crossorigin="anonymous"> ಉನ್ನತ ಅಧಿಕಾರಿಯಾಗಬೇಕೆಂಬ ಕನಸು ಕಂಡ ಪ್ರಜ್ವಲ್ ಯಕ್ಷಗಾನ ಕಲಾವಿದನಾಗಿದ್ದು ಹೇಗೆ...? - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಉನ್ನತ ಅಧಿಕಾರಿಯಾಗಬೇಕೆಂಬ ಕನಸು ಕಂಡ ಪ್ರಜ್ವಲ್ ಯಕ್ಷಗಾನ ಕಲಾವಿದನಾಗಿದ್ದು ಹೇಗೆ…?

Radhakrishna Anegundi by Radhakrishna Anegundi
15-04-21, 7 : 13 pm
in ದಕ್ಷಿಣ ಕನ್ನಡ
Prajwal Kumar4
Share on FacebookShare on TwitterWhatsAppTelegram

” ಪ್ರಜ್ವಲ್ ” ಎಂಬ ಹೆಸರೇ ಯಕ್ಷರಂಗದಲ್ಲಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ ಹೆಸರು . ಹನುಮಗಿರಿ ಮೇಳದ  ತರುಣ ಕಲಾವಿದರಾದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ , ಸಣ್ಣ ಪ್ರಾಯದಲ್ಲೇ ದೊಡ್ಡ ಹೆಸರು ಮಾಡಿದ  ಅದ್ಭುತ ಕಲಾವಿದ .ಕೇವಲ 31 ವರ್ಷ ಪ್ರಾಯದ ಪ್ರಜ್ವಲ್ ಗಳಿಸಿದ ಹೆಸರು , ಪಡೆದ ವೇಗ , ಯಾರೂ ಊಹಿಸಲಾಗದ್ದು . ಗಜ ಮೇಳ ಎನಿಸಿದ  ಹನುಮಗಿರಿ ಮೇಳದ ಕಲಾವಿದನಾಗಿ, ಕೆಲವೊಮ್ಮೆ ತಮಗೆ ದೊರಕಿದ ಅತಿ ಸಣ್ಣ ಪಾತ್ರವನ್ನೇ ಹಿಗ್ಗಿಸಿ , ತನ್ನ ಸೃಜನಶೀಲತೆಯ ಕಲ್ಪನೆಯೊಂದಿಗೆ ” ಮುಖ್ಯ ಪಾತ್ರ ” ವಾಗಿ ಚಿತ್ರಿಸಿದ ಹಿರಿಮೆ ಈ ಪ್ರಜ್ವಲರದು .ಉತ್ತಮ ನಾಟ್ಯ , ಸಾಹಿತ್ಯ ಭರಿತವಾದ ಚುರುಕಿನ ಸಂಭಾಷಣೆ , ಹಾಸ್ಯರಸವನ್ನು ಸಂಭಾಷಣೆಯಲ್ಲಿ ಜೋಡಿಸುವ ವಾಗ್ವೈಖರಿಯಿಂದ ಪ್ರಜ್ವಲರು ಕಲಾಭಿಮಾನಿಗಳ ಮನ ಸೂರೆಗೊಳಿಸಿದ ಅಸಾಮಾನ್ಯ ಕಲಾವಿದರು . ಬಂಟ್ವಾಳ ಜಯರಾಮ ಆಚಾರ್ಯ , ಕಟೀಲು ಸೀತಾರಾಮ ಕುಮಾರ್ ರಂಥಹ ಸುಪ್ರಸಿದ್ಧ ಹಾಸ್ಯ ಕಲಾವಿದರಿರುವ ಹನುಮಗಿರಿ  ಮೇಳದಲ್ಲಿ , ಹಾಸ್ಯದಿಂದಲೇ ಪ್ರೇಕ್ಷಕರನ್ನು ಆಕರ್ಷಿಸುವುದೆಂದರೆ , ಅದು ಖಂಡಿತವಾಗಿಯೂ ಸುಲಭದ ಸಾಧನೆಯಲ್ಲ. ವಿಶೇಷವಾದ ಪ್ರತಿಭೆಯಿದ್ದಲ್ಲಿ ಮಾತ್ರ ಇದು ಸಾಧ್ಯ . ಈ ನಿಟ್ಟಿನಲ್ಲಿ ” ಉಜ್ವಲರಾಗಿ ಮೆರೆಯಲು ಪ್ರಜ್ವಲರದು ಕಠಿಣ ಸಾಧನೆಯೇ ಹೌದು . “

09.04 .1989ರಲ್ಲಿ ಗುರುವಾಯನಕೆರೆಯ ಬೇಬಿಶೆಟ್ಟಿ – ಸಂಪಾವತಿ ಶೆಡ್ತಿ ದಂಪತಿಗಳ ಸುಪುತ್ರರಾಗಿ ಜನಿಸಿದ ಪ್ರಜ್ವಲರು ಯಕ್ಷಗಾನ ಕಲಾವಿದನಾಗಿ ಪ್ರವೇಶಿಸಿದ್ದೇ ಆಕಸ್ಮಿಕವಾಗಿ.

Prajwal Kumar3

ಬಾಲ್ಯದಲ್ಲಿ ಚುರುಕಿನ ವಿದ್ಯಾರ್ಥಿಯಾಗಿ ಗುರುತಿಸಿಕೊಂಡಿದ್ದ ಪುಟ್ಟ ಬಾಲಕ ಪ್ರಜ್ವಲ್  ತಾನು ಸ್ನಾತಕೋತ್ತರ ಪದವಿ ಗಳಿಸಿ ಉನ್ನತ ಅಧಿಕಾರಿಯಾಗಬೇಕೆಂಬ ಕನಸು ಕಂಡವರು.ಆದರೆ , ಗುರುವಾಯನಕೆರೆಯ ಸುತ್ತಮುತ್ತ ಜರಗುತ್ತಿದ್ದ ಯಕ್ಷಗಾನ ಪ್ರದರ್ಶನ ನೋಡಿ  ನೋಡಿ  ತಾನೂ ಯಕ್ಷಗಾನ  ಕಲಾವಿದನಾಗಬೇಕೆಂಬ ಬಯಕೆ ಮೂಡಿತು . ಯಕ್ಷಗಾನದ ಯಾವುದೇ ಹಿನ್ನೆಲೆ ಇಲ್ಲದ ಕುಟುಂಬದಲ್ಲಿ ಜನಿಸಿದರೂ  ತನ್ನ 5 ನೇ ತರಗತಿ ಪೂರೈಸಿದ ಕೂಡಲೇ ಧರ್ಮಸ್ಥಳ ಯಕ್ಷಗಾನ ಕೇಂದ್ರ ಸೇರಿದರು . ಆಗ ಕೇಂದ್ರದಲ್ಲಿ ಗುರುಗಳಾದ ಸುಪ್ರಸಿದ್ಧ ಕಲಾವಿದರಾದ  ವರ್ಕಾಡಿ ತಾರಾನಾಥ ಬಲ್ಯಾಯರಲ್ಲಿ ಶಿಷ್ಯತ್ವ ಸ್ವೀಕರಿಸಿ , ಯಕ್ಷಗಾನದ ಪ್ರಾಥಮಿಕ ಹೆಜ್ಜೆ ಕಲಿತರು. ನಂತರ ದಿವಾಣ ಶಿವಶಂಕರ ಭಟ್ ಹಾಗೂ ಗೋವಿಂದ ಭಟ್ಟರಲ್ಲಿ ಹೆಚ್ಚಿನ ಅಭ್ಯಾಸ ಗಳಿಸಿ , ಧರ್ಮಸ್ಥಳ ಮೇಳ ಸೇರಿದರು.ಆಗ ಪ್ರಜ್ವಲರಿಗೆ ಕೇವಲ 12 ವರ್ಷ ಪ್ರಾಯ .ನಂತರ ಕಟೀಲು ಮೂರನೇ ಮೇಳ ಸೇರಿದರು .ಆಗ , ಮೂರನೇ ಮೇಳದ ಭಾಗವತರಾಗಿದ್ದವರು ಕುರಿಯ ಗಣಪತಿ ಶಾಸ್ತ್ರಿಯವರು . ” ರಂಗನಾಯಕ ”  ಎನಿಸಿದ ಕುರಿಯರ ಕೈಯಲ್ಲಿ ಯಕ್ಷರಂಗದ ನಡೆಯನ್ನು ಪೂರ್ಣ ತಿಳಿದುಕೊಂಡರು . ನಂತರ ಕುಂಟಾರು ಮೇಳ ಸೇರಿದರು .ಕುಂಟಾರು ಮೇಳದಲ್ಲಿ ಹೆಚ್ಚಾಗಿ ತುಳು ಪ್ರಸಂಗಗಳೇ ಪ್ರದರ್ಶನವಾಗುವ ಕಾರಣ , ಹಾಸ್ಯದತ್ತ ಒಲವು ಮೂಡಿತು .ಎರಡು ವರ್ಷ ಕುಂಟಾರು ಮೇಳದ ತಿರುಗಾಟ ನಡೆಸಿ , ಎಡನೀರು ಸ್ವಾಮೀಜಿಯವರ ಎಡನೀರು ಮೇಳದಲ್ಲಿ ಎರಡು ವರ್ಷಗಳ ತಿರುಗಾಟ ನಡೆಸಿ ,ನಂತರ  ಹೊಸನಗರ ಮೇಳ ಸೇರಿದರು . 9 ವರ್ಷ ಹೊಸನಗರ ಮೇಳದಲ್ಲಿ ಕಲಾಸೇವೆ ಮಾಡಿ , ನಂತರ  ಹೊಸನಗರ ಮೇಳವು ಎಡನೀರು -2 ನೇ ಮೇಳವಾಗಿ ಪರಿವರ್ತನೆ ಹೊಂದಿದಾಗ  ಎಡನೀರು ಮೇಳದಲ್ಲಿ ಎರಡು ವರ್ಷ ಹಾಗೂ ಪ್ರಸ್ತುತ ಅದೇ ಮೇಳವು ಹನುಮಗಿರಿ ಮೇಳವಾಗಿ ಪರಿವರ್ತನೆಗೊಂಡು ಅದೇ ಮೇಳದಲ್ಲಿ  ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ .

Prajwal Kumar2

 ಪ್ರಜ್ವಲ್ ಒಬ್ಬ ಅದ್ಭುತ , ಸೃಜನಶೀಲ ಕಲಾವಿದ . ಯಾವುದೇ ಪಾತ್ರಗಳನ್ನಾದರೂ ಸಮರ್ಥವಾಗಿ ನಿರ್ವಹಿಸಬಲ್ಲ ಕಲಾಕಾರ ರಾಜವೇಷ , ಸ್ತ್ರೀಪಾತ್ರ , ಬಣ್ಣದ ವೇಷ , ಹಾಸ್ಯಪಾತ್ರ – ಹೀಗೆ ಯಕ್ಷಗಾನದ ಎಲ್ಲಾ ವೇಷಗಳನ್ನು ನಿರ್ವಹಿಸಬಲ್ಲ ” ಮುಮ್ಮೇಳದ  ಸವ್ಯಸಾಚಿ ” . ಆದರೂ , ಪ್ರಜ್ವಲರ ಪಾತ್ರಗಳಲ್ಲಿ ಹಾಸ್ಯರಸವೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಗಮನಾರ್ಹ .ಪ್ರೇಕ್ಷಕರೂ  ಪ್ರಜ್ವಲರಿಂದ ಇದನ್ನೇ ಬಯಸುತ್ತಿದ್ದಾರೆ . ಯಾವುದೇ ಪಾತ್ರಗಳೇ ದೊರಕಲಿ, ಆ ಪಾತ್ರಗಳನ್ನು ಚೆನ್ನಾಗಿ ಚಿತ್ರಿಸುತ್ತಾರೆ . ಹನುಮಗಿರಿ  ಮೇಳವು ಸುಪ್ರಸಿದ್ಧ ಕಲಾವಿದರ ಗಡಣವೇ ಆದ ಕಾರಣ , ಕೆಲವೊಂದು ಪ್ರಸಂಗಗಳಲ್ಲಿ ಪ್ರಜ್ವಲರಿಗೆ ಸಣ್ಣ ಪಾತ್ರಗಳೇ ದೊರಕುವುದು .

ಆದರೂ , ಆ ಸಣ್ಣ ಪಾತ್ರಗಳೇ ಪ್ರೇಕ್ಷಕರ ಮನಸ್ಸಲ್ಲಿ ಮೂಡುವಂತೆ ಪ್ರಜ್ವಲರು ನಿರ್ವಹಿಸುತ್ತಾರೆ  .ತಾನು ನಿರ್ವಹಿಸುತ್ತಿದ್ದ ಪಾತ್ರಗಳು ಪ್ರೇಕ್ಷಕರ ಮನಸ್ಸಲ್ಲಿ ಉಳಿಯುವಂಥಹ ಚಿತ್ರಣ ನೀಡುವುದು ಪ್ರಜ್ವಲರ ವಿಶೇಷತೆ .

Prajwal Kumar1

 ಪ್ರಜ್ವಲ್ ಪ್ರತ್ಯುತ್ಪನ್ನಮತಿಯುಳ್ಳ ಕಲಾವಿದ .ಹಾಸ್ಯ ಹಾಗೂ ವಿತಂಡವಾದ ಮಾಡಲು ಅವಕಾಶ ಇರುವ ಪಾತ್ರಗಳು ಪ್ರಜ್ವಲರಿಗೆ ದೊರಕಿದಲ್ಲಿ , ಅಂದು ಪ್ರೇಕ್ಷಕರಿಗೆ ರಸದೌತಣ .ಪ್ರಜ್ವಲರ  ಕೌರವ , ರಾವಣ , ಸುಗ್ರೀವ , ವಿದ್ಯುನ್ಮಾಲಿ, ದುಃಶಾಸನ , ಆಕಾಶರಾಯ , ಬೃಹನ್ನಳೆ , ದಿತಿದೇವಿಯ ದೂತ ,  ಜಾಂಬವ , ಮುಂತಾದ ಪಾತ್ರಗಳು  ಪ್ರೇಕ್ಷಕರಿಗೆ ರಂಜನೆ ಒದಗಿಸುತ್ತಿವೆ  ಮಾತ್ರವಲ್ಲದೇ ಅಪಾರ  ಪ್ರಸಿದ್ಧಿಯನ್ನೂ  ತಂದ ಪಾತ್ರಗಳು.  ಪ್ರಜ್ವಲ್ ಕುಮಾರ್ ಯಾವುದೇ ಪಾತ್ರಗಳನ್ನು ಮಾಡಬಲ್ಲವರಾದರೂ ಅವರಿಗೆ ಹೆಸರು ತಂದುಕೊಟ್ಟದ್ದು ಹಾಸ್ಯಮಿಶ್ರಿತ ಪಾತ್ರಗಳು .ಅದರಲ್ಲೂ  ಕೌರವ , ಸಾಲ್ವ , ಭೀಮ , ಅರ್ಜುನ ಮುಂತಾದ  ಪಾತ್ರಗಳ ನಿರ್ವಹಣೆಯಲ್ಲಿ  ತೆಂಕುತಿಟ್ಟಿನ ಸುಪ್ರಸಿದ್ಧ ಯಕ್ಷಗಾನ ಕಲಾವಿದರಾದ ದಿ.ಎಂಪೆಕಟ್ಟೆ ರಾಮಯ್ಯ ರೈಯವರ ಛಾಯೆ ಕಾಣುತ್ತಿರುವುದು ಉಲ್ಲೇಖನೀಯ . ” ಪ್ರಜ್ವಲರು ಇನ್ನಷ್ಟು ಸಾಧಿಸಲು ಯಶಸ್ವಿಯಾದರೆ  ದಿ. ಎಂಪೆಕಟ್ಟೆ ರಾಮಯ್ಯ ರೈ ಎಂಬ ವಿಶಿಷ್ಟ ಯಕ್ಷಗಾನ ಕಲಾವಿದರ ಸಮರ್ಥ ಉತ್ತರಾಧಿಕಾರಿಯಾಗುವ ಸಾಧ್ಯತೆ ಅಲ್ಲಗಳೆಯಲಾಗದು .”  ( ಪ್ರಜ್ವಲರು ಎಂಪೆಕಟ್ಟೆಯವರ ಪಾತ್ರ ನೋಡಿರಲಿಕ್ಕಿಲ್ಲ ) ಭಕ್ತಪ್ರಹ್ಲಾದ , ಮಾನಿಷಾದ , ಮಹಾಬ್ರಾಹ್ಮಣ  ಪ್ರಸಂಗಗಳಲ್ಲಿ ಬರುವ ಶಿಷ್ಯನ ಪಾತ್ರವಂತೂ ಪ್ರಜ್ವಲರ ಪ್ರತಿಭೆಯನ್ನು ಒರೆಗಲ್ಲಿಗೆ ಹಚ್ಚಿದ ಪಾತ್ರ . ತಮ್ಮದೇ ಕಲ್ಪನೆಯ  ” ಹೆಡ್ಡನಾದರೂ ಬುದ್ಧಿವಂತ ”  ಶಿಷ್ಯನ ಪಾತ್ರ ಯಾವತ್ತೂ ಮರೆಯಲಾಗದಂತಹುದು . ಬೇಟೆಗಾರರ ಪಡೆ , ರಾಕ್ಷಸ ದೂತ , ಅನುಕೂಲ ಸ್ತ್ರೀ , ಗೌಡ  ಮುಂತಾದ ಪಾತ್ರಗಳಲ್ಲಿ ಉತ್ತಮ ಹಾಸ್ಯದ ಮೂಲಕ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ  ನಗಿಸುವುದು ಪ್ರಜ್ವಲರ ಪ್ರತ್ಯುತ್ಪನ್ನಮತಿಗೆ  ಉತ್ತಮ  ನಿದರ್ಶನಗಳು .

” ಶ್ರೀನಿವಾಸ ಕಲ್ಯಾಣ ”  ದಲ್ಲಿಯ ಆಕಾಶರಾಯ ಪಾತ್ರಕ್ಕೆ ಹಾಸ್ಯದ ಲೇಪನದೊಂದಿಗೆ ವಿಶಿಷ್ಠವಾದ ಚಿತ್ರಣ ನೀಡಿ, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡುವಂತೆ ಮಾಡುತ್ತಾರೆ .( ಯತಾರ್ಥಕ್ಕಾದರೆ ಆಕಾಶರಾಯ ಪೋಷಕಪಾತ್ರ . ಸುರತ್ಕಲ್ ಮೇಳದಲ್ಲಿ ತೆಕ್ಕಟ್ಟೆ ಆನಂದ ಮಾಸ್ತರರು ಗಾಂಭೀರ್ಯದಿಂದ ನಿರ್ವಹಿಸಿ ಈ ಪಾತ್ರಕ್ಕೆ ಘನತೆ ತಂದುಕೊಟ್ಟಿದ್ದರು .ಆದರೆ ತೆಕ್ಕಟ್ಟೆಯವರು ಈ  ಪಾತ್ರ ಮಾಡುವ ಸಮಯದಲ್ಲಿ ಪ್ರಜ್ವಲರು ಯಕ್ಷರಂಗವನ್ನೇ ಪ್ರವೇಶಿಸಿರಲಿಲ್ಲದ ಕಾರಣ , ತೆಕ್ಕಟ್ಟೆಯವರ ಪಾತ್ರ ನೋಡಿರುವ ಸಂಭವವೇ  ಇಲ್ಲ  .ಆದ ಕಾರಣ ಪ್ರಜ್ವಲರು  ಆಕಾಶರಾಯ ಪಾತ್ರಕ್ಕೆ ಹಾಸ್ಯಮಿಶ್ರಿತವಾಗಿ ತಮ್ಮದೇ ಆದ  ಚಿತ್ರಣ ನೀಡಿದ್ದಾರೆ .) ಹನುಮಗಿರಿ  ಮೇಳದ ಕಲಾವಿದರು ಪ್ರಜ್ವಲರ ಆಕಾಶರಾಯನ ಪಾತ್ರ ಎಷ್ಟೋ ಭಾರಿ ನೋಡಿರಬಹುದು .ಆದರೂ , ಇಂದಿಗೂ ಪ್ರಜ್ವಲರ ಆಕಾಶರಾಯ ಪಾತ್ರ ರಂಗಸ್ಥಳಕ್ಕೆ ಹೋದಾಗ ಮೇಳದ ಕಲಾವಿದರು ವೇದಿಕೆಯ ಹಿಂದಿನಿಂದ ಪ್ರಜ್ವಲರ ಪಾತ್ರ ತಪ್ಪದೇ  ನೋಡುತ್ತಾರೆ . ಮೇಳದ ಇತರ ಕಲಾವಿದರೂ ಪ್ರಜ್ವಲರ ಯಾವುದೇ  ಪಾತ್ರ ತಮ್ಮ ಎದುರಾಗಿ ಬಂದಾಗ , ಪ್ರಜ್ವಲರನ್ನು ಇನ್ನಷ್ಟು ಕೆಣಕಿ , ಹಾಸ್ಯಕ್ಕೆ ಪ್ರೋತ್ಸಾಹಿಸುತ್ತಾರೆ .ದಿ.ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟರು ಪ್ರಜ್ವಲರ ಪಾತ್ರಗಳೊಂದಿಗೆ ಹಾಸ್ಯಮಯವಾಗಿಯೇ ಸಂಭಾಷಿಸುತ್ತಿದ್ದರು. ಶಿವರಾಮ ಜೋಗಿ , ಶೀನಪ್ಪ ರೈ , ವಾಸುದೇವ ರಂಗಾಭಟ್ , ಪೆರ್ಮುದೆ ,  ಹೊಳ್ಳ ,  ಬಂಟ್ವಾಳ , ಸೀತರಾಮ ಕುಮಾರ್ , ಶೆಟ್ಟಿಗಾರ್ , ಜಗದಾಭಿ , ಜಯಾನಂದ , ದಿವಾಕರ ರೈ , ವೇಣೂರು , ಪೆರ್ಲ , ಹಿಲಿಯಾಣ ,ರಕ್ಷಿತ್ ಮುಂತಾದ ಎಲ್ಲಾ  ಕಲಾವಿದರೂ ಪ್ರಜ್ವಲರ ಪಾತ್ರಗಳು ಎದುರಾಗಿ ಬಂದಾಗ ಚೆನ್ನಾಗಿ ಸಂಭಾಷಿಸಿ ಪ್ರಸಂಗವು ಹಾಸ್ಯದ ರಸೋತ್ಕರ್ಷಕ್ಕೆ ತಲುಪಲು ಪೂರಕವಾಗಿದ್ದಾರೆ . ಹಿಮ್ಮೇಳದವರೂ ಪ್ರಜ್ವಲರ ಹಾಸ್ಯರಸಕ್ಕೆ ಸ್ಪಂದಿಸಿ ಪ್ರೋತ್ಸಾಹಿಸುತ್ತಿರುವುದು ಗಮನಾರ್ಹ . ನಾಲ್ಕು ವರ್ಷಗಳ  ಹಿಂದೆ  ದಿ.ಚೆನ್ನಪ್ಪ ಶೆಟ್ಟರ ಸಂಸ್ಮರಣೆಯ ಯಕ್ಷಗಾನ ಪ್ರದರ್ಶನದಲ್ಲಿ ಪೆರ್ಮುದೆಯವರ ಕರ್ಣನ ಎದುರು ಅತೀಸಣ್ಣ ಪಾತ್ರವಾದ  ” ಸರ್ಪಾಸ್ತ್ರ ”  ನಿರ್ವಹಿಸಿ , ಸುಮಾರು ಅರ್ಧ ಘಂಟೆಗಳ ಕಾಲ ಪೆರ್ಮುದೆಯವರೊಂದಿಗೆ ಸಂಭಾಷಿಸಿ  ಪ್ರೇಕ್ಷಕರನ್ನು ರಂಜಿಸಿ , ಗುರುಗಳ ಸಂಸ್ಮರಣೆಗಾಗಿ ( ಚೆನ್ನಪ್ಪ ಶೆಟ್ಟರು ) ಇಷ್ಟೆಲ್ಲಾ ಮಾತಾಡಿದ್ಧೆ ಎಂದು ಹೇಳಿ ಪ್ರೇಕ್ಷಕರ  ಕರತಾಡನದ ಮೆಚ್ಚುಗೆ ಪಡೆದಿದ್ದರು . ‌ಶಲ್ಯನಾಗಿ ರಂಗಾಭಟ್ಟರೂ ಚೆನ್ನಾಗಿ ಸ್ಪಂದಿಸಿದ್ದರು .ಉತ್ತಮ ಮಾತುಗಾರರೂ ಆಗಿರುವ ಪ್ರಜ್ವಲರು  ಶುಂಭ , ವಿದ್ಯುನ್ಮಾಲಿ ಮುಂತಾದ ಗಂಭೀರ ಪಾತ್ರಗಳಲ್ಲಿ ಹಾಸ್ಯ ಬಾರದಂತೆ ವೀರರಸವನ್ನೂ ಅಷ್ಟೇ ಚೆನ್ನಾಗಿ ನಿರ್ವಹಿಸುತ್ತಾರೆ . ಇವರ ಚಕ್ರವ್ಯೂಹದ  ದುಃಶಾಸನ ಪಾತ್ರ ಅತ್ಯಂತ ಜನಪ್ರಿಯ .ಇದಕ್ಕೆ  ಕಾರಣ  , ” ದ್ರೌಪದಿ ವಸ್ತ್ರಾಪಹಾರ ”  ಪ್ರಸಂಗದ  ದುಃಶಾಸನ ಪಾತ್ರದಲ್ಲಿ ಸುಪ್ರಸಿದ್ಧರಾಗಿರುವ ಅರುವ ಕೊರಗಪ್ಪ ಶೆಟ್ಟರ ಅನುಕರಣೆ ಮಾಡಿ ಅರುವದವರ ನೆನಪು ಬರುವಂತೆ ಮಾಡುತ್ತಿರುವುದು .ಒಮ್ಮೆ ಮಂಗಳೂರು ಪುರಭವನದಲ್ಲಿ ಅರುವದವರ ಪಾತ್ರಕ್ಕೆ ಎದುರಾಗಿ , ಅರುವದವರದ್ದೇ  ಅನುಕರಣೆ ಮಾಡಿದಾಗ  ಅರುವದವರೇ ಮೆಚ್ಚಿದ್ದರು . ಇತ್ತೀಚೆಗೆ ತಾಳಮದ್ದಳೆ ಕೂಟಗಳಲ್ಲೂ ಕಾಣಿಸಿಕೊಳ್ಳುತ್ತಿರುವ ಪ್ರಜ್ವಲ್ ಈ ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ .

ಎಂ.ಶಾಂತರಾಮ ಕುಡ್ವ ಮೂಡಬಿದಿರೆ

Tags: yakshagana
Share1TweetSendShare

Discussion about this post

Related News

ಆಯುಷ್ಮಾನ್ ಭಾರತ್ ಯೋಜನೆ ದಕ ಜಿಲ್ಲೆಗೆ ೨೫ ಕೋಟಿ ೧೧ ಲಕ್ಷ ರೂಪಾಯಿ ಅನುದಾನ

ಆಯುಷ್ಮಾನ್ ಭಾರತ್ ಯೋಜನೆ ದಕ ಜಿಲ್ಲೆಗೆ ೨೫ ಕೋಟಿ ೧೧ ಲಕ್ಷ ರೂಪಾಯಿ ಅನುದಾನ

ನಾಳೆಯಿಂದ 6,7,8 ನೇ ತರಗತಿ ಪ್ರಾರಂಭ : ವಿದ್ಯಾರ್ಥಿಗಳ ಸ್ವಾಗತಕ್ಕೆ ಸಜ್ಜಾದ ಶಾಲೆಗಳು

ಕರಾವಳಿಯಲ್ಲಿ ಮಳೆಯ ಅಬ್ಬರ : ನಾಳೆ ಜುಲೈ 09ಕ್ಕೆ ಶಾಲಾ ಕಾಲೇಜುಗಳಿಗೆ ರಜೆ

Dose Mela in refresh cafe puttur three days

ಪುತ್ತೂರಿನಲ್ಲಿ ದೋಸೆ ಮೇಳ : ಮೂರು ದಿನಗಳ ಕಾಲ ನಡೆಯಲಿದೆ ದೋಸೆ ಜಾತ್ರೆ

ಸಾಮಾಜಿಕ ಹೋರಾಟಗಾರ ಕಾಂಗ್ರೆಸ್ ಮುಖಂಡ ಪದ್ಮನಾಭ ನರಿಂಗಾನ ಇನ್ನಿಲ್ಲ

ಅರುಣ್ ಪುತ್ತಿಲ ವಿರುದ್ಧ ತೊಡೆ ತಟ್ಟಿದ ಸಂಜೀವ ಮಠಂದೂರು

ಪುತ್ತಿಲ ಬಿಜೆಪಿಗೆ ಬಂದ್ರೆ ಕರಾವಳಿಯಲ್ಲಿ ಕಾಂಗ್ರೆಸ್ ಗೆ ಸಂಕಷ್ಟ…?

ಹತ್ತೂರ ಒಡೆಯನ ಸನ್ನಿಧಿಯ ಅಭಿವೃದ್ಧಿಗೆ 2 ಕೋಟಿ ರೂ ಅನುದಾನ ತಂದ ಅಶೋಕ್ ರೈ

ಉಗ್ರರ ವಿರುದ್ಧ ಕಾರ್ಯಾಚರಣೆ : ಮಂಗಳೂರಿನ ಕ್ಯಾಪ್ಟನ್ ಎಂವಿ ಪ್ರಾಂಜಲ್ ( mv pranjal ) ಸೇರಿ ನಾಲ್ವರು ಹುತಾತ್ಮ

Yakshagana : ಲೀಲಾವತಿಯವರಿಗೆ leelavathi baipadithaya ಪ್ರಶಸ್ತಿ ಒಲಿದಿದ್ದು ಹೇಗೆ…. ಮಗ ಬಿಚ್ಚಿಟ್ಟ ರಹಸ್ಯ

ಕೊರಗಜ್ಜ koragajja ಸಿನಿಮಾಗೆ ಸಂಕಷ್ಟ : ಕಳಸದಲ್ಲಿ ನಡೆದ ಕಿರಿಕ್ ನ ಅಸಲಿ ಕಥೆಯೇನು

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್