ಬೆಂಗಳೂರು : ಈ ಹಿಂದೆ ಪದ್ಮ ಪ್ರಶಸ್ತಿಗಳು ಪ್ರಕಟಗೊಂಡಿತ್ತು ಅಂದ್ರೆ ಅವರ ಸಾಧನೆಗಳನ್ನು ಹುಡುಕಬೇಕಾಗಿತ್ತು. ಆದರೆ ಇದೀಗ ಕಾಲ ಬದಲಾಗಿದೆ. ಸಾಧನೆಗಳನ್ನು ಹುಡುಕಿಕೊಂಡೇ ಪ್ರಶಸ್ತಿಗಳು ಬರುತ್ತಿದೆ. ಇದಕ್ಕೊಂದು ಬೆಸ್ಟ್ ಏಕ್ಸಾಂಪಲ್ ಕಿತ್ತಳೆ ಮಾರಿ ಶಾಲೆ ಕಟ್ಟಿದ ಕರ್ನಾಟಕದ ಹಾಜಬ್ಬ.
ಈ ಬಾರಿಯ ಪದ್ಮ ಪ್ರಶಸ್ತಿಯೂ ಅನೇಕರ ಎಲೆಮರೆ ಕಾಯಿಯಂತಿರುವ ಸಾಧಕರನ್ನು ಹುಡುಕೊಂಡು ಹೋಗಿದೆ. ಈ ಬಾರಿ ಪ್ರಶಸ್ತಿ ಪಡೆದ ಪಟ್ಟಿಯಲ್ಲಿರುವ ಒಂದು ಹೆಸರು ತಮಿಳುನಾಡಿನ ಪಾಪಮ್ಮಾಳ್.
ವಯಸ್ಸು 105 ಕಳೆದರೂ ಕನ್ನಡ ಹಾಕಿಕೊಳ್ಳುವುದಿಲ್ಲ, ತಮ್ಮ ಬಟ್ಟೆಯನ್ನು ತಾವೇ ಒಗೆಯುತ್ತಾರೆ, ಮನೆ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಾರೆ.
ಏನಜ್ಜಿ ನಿಮ್ಮ ಆರೋಗ್ಯದ ಗುಟ್ಟು ಅಂದ್ರೆ ಮಟನ್ ಕರಿ ಮತ್ತು ರಾಗಿ ಮುದ್ದೆ ಅನ್ನುತ್ತಾರೆ.
ಅಂದ ಹಾಗೇ ಇವರಿಗೆ ಪ್ರಶಸ್ತಿ ಸಿಗಲು ಕಾರಣವಾಗಿರೋದು ಕೃಷಿ ಕ್ಷೇತ್ರದ ಸಾಧನೆಗಾಗಿ, ತಮಿಳುನಾಡಿನಲ್ಲಿ ಕೃಷಿ ಕ್ಷೇತ್ರದ ಲೆಜೆಂಡ್ ಎಂದು ಕರೆಸಿಕೊಂಡಿರುವ ಪಾಪಮ್ಮಾಳ್ ತಮ್ಮ 2.5 ಎಕರೆ ಹೊಲದಲ್ಲಿ ಸಾವಯವ ಕೃಷಿ ಮಾಡಿ ಸಾಧನೆಗೈದಿದ್ದಾರೆ.
ಇನ್ನು ಡಿಎಂಕೆ ಸಕ್ರಿಯ ಸದಸ್ಯರಾಗಿರುವ ಪಾಪಮ್ಮಾಳ್ 1959ರಲ್ಲಿ ಪಂಚಾಯತ್ ಒಂದರಲ್ಲಿ ಕೌನ್ಸಿಲರ್ ಆಗಿದ್ದರು.
Discussion about this post