ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಜೆ ವಿಮಾನವೊಂದು ರನ್ವೇಯಲ್ಲಿ ಜಾರಿದ್ದು, ಪೈಲಟ್ ಸಮಯಪ್ರಜ್ಞೆಯಿಂದ ಭಾರಿ ಅವಘಡವೊಂದು ತಪ್ಪಿದೆ.
ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್- ಐಎಕ್ಸ್ 384 ವಿಮಾನ ಸಂಜೆ 5.20ಕ್ಕೆ ಲ್ಯಾಂಡ್ ಆಗಬೇಕಿತ್ತು. 183 ಪ್ರಯಾಣಿಕರನ್ನು ಹೊತ್ತು ತರುತ್ತಿದ್ದ ವಿಮಾನ ರನ್ ವೇಯಿಂದ ಹೊರ ಬಂದು ಟ್ಯಾಕ್ಸಿ ಮಾರ್ಗಕ್ಕೆ ಬಂದಿದೆ.ತಕ್ಷಣ ಎಚ್ಚೆತ್ತ ಪೈಲಟ್ ವಿಮಾನ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿಮಾನದಲ್ಲಿ 183 ಮಂದಿ ಪ್ರಯಾಣಿಕರಿದ್ದು, ವಿಮಾನ ಜಾರಿದ ಬಳಿಕ ಅಲ್ಲಿಂದ ಮುಂದಕ್ಕೆ ಚಲಿಸಲು ಸಾಧ್ಯವಾಗದ ಕಾರಣ ಅಲ್ಲೇ ನಿಂತಿದೆ. ಎಲ್ಲ ಪ್ರಯಾಣಿಕರನ್ನು ರನ್ವೇಯಲ್ಲೇ ಇಳಿಸಲಾಗಿದೆ.
2010ರ ಮೇ 22 ರಂದು ಮುಂಜಾನೆ ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ಅಪಘಾತಕ್ಕೀಡಾಗಿ 158 ಮಂದಿ ಮೃತಪಟ್ಟಿದ್ದರು.
Discussion about this post