ನಟಿ ಜಯಶ್ರಿ ಸಾವಿಗೆ ಅವರ ಖಿನ್ನತೆಯೇ ಕಾರಣ, ಬಾಲ್ಯದಿಂದಲೇ ಅವರ ಮನಸ್ಸಿಗೆ ಆಗಿರುವ ಆಘಾತದಿಂದ ಅವರು ಹೊರ ಬರಲಾರದೇ ಒದ್ದಾಡುತ್ತಿದ್ದರು. ಜೊತೆಗೆ ಅವರನ್ನು ಸುತ್ತಿಕೊಂಡ ಕುಟುಂಬ ಕಲಹ ಅವರನ್ನು ಜರ್ಜರಿತರನ್ನಾಗಿ ಮಾಡಿತ್ತು. ಹೀಗಾಗಿ ಎಲ್ಲವನ್ನೂ ನಿಭಾಯಿಸಲಾಗದೇ ಜಯಶ್ರೀ ಇಹಲೋಕ ತ್ಯಜಿಸಿದ್ದಾರೆ.
ಆದರೆ ಇದೀಗ ಅವರ ಸಾವಿಗೆ ಕಥೆ ಕಟ್ಟುವ ಕೆಲಸ ಪ್ರಾರಂಭವಾಗಿದೆ. ಅದರಲ್ಲಿ ಮುಂಚೂಣಿಯಲ್ಲಿರುವುದು ಪ್ರಶಾಂಕ್ ಸಂಬರಗಿ.

ಈಗಾಗಲೇ ಚಂದನವನದ ಡ್ರಗ್ಸ್ ದಂಧೆ ಕುರಿತಂತೆ ಸ್ಟೋಟಕ ಮಾಹಿತಿ ಕೊಡುವುದಾಗಿ ಹೇಳಿದ್ದ ಸಂಬರಗಿ ಠುಸ್ ಪಟಾಕಿಯಾಗಿದ್ದಾರೆ. ಸಿಸಿಬಿ ಅಧಿಕಾರಿಗಳಿಗೆ ಮಹತ್ತರ ಮಾಹಿತಿ ಕೊಡುವುದಾಗಿ ಹೇಳಿದ್ದ ಸಂಬರಗಿ ಇನ್ನೂ ಮಾಹಿತಿ ಕೊಡುವುದರಲ್ಲೇ ಇದ್ದಾರೆ.

ಈ ನಡುವೆ ಜಯಶ್ರೀ ಸಾವಿನ ಕುರಿತಂತೆ ಪೋಸ್ಟ್ ಮಾಡಿದ್ದ ಸಂಬರಗಿ, ‘ಡ್ರಗ್ಸ್ ಮತ್ತು ಖಿನ್ನತೆ ಮತ್ತೊಂದು ಯುವ ಜೀವವನ್ನು ಬಲಿ ಪಡೆದಿದೆ ಅಂದಿದ್ದರು. ಯಾವಾಗ ಜನ ತಿರುಗಿ ಬಿದ್ದರೋ ಡ್ರಗ್ಸ್ ಪದ ತೆಗೆದು ಖಿನ್ನತೆ ಉಳಿಸಿಕೊಂಡು … ಖಿನ್ನತೆ ಮತ್ತೊಂದು ಯುವ ಜೀವವನ್ನು ಬಲಿ ಪಡೆದಿದೆ ಎಂದು ಬರೆದಿದ್ದಾರೆ.
Discussion about this post