crossorigin="anonymous"> Naga temple : ಭಾರತದ ಪ್ರಸಿದ್ಧ ನಾಗ ದೇವಾಲಯಗಳು : ನಾಗದೋಷ ಪರಿಹರಿಸುವ ಪುಣ್ಯ ಕ್ಷೇತ್ರ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

Naga temple : ಭಾರತದ ಪ್ರಸಿದ್ಧ ನಾಗ ದೇವಾಲಯಗಳು : ನಾಗದೋಷ ಪರಿಹರಿಸುವ ಪುಣ್ಯ ಕ್ಷೇತ್ರ

Radhakrishna Anegundi by Radhakrishna Anegundi
02-08-22, 6 : 39 am
in ದೇವನುಡಿ
nagara-panchami-most-amazing-snake-naga-temples-of-india-story
Share on FacebookShare on TwitterWhatsAppTelegram

ಹಬ್ಬಗಳು ಕೇವಲ ಸಂತೋಷದಿಂದ ಆಚರಿಸುವ ಕ್ಷಣಗಳಲ್ಲ. ಹಬ್ಬಗಳು ನಮ್ಮ ಅಸ್ತಿತ್ವದ ಬಗ್ಗೆ ನಾವು ಪ್ರತಿಬಿಂಬಿಸಬೇಕಾದ ಕ್ಷಣಗಳಾಗಿವೆ. ಹೀಗಾಗಿ ಭಾರತದಲ್ಲಿ ಆಚರಿಸುವ ಎಲ್ಲಾ ಹಬ್ಬಗಳಿಗೂ ಮಹತ್ವವಿದೆ. ಹೇಳಿ ಕೇಳಿ ಭಾರತ ಆಧ್ಯಾತ್ಮಿಕ ಭೂಮಿ, ಇದೇ ಕಾರಣದಿಂದ ನಾವು ಆಚರಿಸುವ ಹಬ್ಬಗಳು ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ವ್ಯತ್ಯಾಸ ಇರಬಹುದು, Naga temple ಆದರೆ ಅದರೊಳಗಿನ ಸಾರ ಮಾತ್ರ ಒಂದೇ.

ಹಬ್ಬಗಳ ಹೆಬ್ಬಾಗಿಲು ಎಂದು ಕರೆಸಿಕೊಂಡಿರುವ ನಾಗರಪಂಚಮಿ ಇನ್ನಿಲ್ಲದ ಮಹತ್ವವಿದೆ. ಕರ್ನಾಟಕದ ಕರಾವಳಿ ಸೇರಿದಂತೆ ಕೇರಳದಲ್ಲಿ ನಾಗರ ಪಂಚಮಿಯನ್ನು ಹಬ್ಬವಾಗಿ ಆಚರಿಸೋದಿಲ್ಲ. ಇಲ್ಲಿ ಅದು ಆರಾಧನೆಗೆ ಸೀಮಿತ. ಕುಟುಂಬದ ನಾಗ, ಗ್ರಾಮದ ನಾಗ, ಜಾಗದ ನಾಗ ಹೀಗೆ ವಿವಿಧ ರೀತಿಯಲ್ಲಿ ಆರಾಧಿಸಲಾಗುತ್ತದೆ. ಉಳಿದ ಭಾಗಗಳಲ್ಲಿ ನಾಗರಪಂಚಮಿ ಆರಾಧನೆಯೊಂದಿಗೆ (Naga temple )ಹಬ್ಬವಾಗಿ ಆಚರಿಸಲ್ಪಡುತ್ತದೆ.  

ಈ ಮಹತ್ವದ ನಡುವೆ ಭಾರತದಲ್ಲಿ ಸರ್ಪಗಳಿಗೆ ಮೀಸಲಾಗಿರುವ ಹಲವಾರು ದೇವಾಲಯಗಳಿಗೆ. (Naga temple ) ಕೆಲವು ದೇವಸ್ಥಾನಗಳು ವಿಶ್ವ ಪ್ರಸಿದ್ಧವಾಗಿದೆ ಕೂಡಾ. ಪುರಾಣಗಳು ನಮಗೆ ಪಕೃತಿ ಆರಾಧನೆಯಲ್ಲಿ ತಿಳಿಸಿಕೊಟ್ಟಿದೆ. ಅದೇ ರೀತಿ ಹಾವುಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಭಾರತದಲ್ಲಿರುವ ಪ್ರಮುಖ ನಾಗ ದೇವಾಲಯಗಳು ಹೀಗಿವೆ.

ಮನ್ನರಸಲ ದೇವಸ್ಥಾನ, ಕೇರಳ

ದೇವರ ನಾಡು ಎಂದು ಕರೆಸಿಕೊಂಡಿರು ಕೇರಳದಲ್ಲಿ ದೇವಸ್ಥಾನಗಳು ಒಂದಕ್ಕಿಂತ ಮತ್ತೊಂದು ಶಕ್ತಿ ಶಾಲಿ. ಅದೇ ರೀತಿ ಕೇರಳದಲ್ಲಿ ಅನೇಕ  ಸರ್ಪ ದೇವಾಲಯಗಳಿದೆ. ಅದರಲ್ಲಿ ಪ್ರಮುಖವಾಗಿರುವ ದೇವಾಲಯ ಅಂದ್ರೆ ಮನ್ನರಸಲ ದೇವಸ್ಥಾನ. ಮೂರು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನದಲ್ಲಿ 30 ಸಾವಿರ ಕಲ್ಲಿನ ವಿಗ್ರಹಗಳಿದೆ. ಸಂತಾನಭಿವೃದ್ಧಿಗಾಗಿ ಇಲ್ಲಿ ವಿಶೇಷ ಹರಕೆಯನ್ನು ಕಟ್ಟಿಕೊಳ್ಳಲಾಗುತ್ತದೆ. ನಾಗ ರಾಜ ಮತ್ತು ನಾಗಯಕ್ಷಿಯನ್ನು ಪ್ರಸನ್ನಗೊಳಿಸುವ ಸಲುವಾಗಿ ಸರ್ಪ ಬಲಿ ಸೇರಿದಂತೆ ಸರ್ಪ ದೋಷ ಪರಿಹಾರಕ್ಕೆ ವಿಶಿಷ್ಟ ಪೂಜೆಗಳನ್ನು ನಡೆಸಲಾಗುತ್ತದೆ.

mannarasala

​ಭುಜಂಗ ನಾಗ ದೇವಾಲಯ, ಗುಜರಾತ್

ಗುಜರಾತ್‌ನ ಹೊರವಲಯದಲ್ಲಿ ಈ ದೇವಸ್ಥಾನವಿದ್ದು, ಭುಜಿಯ ಕೋಟೆಯ ಮೇಲೆ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಯುದ್ಧದಲ್ಲಿ ಮಡಿದ ಕೊನೆಯ ನಾಗ ಕುಲದ ಭುಜಂಗನಿಗೆ ಈ ದೇವಾಲಯ ಸಮರ್ಪಿತವಾಗಿದೆ.ನಾಗ ಕುಲದ ಕೊನೆಯ ರಾಜನ ಹೆಸರಿನಲ್ಲೇ ಈ ಕೋಟೆಯೂ ಕರೆಸಿಕೊಂಡಿದೆ. ಪ್ರತಿ ವರ್ಷ ನಾಗರ ಪಂಚಮಿಯಂದು ದೇವಸ್ಥಾನದಲ್ಲಿ ಜಾತ್ರೆ ನಡೆಯುತ್ತದೆ.ಅದನ್ನು ಹೊರತು ಪಡಿಸಿದರೆ ಇದೊಂದು ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಪ್ರಸ್ತುತ ಈ ಕೋಟೆಯು ಭಾರತೀಯ ಸೇನೆಯ ವಶದಲ್ಲಿದೆ.

bhujanag

​ಶೇಷನಾಗ ದೇವಾಲಯ, ಜಮ್ಮು ಮತ್ತು ಕಾಶ್ಮೀರ

ಶೇಷನಾಗ ದೇವಾಲಯ ಮನ್ಸಾರ್ ಸರೋವರದ ಪೂರ್ವ ದಂಡೆಯಲ್ಲಿದೆ. ಪುರಾಣಗಳ ಪ್ರಕಾರ, ಹಾವುಗಳ ರಾಜ ಎಂದು ಕರೆಯಲ್ಪಡುವ ಶೇಷನಾಗನು ಪಹಲ್ಗಾಮ್ ಬಳಿ ಸರೋವರ ನಿರ್ಮಿಸಿದ ಹಾಗೂ ಶೇಷನಾಗನು ಇನ್ನೂ ಇಲ್ಲಿ ವಾಸಿಸುತ್ತಿದ್ದಾನೆ ಅನ್ನುವ ನಂಬಿಕೆಯಿದೆ ಅಮರನಾಥ ಗುಹೆಗೆ ಯಾತ್ರೆ ಕೈಗೊಳ್ಳುವ ಭಕ್ತರು ಈ ಸರೋವರಕ್ಕೆ ಭೇಟಿ ನೀಡಿ ಶೇಷನಾಗನನ್ನು ಪೂಜಿಸುತ್ತಾರೆ.

ನವವಿವಾಹಿತರು ಈ ಶೇಷನಾಗನ ದರ್ಶನ ಪಡೆದು ಅಶೀರ್ವಾದ ಪಡೆದರೆ ಮುಂದಿನ ಜೀವನ ಸಂತೋಷಮಯವಾಗಿರುತ್ತದೆಯಂತೆ. ಹೀಗಾಗಿಯೇ ನವವಿವಾಹಿತ ದಂಪತಿಗಳು ಆಶೀರ್ವಾದ ಪಡೆಯಲು ದೂರದೂರುಗಳಿಂದ ಆಗಮಿಸುತ್ತಾರೆ. ಹೀಗೆ ಬಂದವರು ಮನ್ಸಾರ್ ಸರೋವರದ ಪವಿತ್ರವಾದ ನೀರಿನಲ್ಲಿ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ಅವರು ಶುದ್ಧಗೊಳ್ಳುತ್ತಾರೆ ಅನ್ನುವ ನಂಬಿಕೆಯೂ ಇದೆ.

shesh nag

​ನಾಗನಾಥಸ್ವಾಮಿ ದೇವಸ್ಥಾನ, ತಮಿಳುನಾಡು

ತಮಿಳುನಾಡಿನಲ್ಲಿ ಅನೇಕ ನಾಗ ದೇವಾಲಯಗಳಿದೆ. ಈ ಪೈಕಿ ನಾಲ್ಕು ದೇವಸ್ಥಾನಗಳು ವಿಶ್ವ ಪ್ರಸಿದ್ಧವಾಗಿದೆ. ಈ ನಾಲ್ಕು ದೇವಸ್ಥಾನಗಳು ಸರ್ಪ ದೋಷ ಪರಿಹಾರಕ್ಕೆ ಪ್ರಸಿದ್ಧ ದೇವಾಲಯಗಳು ಅನ್ನಿಸಿಕೊಂಡಿದೆ. ಕುಂಭಕೋಣಂ ನಾಗೇಶ್ವರ, ತಿರುನಾಗೇಶ್ವರ ( ನಾಗನಾಥಸ್ವಾಮಿ ದೇವಾಲಯ ) ತಿರುಪಾಂಬರುಮ್ , ನಾಗೂರ್. ಇವುಗಳ ಜೊತೆಗೆ ಕನ್ಯಾಕುಮಾರಿ ಜಿಲ್ಲೆಯ ನಾಗರಕೊಯಿಲ್ ನಗರದಲ್ಲಿರುವ ನಾಗರಾಜ ಮಂದಿರವು ಹಾವುಗಳ ರಾಜ ವಾಸುಕಿಗೆ ಸಮರ್ಪಿತವಾದ ಮಂದಿರವಾಗಿದೆ.

naganath swami

ಇಷ್ಟು ಮಾತ್ರವಲ್ಲದೆ ಕರ್ನಾಟಕದಲ್ಲೂ ಪ್ರಸಿದ್ಧ ನಾಗ ದೇವಾಲಯಗಳಿದೆ. ಅವುಗಳನ್ನು ಮುಂದಿನ ಲೇಖನದಲ್ಲಿ ಓದಿಕೊಳ್ಳಬಹುದಾಗಿದೆ.

naganath swami1
Tags: FEATURED
ShareTweetSendShare

Discussion about this post

Related News

Tulsi Vivah

Tulsi Vivah : ಕಿರು ದೀಪಾವಳಿ ಖ್ಯಾತಿಯ ತುಳಸಿ ಪೂಜೆ ಮಹತ್ವವೇನು ಗೊತ್ತಾ

raghavendra swamy aradhana mantralayam

Raghavendra Swamy Aradhana : ರಾಯರ 351ನೇ ಆರಾಧನಾ ಮಹೋತ್ಸವ : ಮಂತ್ರಾಲಯದಲ್ಲಿ ಸಂಭ್ರಮ

dina-bhavishya-kannada-rashi-bhavishya-27-july-2022

Dina bhavishya : ಇಂದಿನ ಭವಿಷ್ಯ : ದಿನ ಭವಿಷ್ಯ : ರಾಶಿ ಭವಿಷ್ಯ : 27 july 2022

Dina bhavishya : ಇಂದಿನ ಭವಿಷ್ಯ : ದಿನ ಭವಿಷ್ಯ : ರಾಶಿ ಭವಿಷ್ಯ : 26 july 2022

Daily horoscope  : ದಿನ ಭವಿಷ್ಯ : ಇಂದಿನ ರಾಶಿ ಭವಿಷ್ಯ 24 ಜುಲೈ 2022

Rashi bhavishya : ದಿನ ಭವಿಷ್ಯ : ಯೋಜಿತ ಕೆಲಸದಲ್ಲಿ ಯಶಸ್ಸು ಸಾಧಿಸಲು ಸುದಿನ

weekly horoscope in kannada : ಈ ವಾರ ಯಾವ ರಾಶಿಯವರು ಯಾವ ದೇವರನ್ನು ಪೂಜಿಸಬೇಕು

ಅಮಾವಾಸ್ಯೆ ದಿನ ಈ ವಸ್ತುಗಳನ್ನು ಖರೀದಿಸಬೇಡಿ : ಯಾವುದು ಆ ವಸ್ತುಗಳು

ಆಷಾಢ ಅಮಾವಾಸ್ಯೆ 2022  : ಜ್ಯೇಷ್ಠ ಮಾಸದ ಕೊನೆಯ ಅಮಾವಾಸ್ಯೆಯ ಮಹತ್ವ

ತಾ.14-06-2022 ರ ಮಂಗಳವಾರದ ರಾಶಿಭವಿಷ್ಯ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್