ಬೆಂಗಳೂರು : ಹೊಂಬಾಳೆ ಫಿಲ್ಮಂಸ್ ಚಂದನವನದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ನಿರ್ಮಾಣ ಸಂಸ್ಥೆ. ಮುಟ್ಟಿದೆಲ್ಲಾ ಚಿನ್ನ ಅನ್ನುವುದಕ್ಕಿಂತ ಚಿನ್ನ ಆಗಬಹುದಾದ ಪ್ರಾಜೆಕ್ಟ್ ಗಳನ್ನೇ ವಿಜಯ್ ಕಿರಗಂದೂರು ಕೈಗೆತ್ತಿಕೊಳ್ಳುತ್ತಿದ್ದಾರೆ. 2014ರಲ್ಲಿ ನಿನ್ನಿಂದಲೇ ಅನ್ನುವ ಸಿನಿಮಾ ಮೂಲಕ ಚಿತ್ರ ನಿರ್ಮಾಣ ಪ್ರಾರಂಭಿಸಿದ ಸಂಸ್ಥೆ ಮಾಸ್ಟರ್ ಪೀಸ್, ರಾಜಕುಮಾರ, ಕೆಜಿಎಫ್, ಯುವರತ್ನ, ಸಂಸ್ಥೆಯ ಸಕ್ಸಸ್ ಸಿನಿಮಾಗಳು. ಸಾಲಾರ್, ಬಂಘೀರ, ದ್ವಿತ್ವ, ರಿಚರ್ಡ್ ಅಂಟೋನಿ ನಿಮಾಣ ಹಂತದಲ್ಲಿರುವ ಸಿನಿಮಾಗಳಾಗಿವೆ.
ಇದೀಗ ಹೊಂಬಾಳೆ ಫಿಲ್ಮಂಸ್ ನ 11ನೇ ಸಿನಿಮಾ ನಾಳೆ ಘೋಷಣೆಯಾಗಲಿದ್ದು, ಈ ಬಗ್ಗೆ ಟ್ವೀಟರ್ ನಲ್ಲಿರುವ ಹಾಕಿರುವ ಪೋಸ್ಟ್ ಕುತೂಹಲ ಕೆರಳಿಸಿದೆ. ನಿಮ್ಮೊಳಗಿನ ಕಿಚ್ಚು ನಿಮ್ಮನ್ನು ಸುಡದಿರಲಿ ಎಂದು ಬರೆದುಕೊಂಡಿರುವ ಪೋಸ್ಟ್ ನೋಡಿದರೆ, ಕಿಚ್ಚ ಸುದೀಪ್ ಹೊಂಬಾಳೆ ಫಿಲ್ಮಂಸ್ ಜೊತೆ ಕೈ ಜೋಡಿಸಲಿದ್ದಾರೆ ಅನ್ನಿಸುತ್ತಿದೆ.
ಈಗಾಗಲೇ ಯಶ್, ಪುನೀತ್ ರಾಜ್ ಕುಮಾರ್, ಶ್ರೀಮುರಳಿ, ರಕ್ಷಿತ್ ಶೆಟ್ಟಿ ಜೊತೆಗೆ ಕೆಲಸ ಮಾಡುತ್ತಿರುವ ನಿರ್ಮಾಪಕ ವಿಜಯ್ ಕಿರಗಂದೂರು ಸುದೀಪ್ ಅವರನ್ನು ಹೊಂಬಾಳೆಗೆ ಬರಮಾಡಿಕೊಂಡಂತೆ ಕಾಣಿಸುತ್ತಿದೆ.
Discussion about this post