ಬೆಂಗಳೂರು : ಇಂಧನ ದರ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಇಂದು ರಾಷ್ಟ್ರ ವ್ಯಾಪ್ತಿ ಪ್ರತಿಭಟನೆಗೆ ಕರೆ ಕೊಟ್ಟಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಪ್ರತಿಭಟನೆಗಳು ನಡೆದಿದೆ.
ಬೆಂಗಳೂರಿನಲ್ಲೂ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ರಾಜಧಾನಿಯಲ್ಲಿ ನಡೆದ ಪ್ರಧಾನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ಹಿರಿಯ ಮುಖಂಡರು ಒಂದೇ ಕಡೆ ಪ್ರತಿಭಟನೆ ನಡೆಸಿದರು.
ಆದರೆ ಯೂತ್ ಕಾಂಗ್ರೆಸ್ ಮುಖಂಡರು ಮಾತ್ರ ಮೋದಿ ವಿರುದ್ದ ಪ್ರತಿಭಟನೆ ನಡೆಸುವ ಸಂದರ್ಭದಲ್ಲೂ ಒಗ್ಗಟ್ಟು ಪ್ರದರ್ಶಿಸಲಿಲ್ಲ. ರಾಜ್ಯ ಯುವ ಕಾಂಗ್ರೆಸ್ ಘಟಕದ ಚುನಾವಣೆಗೆ ಸ್ಪರ್ಧಿಸಿ ಗೆದ್ದು, ಬಳಿಕ ಸೋತ ಮೊಹಮ್ಮದ್ ಹ್ಯಾರಿಸ್ ತಮ್ಮ ಬೆಂಬಲಿಗರೊಂದಿಗೆ ಎಂ.ಜಿ.ರಸ್ತೆಯ ಪೆಟ್ರೋಲ್ ಬಂಕ್ ಒಂದರ ಮುಂದೆ ಪ್ರತಿಭಟನೆ ನಡೆಸಿದರು. ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ತನ್ನ ಬೆಂಬಲಿಗರೊಂದಿಗೆ ನಗರದ ಮತ್ತೊಂದು ಪೆಟ್ರೋಲ್ ಬಂಕ್ ನಲ್ಲಿ ಪ್ರತಿಭಟನೆ ನಡೆಸಿದರು.

ಇವರಿಬ್ಬರ ಸಂಬಂಧ ಚೆನ್ನಾಗಿತ್ತು ಅನ್ನುವುದಾಗಿದ್ರೆ ಒಂದೇ ಕಡೆ ಪ್ರತಿಭಟನೆ ನಡೆಸಬೇಕಾಗಿತ್ತು. ಅದನ್ನು ಬಿಟ್ಟು ಇಬ್ಬರೂ ಬೇರೆ ಬೇರೆ ಕಡೆ ಪ್ರತಿ ಇಬರ್ರೂ ಬೇರೆ ಬೇರೆ ಕಡೆ ಪ್ರತಿಭಟನೆ ನಡೆಸಿರುವುದನ್ನು ನೋಡಿದರೆ ಚುನಾವಣೆಯ ಬಳಿಕ ಮೂಡಿದ ಬಿರುಕು ಇನ್ನೂ ಹಾಗೇ ಇದೆ ಅಂದಾಯ್ತು. ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿಯವರೇ ಮುಂದೆ ನಿಂತು ಇಬ್ಬರ ಜಗಳಕ್ಕೆ ಬ್ರೇಕ್ ಹಾಕಿದ್ದರು. ಆದರೆ ಅದ್ಯಾಕೋ ಡಿಕೆಶಿ ಹಾಕಿದ ತೇಪೆ ಕೆಲವೇ ದಿನಗಳಲ್ಲಿ ಕಿತ್ತು ಹೋಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸಬೇಕಾದ ಸಂದರ್ಭದಲ್ಲೂ ಯುವ ಕಾಂಗ್ರೆಸ್ ನಾಯಕರಿಬ್ಬರು ಜೊತೆಯಾಗಿ ನಿಂತಿಲ್ಲ ಅಂದ್ರೆ ಅದು ಬಿಜೆಪಿಗೆ ಲಾಭವಾಗುವುದರಲ್ಲಿ ಸಂಶಯವಿಲ್ಲ.
Discussion about this post