ನವದೆಹಲಿ : ಈಗಾಗಲೇ 23 ಕೋಟಿ ಜನರಿಗೆ ಕೊರೋನಾ ಲಸಿಕೆ ಹಾಕಲಾಗಿದ್ದು, ಎಲ್ಲರಿಗೂ ಲಸಿಕೆ ಹಾಕಬೇಕು ಅನ್ನವ ಹೊತ್ತಿಗೆ ಕೊರೋನಾ ಸೋಂಕಿನ ಮತ್ತೊಂದು ಅಲೆ ನಮಗೆ ಶಾಕ್ ಕೊಟ್ಟಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ನಮಗೆ ನಮ್ಮ ವಿಜ್ಞಾನಿಗಳ ಮೇಲೆ ನಂಬಿಕೆ ಇತ್ತು, ಹೀಗಾಗಿ ಲಸಿಕಾ ಸಂಶೋಧನೆ ನಡೆಯುತ್ತಿರುವಂತೆಯೇ ಏಪ್ರಿಲ್ ನಲ್ಲೇ ಲಸಿಕಾ ಟಾಸ್ಕ್ ಫೋರ್ಸ್ ರಚನೆ ಮಾಡಿದೆವು, ಜೊತೆಗೆ ಲಸಿಕಾ ಹಂಚಿಕೆಗಾಗಿ ಯೋಜನೆಗಳನ್ನು ಸಿದ್ದ ಮಾಡಿಕೊಂಡೆವು ಅಂದಿದ್ದಾರೆ.
ಇದೇ ವೇಳೆ ಭಾರತ ಹೇಗೆ ಜನರನ್ನು ರಕ್ಷಿಸುತ್ತದೆ ಅನ್ನುವ ಆತಂಕ ವಿದೇಶಗಳಿತ್ತು. ಆದರೆ ನಾವು ಆಕ್ಸಿಜನ್ ರೈಲುಗಳನ್ನು ಬಿಟ್ಟೆವು, ವಾಯುಸೇನೆಯನ್ನು ಬಳಸಿಕೊಂಡು ಕೊರೋನಾ ವಿರುದ್ಧ ಹೋರಾಡಿದೆವು. ಹೀಗಾಗಿ ದೊಡ್ಡ ಮಟ್ಟದ ಅಪಾಯದಿಂದ ಪಾರಾದೆವು ಅಂದಿದ್ದಾರೆ.
ಇನ್ನು ಲಸಿಕೆ ಕುರಿತಂತೆ ಮಾತನಾಡಿದ ಅವರು, ಹಲವು ದೇಶಗಳಲ್ಲಿ ಲಸಿಕೆ ಸಂಶೋಧನೆ ನಡೆದರೂ ಲಸಿಕಾ ವಿತರಣೆ ಪ್ರಾರಂಭವಾಗಲಿಲ್ಲ. ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಕಟ್ಟಳಗಳೇ ಕಾರಣ. ಆದರೆ ಭಾರತದಲ್ಲಿ ಹಾಗಾಗಲಿಲ್ಲ, ಲಸಿಕಾ ಸಂಶೋಧನೆ ಯಶಸ್ವಿಯಾದ ಬೆನ್ನಲ್ಲೇ ಕೊರೋನಾ ವಾರಿಯರ್ಸ್ ಗಳಿಗೆ ಲಸಿಕೆ ನೀಡಿದೆವು. ಒಂದು ವೇಳೆ ಎರಡನೆ ಅಲೆಯ ಹೊತ್ತಿಗೆ ವೈದ್ಯರು ದಾದಿಯರು ಸೇರಿದಂತೆ ವಾರಿಯರ್ಸ್ ಗಳಿಗೆ ಲಸಿಕೆ ನೀಡದೆ ಇರುತ್ತಿದ್ರೆ ಏನಾಗುತ್ತಿದ್ದು ಎಂದು ಪ್ರಶ್ನಿಸಿದ ಮೋದಿ, ಕಾಂಗ್ರೆಸ್ ಗೆ ತಿರುಗೇಟು ಕೊಟ್ಟಿದ್ದಾರೆ.
ಮಕ್ಕಳ ಆರೋಗ್ಯದ ಬಗ್ಗೆ ಮಾತನಾಡಿದ ಪ್ರಧಾನಿಗಳು ಮಕ್ಕಳ ಸಲುವಾಗಿ 2 ಲಸಿಕೆಗಳ ಪ್ರಯೋಗ ನಡೆಯುತ್ತಿದೆ. ಶೀಘ್ರದಲ್ಲೇ ಅವುಗಳ ವಿತರಣೆಯೂ ಪ್ರಾರಂಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Discussion about this post