ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷ ಪೂರ್ಣ ಹಿನ್ನೆಲೆಯಲ್ಲಿ ಇಂದು ಗೌರಿ ಬಳಗ, ಗೌರಿ ಮೆಮೋರಿಯಲ್ ಟ್ರಸ್ಟ್ನಿಂದ ‘ಗೌರಿ ಅಮರ್ ರಹೇ’ ಶೀರ್ಷಿಕೆಯಡಿ ರಾಜಭವನ ಚಲೋ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರೈ, ಸಾಹಿತಿ ಬಿ.ಟಿ. ಲಲಿತಾ ನಾಯಕ್, ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ, ಸ್ವಾಮಿ ಅಗ್ನಿವೇಶ್, ಕವಿತಾ ಲಂಕೇಶ್, ಟ್ರಸ್ಟ್ ಸದಸ್ಯರು ಗೌರಿ ಲಂಕೇಶ್ ಗೌರಿ ಸಮಾಧಿಗೆ ಹೂವಿಟ್ಟು ‘ಪ್ರೀತಿಯ ಗಂಗೆ ಹರಿಯುತಿರಲಿ’ ಹಾಡಿನ ಮೂಲಕ ಗೀತ ನಮನ ಸಲ್ಲಿಸಿದರು.
ಬಳಿಕ, ಮೌರ್ಯ ಸರ್ಕಲ್ನಿಂದ ರಾಜಭವನದವರೆಗೆ ನಡೆದ ಕಾಲ್ನಡಿಗೆ ಜಾಥಾದಲ್ಲಿ ಚಿಂತಕರ ಹಂತಕರ ಜೊತೆ ಹುನ್ನಾರ ನಡೆಸಿದವರನ್ನೂ ಬಂಧಿಸಬೇಕು, ಕೊಲೆಗಡುಕ ಸಂಘಟನೆಗಳನ್ನು ನಿರ್ಬಂಧಿಸಲು ಆಗ್ರಹ ಪಡಿಸಲಾಯಿತು. ಕೊಲೆಗಡುಕ ಸನಾತನ ಸಂಸ್ಥೆ ಮತ್ತು ಹಿಂದು ಜನಜಾಗೃತಿ ಸಮಿತಿಯನ್ನು ಭಯೋತ್ಪಾದಕ ಸಂಸ್ಥೆ ಎಂದು ಘೋಷಿಸಬೇಕು, ಸನಾತನ ಸಂಸ್ಥೆಯ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ರಾಜ್ಯಪಾಲರಿಗೆ ಗೌರಿ ಟ್ರಸ್ಟ್ನಿಂದ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಾತನಾಡಿದ ಅಗ್ನಿವೇಶ್ ಸನಾತನ ಸಂಸ್ಥೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅದು ಸಾಮಾನ್ಯ ಧರ್ಮ ಪ್ರಚಾರ ಸಂಸ್ಥೆ ಅಲ್ಲ. ಅದೊಂದು ಭಯೋತ್ಪಾದನ ಸಂಸ್ಥೆ. ಅದರ ಮೇಲೆ ಸರ್ಕಾರ ತೀವ್ರ ನಿಗಾ ವಹಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಮಾಡುವವರನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.
ಆರ್ ಎಸ್ಎಸ್ ಎಂದರೆ ಬಹುಮುಖಿ ರಾಕ್ಷಸ. ಬೇರೆ ಬೇರೆ ಹೆಸರುಗಳಲ್ಲಿ ಅದರ ಅಸ್ತಿತ್ವ ಇದೆ. ಅದರ ನಾಯಕ ಇಟ್ಲರ್ ಎಂದು ಆರೋಪಿಸಿದರು. ಅಲ್ಲದೆ ಆರ್ ಎಸ್ಎಸ್ ಬಹುಮುಖಿ ಸಂಸ್ಥೆಗಳಲ್ಲಿ ಸನಾತನ ಸಂಸ್ಥೆಯೂ ಒಂದು ಎಂದು ದೂರಿದರು.
ಇದೇ ವೇಳೆ ನಾನೂ ನಗರ ನಕ್ಸಲ ಎಂದು ಫಲಕ ಹಾಕಿಕೊಂಡ ಗಿರೀಶ್ ಕಾರ್ನಾಡ್ ತಾನೊಬ್ಬ ನಕ್ಸಲ್ ಎಂದು ಘೋಷಿಸಿಕೊಂಡರು.
Discussion about this post