. ಇದೆಲ್ಲಾ ನಡೆದದ್ದು ಕಳೆದ ವರ್ಷ.

ಹೆಣ್ಣು ನೋಡುವ ಶಾಸ್ತ್ರ ಮುಗಿದ ಬೆನ್ನಲ್ಲೇ ತಿರುವಲ್ಲೂರಿನಲ್ಲಿ ಇಂದ್ರಾಣಿಯ ಪುತ್ರ ಹಾಗೂ ಶರಣ್ಯಾ ಮದುವೆ ಅದ್ದೂರಿಯಾಗಿ ನಡೆದಿದೆ. 25 ಪವನ್ ಚಿನ್ನವನ್ನು ಶರಣ್ಯಾಳಿಗೆ ಈ ವೇಳೆ ಕೊಡಲಾಗಿತ್ತು.

ಇದನ್ನೂ ಓದಿ : Chandrashekhar Guruji : ಗುರೂಜಿ ಹತ್ಯೆಗೆ ಕಾರಣ ಇದೇ…

ಇದಾದ ಬಳಿಕ ಪ್ರಾರಂಭವಾಗಿದ್ದು ಆಂಟಿಯ ಅಸಲಿ ಆಟ. ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡಬೇಕು ಎಂದು ಕಾಟ ಪ್ರಾರಂಭಿಸಿದ ಶರಣ್ಯಾ ಅತ್ತೆ ಹಾಗೂ ಗಂಡನೊಂದಿಗೆ ತಗಾದೆ ಪ್ರಾರಂಭಿಸಿದ್ದಾಳೆ. ಒಂದು ಹಂತದಲ್ಲಿ ಇಂದ್ರಾಣಿಯನ್ನು ಮನೆಯಿಂದ ಹೊರ ಹಾಕಲಾಗಿದೆ. ಪತ್ನಿಯ ಕಾಟ ತಡೆಯಲಾಗದ ಪತಿ ಈ ವೇಳೆ ಆಸ್ತಿಯನ್ನು ವರ್ಗಾಯಿಸಿ ಕೊಡುತ್ತೇವೆ ಆಧಾರ್ ಕಾರ್ಡ್ ಕೊಡು ಅಂದಿದ್ದಾನೆ.

ಆಧಾರ್ ಕಾರ್ಡ್ ಪಡೆದು ನೋಡಿದ್ರೆ ಅದರಲ್ಲಿ  ಕೇರ್ ಆಫ್ ( C/O ) ಜಾಗದಲ್ಲಿ ರವಿ ಅನ್ನುವ ಹೆಸರಿತ್ತು. ಹೀಗಾಗಿ ಅನುಮಾನಗೊಂಡ ತಾಯಿ ಮಗ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾರೆ. ಪೊಲೀಸರು ತನಿಖೆ ನಡೆಸಿದ ಬಳಿಕ ಇಂದ್ರಾಣಿ ಹಾಗೂ ಆಕೆಯ ಮಗ ಶಾಕ್ ಆಗಿದ್ದಾರೆ. ಶರಣ್ಯಾ 30ರ ಯುವತಿಯಾಗಿರಲಿಲ್ಲ, ಬದಲಾಗಿ ಆಕೆ 54ರ ಆಂಟಿಯಾಗಿದ್ದಳು. ಅಷ್ಟು ಮಾತ್ರವಲ್ಲದೆ ಆಕೆಗೆ ಮದುವೆಯಾಗಿ ಎರಡು ಹೆಣ್ಣು ಮಕ್ಕಳಿದ್ದು, ಆ ಹೆಣ್ಣು ಮಕ್ಕಳಿಗೆ ಮದುವೆಯೂ ಆಗಿದೆ.

ಇನ್ನು ಆಕೆಯ ನಿಜವಾದ ಹೆಸರು ಶರಣ್ಯ ಅಲ್ಲ. ಹೋದ ಕಡೆಯೆಲ್ಲಾ ಬೇರೆ ಬೇರೆ ಹೆಸರು ಇಟ್ಟುಕೊಂಡಿದ್ದ ಆಕೆ ಶರಣ್ಯಾ ಆಲಿಯಾಸ್ ಸುಕನ್ಯ ಆಲಿಯಾಸ್ ಸಂಧ್ಯಾ (Saranya alias Sukanya alias Sandhya ) ಎಂದೆಲ್ಲಾ ಕರೆಸಿಕೊಂಡಿದ್ದಳು.

ಹಲವು ವರ್ಷಗಳ ಹಿಂದೆ ರವಿ ಅನ್ನುವವರನ್ನು ಮದುವೆಯಾಗಿದ್ದ ಈಕೆ ಎರಡು ಹೆಣ್ಣು ಮಕ್ಕಳನ್ನು ಪಡೆದಿದ್ದಳು. ಇದಾದ ಬಳಿಕ  ರವಿಯೊಂದಿಗೆ ಮನಸ್ತಾಪಗೊಂಡು ತಾಯಿ ಮನೆಗೆ ಬಂದಿದ್ದ ಈಕೆ  ಎರಡನೇ ಮದುವೆಗೆ ಮನಸ್ಸು ಮಾಡಿದ್ದಳು.

ಈ ವೇಳೆ ಸುಬ್ರಮಣಿ ಅನ್ನುವವನನ್ನು ಮದುವೆಯಾಗಿ 11 ವರ್ಷ ಸಂಸಾರ ನಡೆಸಿದ್ದಳು. ಕೊರೋನಾ ಕಾಲದಲ್ಲಿ ಆತನನ್ನು ತೊರೆದು ತಾಯಿ ಮನೆಗೆ ಹಿಂತಿರುಗಿದ ಶರಣ್ಯಾ ಇಂದ್ರಾಣಿಯನ್ನು ಬುಟ್ಟಿಗೆ ಬೀಳಿಸಿ ಆಸ್ತಿಗೆ ಬಲೆ ಬೀಸಿದ್ದಾಳೆ.

ಈ ನಡುವೆ ಇದೇ ಶರಣ್ಯಾ ತನ್ನ ಗಂಡ ರವಿ ಮೇಲೆ ಪೊಲೀಸ್ ದೂರು ದಾಖಲಿಸಿ, ಆತನಿಂದ 10 ಲಕ್ಷ ಹಣ ವಸೂಲಿ ಮಾಡಿದ್ದಾಳೆ ಅನ್ನುವ ಆರೋಪ ಕೂಡಾ ಇದೆ.

Tags: FEATURED
ShareTweetSendShare

Discussion about this post

Related News

ದೇವಾಲಯಗಳಲ್ಲಿ ನಂದಿನ ತುಪ್ಪ ಬಳಸಲು ನಿರ್ಧಾರ : ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ –  ಶಾಸಕ  ಕೆ.ವೈ. ನಂಜೇಗೌಡ

ದೇವಾಲಯಗಳಲ್ಲಿ ನಂದಿನ ತುಪ್ಪ ಬಳಸಲು ನಿರ್ಧಾರ : ನಂದಿನಿ ತುಪ್ಪಕ್ಕೆ ಭಾರಿ ಬೇಡಿಕೆ –  ಶಾಸಕ  ಕೆ.ವೈ. ನಂಜೇಗೌಡ

ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ : ಮಾರುಕಟ್ಟೆಯಲ್ಲಿ ಹೊಸ ದಂಧೆ – cement garlic

ಮಾರುಕಟ್ಟೆಗೆ ಬಂದಿದೆ ಸಿಮೆಂಟ್ ಬೆಳ್ಳುಳ್ಳಿ : ಮಾರುಕಟ್ಟೆಯಲ್ಲಿ ಹೊಸ ದಂಧೆ – cement garlic

ವಯನಾಡಿನಲ್ಲಿ ಸೇನಾ ಕಾರ್ಯಾಚರಣೆ ಅಂತ್ಯ : ಭಾವನಾತ್ಮಕವಾಗಿ ಯೋಧರನ್ನು ಬೀಳ್ಕೊಟ್ಟ ಕೇರಳಿಗರು

ವಯನಾಡಿನಲ್ಲಿ ಸೇನಾ ಕಾರ್ಯಾಚರಣೆ ಅಂತ್ಯ : ಭಾವನಾತ್ಮಕವಾಗಿ ಯೋಧರನ್ನು ಬೀಳ್ಕೊಟ್ಟ ಕೇರಳಿಗರು

ಮಗಳ ಒಂಟಿ ಕೈಗೇ ತಂದೆಯಿಂದ ಅಂತ್ಯಸಂಸ್ಕಾರ : ವಯನಾಡಿನ ಕಣ್ಣೀರ ಕಥೆ

ಅಯೋಧ್ಯೆ ಮಂದಿರ ಉದ್ಘಾಟನೆಯಂದೆ ಹೆರಿಗೆ ಮಾಡಿಸಿ : ವೈದ್ಯರಿಗೆ ದುಂಬಾಲು

ಅನಂತಪದ್ಮನಾಭ ದೇಗುಲದ ಕೆರೆಯಲ್ಲಿ ಕಾಣಿಸಿಕೊಂಡ ಜ್ಯೂನಿಯರ್ ಬಬಿಯಾ ( Babiya)

ಸಚಿವರ ಮನೆ ಕಚೇರಿ ನವೀಕರಣಕ್ಕೆ ಕೋಟಿ ಕೋಟಿ ರೂಪಾಯಿ ಖರ್ಚು : ಏನಿದು ಸಿದ್ದರಾಮಯ್ಯನವರೇ

Lunar Eclipse : ಚಂದ್ರ ಗ್ರಹಣ 2023 ಶುಭ ಫಲ ಪಡೆಯಲಿರೋ ರಾಶಿಗಳು ಯಾವುದು ಗೊತ್ತಾ

ದೇವರಿಗೆ ಚೆಕ್ ಕೊಟ್ಟು ಯಾಮಾರಿಸಿದ ಭೂಪ : 100 ಕೋಟಿ ಚೆಕ್ ಕೊಟ್ಟವನ ಖಾತೆಯಲ್ಲಿತ್ತು 17 ರೂಪಾಯಿ

Tirumala hundi : ಎಂಟು ತಿಂಗಳಲ್ಲಿ ಸಾವಿರ ಕೋಟಿ : ತುಂಬಿ ತುಳುಕಿದ ತಿಮ್ಮಪ್ಪನ ಹುಂಡಿ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್