ಬಿಜೆಪಿಯ ಹಿರಿಯ
ನಾಯಕಿ, ಮಾಜಿ ವಿದೇಶಾಂಗ ಸಚಿವೆ
ಸುಷ್ಮಾ ಸ್ವರಾಜ್ ಅವರ ಹಠಾತ್ ನಿಧನದ ಸುದ್ದಿ ದೇಶದ ಜನತೆಯನ್ನುಆಘಾತವನ್ನುಂಟು ಮಾಡಿದೆ.
ಕೆಲ ಕಿಡಿಗೇಡಿಗಳು
ಸಾವಿನಲ್ಲೂ ಸಂಭ್ರಮಿಸುತ್ತಿರುವ ನಡುವೆ ಸುಷ್ಮಾ ಸ್ವರಾಜ್ ನಿಧನಕ್ಕೆ ಇಡೀ ದೇಶ ಕಂಬನಿ
ಮಿಡಿಯುತ್ತಿದೆ.
ಸುಷ್ಮಾ ಸ್ವರಾಜ್
ಅವರ ಅಂತಿಮ ದರ್ಶನಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಒಂದು ಕ್ಷಣ ಭಾವುಕರಾದರು. ತಮ್ಮ
ಸಹೋದ್ಯೋಗಿ, ಮಾರ್ಗದರ್ಶಕಿಯಾಗಿದ್ದ ಸುಷ್ಮಾ ಇನ್ನಿಲ್ಲ ಅನ್ನುವ ಸುದ್ದಿ ಮೋದಿಯವರನ್ನು
ದಿಗ್ಭ್ರಮೆಗೊಳಿಸಿದೆ.
ಮೋದಿಯವರ
ಸಂಪುಟದಲ್ಲಿ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಮೋದಿಯವರು
ಹೊಂದಿದ್ದ ಕನಸುಗಳನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅನುಭವದಲ್ಲಿ
ಹಿರಿಯವರಾದರು, ಕಿರಿಯರ ನಾಯಕತ್ವದಲ್ಲಿ ಕೆಲಸ ಮಾಡುವ ಮೂಲಕ ದೇಶವೇ ಮೊದಲು ಅನ್ನುವ ಮಾತಿಗೆ
ಬದ್ಧರಾಗಿದ್ದರು.
ಕಳೆದ ರಾತ್ರಿ
ಸುಮಾರು 11 ಗಂಟೆ ಹೊತ್ತಿಗೆ ನಿಧನರಾದ
ಸುಷ್ಮಾ ಸ್ವರಾಜ್ ಅವರ ಪಾರ್ಥಿವ ಶರೀರವನ್ನು ದೆಹಲಿಯ ಜನಪತ್ ರಸ್ತೆಯಲ್ಲಿರುವ ದವನ್ ದೀಪ್
ಬಿಲ್ಡಿಂಗ್ ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು, ಅಲ್ಲಿಂದ ಈಗ ಪಾರ್ಥಿವ ಶರೀರವನ್ನು
ಬಿಜೆಪಿ ಕೇಂದ್ರ ಕಚೇರಿಗೆ ತೆಗೆದುಕೊಂಡು ಹೋಗಲಾಗಿದೆ. ಅಲ್ಲಿ ರಾಜಕೀಯ ನಾಯಕರು ಮತ್ತು ಇತರ
ಗಣ್ಯರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಇಂದು ಅಪರಾಹ್ನ 3 ಗಂಟೆ ಸುಮಾರಿಗೆ ಲೋಧಿ ರಸ್ತೆಯಲ್ಲಿರುವ ವಿದ್ಯುತ್ ಚಿತಾಗಾರದಲ್ಲಿ
ಅಂತ್ಯಸಂಸ್ಕಾರ ನಡೆಯಲಿದೆ.
ಸುಷ್ಮಾ ಸ್ವರಾಜ್ ನಿಧನ ಹಿನ್ನಲೆಯಲ್ಲಿ ಬಿಜೆಪಿಯ ಇಂದಿನ ಎಲ್ಲಾ ನಿಗದಿತ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.
Sushma Ji’s demise is a personal loss. She will be remembered fondly for everything that she’s done for India. My thoughts are with her family, supporters and admirers in this very unfortunate hour. Om Shanti.
I can’t forget the manner in which Sushma Ji worked tirelessly as EAM in the last 5 years. Even when her health was not good, she would do everything possible to do justice to her work and remain up to date with matters of her Ministry. The spirit and commitment was unparalleled.
An excellent administrator, Sushma Ji set high standards in every Ministry she handled. She played a key role in bettering India’s ties with various nations. As a Minister we also saw her compassionate side, helping fellow Indians who were in distress in any part of the world.
Discussion about this post