ಬೆಂಗಳೂರು : ಬಿಗ್ ಬಾಸ್ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಪ್ರತಿಸ್ಪರ್ಧಿ ಚಾನೆಲ್ ಗಳನ್ನು ಟಿ.ಆರ್.ಪಿ ಹೋರಾಟದಲ್ಲಿ ಸೋಲಿಸಬೇಕಾಗಿರುವ ಒತ್ತಡದಲ್ಲಿ ಸಿಲುಕಿರುವ ಕಲರ್ಸ್ ವಾಹಿನಿ ಸರ್ಕಸ್ ಪ್ರಾರಂಭಿಸಿದೆ.
ಹೀಗಾಗಿಯೇ ಬಿಗ್ ಬಾಸ್ ಮನೆಗೆ ರಾಜಕೀಯ ವ್ಯಕ್ತಿ ಅನ್ನುವ ಪಟ್ಟ ಕಟ್ಟಿ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಅವರನ್ನು ಕರೆಸಿಕೊಳ್ಳಲಾಗಿದೆ.
ಈ ಹಿಂದೆ ಅರ್ಜುನ್ ಸರ್ಜಾ ವಿರುದ್ಧ ಮೀಟೂ ಆರೋಪ ಕೇಳಿ ಬಂದ ಸಂದರ್ಭದಲ್ಲಿ ಶೃತಿ ಹರಿಹರನ್ ವಿರುದ್ಧ ನಿಂತವರು ಇದೇ ಪ್ರಶಾಂತ್ ಸಂಬರಗಿ.
ಚಂದನವನದ ಡ್ರಗ್ಸ್ ಪ್ರಕರಣ ಸುದ್ದಿಯಾದ ಸಂದರ್ಭದಲ್ಲಿ ಹಲವು ವ್ಯಕ್ತಿಗಳ ಹೆಸರನ್ನು ಬಹಿರಂಗಗೊಳಿಸಿದವರು ಪ್ರಶಾಂತ್ ಸಂಬರಗಿ.
ಶಾಸಕ ಜಮೀರ್ ಕುರಿತಾಗಿ ಅನೇಕ ಸ್ಪೋಟಕ ಮಾಹಿತಿಗಳನ್ನು ಕೊಟ್ಟ ಸಂಬರಗಿ ಒಂದಿಷ್ಟು ವಾರಗಳ ಕಾಲ ನ್ಯೂಸ್ ಚಾನೆಲ್ ಗಳಲ್ಲಿ ಸದಾ ಹೆಡ್ ಲೈನ್ ಆಗಿದ್ದರು.
ಸಂಜನಾ ವಿಚಾರದಲ್ಲಿ, ಪ್ರಶಾಂತ್ ಸಂಬರಗಿ ಕೊಟ್ಟ ಮಾಹಿತಿಗಳು ವೈರಲ್ ಆಗಿತ್ತು.
ಇದೀಗ ಬಿಗ್ ಬಾಸ್ ಮನೆಗೆ ಹೋದ ಮೇಲೆ ಅವರು ಹೆಡ್ ಲೈನ್ ಆಗದಿರಲು ಸಾಧ್ಯವೇ. ಹೆಡ್ ಲೈನ್ ಆಗಲೇಬೇಕು ಅನ್ನುವ ಕಾರಣಕ್ಕಾಗಿ ಅವರನ್ನು ಬಿಗ್ ಬಾಸ್ ಮನೆಗೆ ಸೇರಿಸಲಾಗಿದೆ.
ಹೇಳಿ ಕೇಳಿ ಬಿಗ್ ಬಾಸ್ ಕ್ವಾಂಟ್ರವರ್ಸಿ ಕಾರ್ಯಕ್ರಮ, ಮನೆಯಲ್ಲಿ ಗಲಾಟೆ, ಜಡೆ ಜಗಳವಿಲ್ಲದಿದ್ರೆ ಆ ಕಾರ್ಯಕ್ರಮ ಹಿಟ್ ಆಗೋದಿಲ್ಲ.
ಈ ಕಾರಣದಿಂದಲೇ ಮನೆಯಲ್ಲಿ ಬೆಂಕಿ ಹಚ್ಚಲೆಂದು ಹೋಗಿರುವ ಸಂಬರಗಿ ಮೊದಲ ದಿನವೇ ವಿವಾದ ಎಬ್ಬಿಸುತ್ತಾರೆ ಎನ್ನಲಾಗಿದೆ.
Discussion about this post